ಉದ್ಯಮಿ ವಿಜಯ ಮಲ್ಯಗೆ ‘ಸುಪ್ರೀಂ’ ಚಾಟಿ
Team Udayavani, Jan 7, 2020, 1:04 AM IST
ಹೊಸದಿಲ್ಲಿ: ದಿವಾಳಿ ಕಾಯ್ದೆ ಅನ್ವಯ ಉದ್ಯಮಿ ವಿಜಯ ಮಲ್ಯ ಮತ್ತು ಆತನ ಬಂಧುಗಳ ಆಸ್ತಿ ಜಪ್ತಿ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿ ತಡೆಯಲು ಪ್ರಯತ್ನಿಸುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠ ಸೋಮವಾರ ಹೇಳಿದೆ.
ಕೋರ್ಟ್ಗಳಲ್ಲಿ ಅವರ ವಿರುದ್ಧದ ಮೊಕದ್ದಮೆಗಳು ವಿಚಾರಣೆಯ ಹಂತದಲ್ಲಿ ಇವೆ ಎಂಬ ಕಾರಣಕ್ಕಾಗಿ ಮಲ್ಯ ಈ ರೀತಿಯ ಕ್ರಮಕ್ಕೆ ಮುಂದಾಗುವಂತೆ ಇಲ್ಲ ಎಂದಿದೆ ನ್ಯಾಯಪೀಠ. ಬಂಧುಗಳು ಮತ್ತು ತಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಾರದು ಎಂದು ಕಳೆದ ವರ್ಷದ ಜೂ. 27ರಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.