ಶರದ್ ಪವಾರ್ ರಾಷ್ಟ್ರಪತಿ ಆಗಲಿ: ಸಂಜಯ್ ರಾವತ್
Team Udayavani, Jan 7, 2020, 1:16 AM IST
ಮುಂಬಯಿ: ಪ್ರಸಕ್ತ ವರ್ಷ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ವೇಳೆ ಎಲ್ಲ ರಾಜಕೀಯ ಪಕ್ಷಗಳೂ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಹೆಸರನ್ನೇ ಪರಿಗಣಿಸಬೇಕು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಪವಾರ್ ಅವರು ನಮ್ಮ ದೇಶದ ಹಿರಿಯ ನಾಯಕ. ಎಲ್ಲರೂ ಒಮ್ಮತದಿಂದ ಅವರ ಹೆಸರನ್ನೇ ಅಂತಿಮಗೊಳಿಸಬೇಕು ಎನ್ನುವುದು ನನ್ನ ಅಭಿಲಾಷೆ. ಅಲ್ಲದೆ, ಈ ಬಾರಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸುವಷ್ಟು ಸಂಖ್ಯಾಬಲ ನಮ್ಮಲ್ಲಿರಲಿದೆ ಎಂದೂ ರಾವತ್ ಹೇಳಿದ್ದಾರೆ.