ಕಸಬ್ ಅಂದ್ರೆ ಕಂಪ್ಯೂಟರ್,ಸ್ಮಾರ್ಟ್ಫೋನ್, ಮಕ್ಕಳು
Team Udayavani, Feb 27, 2017, 10:26 AM IST
ಲಕ್ನೋ: ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿಯನ್ನು “ಕಸಬ್’ ಎಂದು ಕರೆದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಿರುಗೇಟು ನೀಡುವ ಸರದಿ ಈಗ ಎಸ್ಪಿ ಸಂಸದೆ ಡಿಂಪಲ್ ಯಾದವ್ರದ್ದು.
ಉತ್ತರಪ್ರದೇಶದ ಜೌನ್ಪುರದಲ್ಲಿ ಭಾನುವಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮಿಶ್ ಶಾರ “ಕಸಬ್’ಗೆ ಮರುವ್ಯಾಖ್ಯಾನ ಮಾಡಿದ್ದಾರೆ. “ಬಿಜೆಪಿಯು “ಕ’ ಎಂದರೆ ಕಾಂಗ್ರೆಸ್ ಎನ್ನುತ್ತದೆ. ಆದರೆ, ನಿಮ್ಮ ಅಖೀಲೇಶ್ ಭಯ್ನಾ ಹೇಳುತ್ತಾರೆ: “ಕ’ ಅಂದರೆ “ಕಂಪ್ಯೂಟರ್’, “ಸ’ ಅಂದರೆ ಸ್ಮಾರ್ಟ್ ಫೋನ್ ಹಾಗೂ “ಬಿ’ ಎಂದರೆ “ಬಚ್ಚೇ'(ಮಕ್ಕಳು).
ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್ಟಾಪ್ ನೀಡುತ್ತಿರುವ ಎಸ್ಪಿ ಸರ್ಕಾರ, ಇನ್ನು ಅದರ ಜೊತೆಗೆ ಸ್ಮಾರ್ಟ್ಫೋನ್ ಕೂಡ ನೀಡಲಿದೆ. ಇದರಿಂದ ಮಕ್ಕಳು ಸರ್ಕಾರದ ನೀತಿಗಳಿಂದ ಹಿಡಿದು ಎಲ್ಲ ವಿಚಾರಗಳ ಬಗ್ಗೆಯೂ ಮಾಹಿತಿಯನ್ನು ಪಡೆಯಬಹುದು,’ ಎಂದಿದ್ದಾರೆ ಡಿಂಪಲ್.
ಯುವಕರ ಮೈತ್ರಿ: ಇನ್ನೊಂದೆಡೆ, ಎಸ್ಪಿ-ಕಾಂಗ್ರೆಸ್ ಮೈತ್ರಿಯನ್ನು ಎರಡು ಭ್ರಷ್ಟ ಕುಟುಂಬಗಳ ಮೈತ್ರಿ ಎಂದಿರುವ ಬಿಜೆಪಿಗೆ ಪ್ರತಿಕ್ರಿಯಿಸಿರುವ ಸಿಎಂ ಅಖೀಲೇಶ್, ನಮ್ಮದು ಯುವಜನತೆಯ ಮೈತ್ರಿ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದಿದ್ದಾರೆ.
ಇಂದು 5ನೇ ಹಂತದ ಮತದಾನ: ಉತ್ತರಪ್ರದೇಶದ 5ನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರೀಯ ಪಡೆಗಳು ಪಥಸಂಚಲನ ನಡೆಸಿವೆ. ನೇಪಾಳ ಗಡಿ ಭಾಗದ 5 ಕ್ಷೇತ್ರಗಳು ಸೇರಿದಂತೆ 11 ಜಿಲ್ಲೆಗಳ 51 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಹುಲ್ ಗಾಂಧಿ ಅವರ ತವರುಕ್ಷೇತ್ರ ಅಮೇಠಿಯೂ ಇದರಲ್ಲಿ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Swati Maliwal case: ಬಿಭವ್ ಫೋನ್ನಲ್ಲಿ ದತ್ತಾಂಶ ನಾಶ
New Delhi; ಆಪ್ ಮಾಜಿ ನಾಯಕ ಜಗ್ಬೀರ್ ಸಿಂಗ್ ಬಿಜೆಪಿ ಸೇರ್ಪಡೆ
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ
ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ
MUST WATCH
ಹೊಸ ಸೇರ್ಪಡೆ
Swati Maliwal case: ಬಿಭವ್ ಫೋನ್ನಲ್ಲಿ ದತ್ತಾಂಶ ನಾಶ
New Delhi; ಆಪ್ ಮಾಜಿ ನಾಯಕ ಜಗ್ಬೀರ್ ಸಿಂಗ್ ಬಿಜೆಪಿ ಸೇರ್ಪಡೆ
Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು
Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!