Vacation: ಪಣಜಿ: ಸಾಲು ಸಾಲು ರಜೆ, ಪ್ರಯಾಣ; ವಿಮಾನ ದರ ದುಪ್ಪಟ್ಟು
Team Udayavani, Aug 6, 2023, 2:34 PM IST
ಪಣಜಿ: ರಜೆ ಅಥವಾ ದೀರ್ಘ ವಾರಾಂತ್ಯವಾಗಿರಲಿ ಅನೇಕ ಜನರು ಗೋವಾದಲ್ಲಿ ಸಮಯ ಕಳೆಯಲು ಬಯಸುತ್ತಾರೆ. ಈಗ ಸ್ವಾತಂತ್ರ್ಯ ದಿನದ ವಾರಾಂತ್ಯವು ಸಮೀಪಿಸುತ್ತಿರುವಾಗ ಗೋವಾಗೆ ವಿಮಾನ ಟಿಕೆಟ್ಗಳ ಬೆಲೆ ಸಾಮಾನ್ಯ ಬೆಲೆಗೆ ಹೋಲಿಸಿದರೆ ಐದು ಪಟ್ಟು ಹೆಚ್ಚಾಗಿದೆ.
ನೀವು ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಲು ಬಯಸಿದರೆ ಟಿಕೆಟ್ಗಾಗಿ ಸುಮಾರು 9,800 ರೂ.ಗಳನ್ನು ಖರ್ಚು ಮಾಡಲು ನೀವು ಸಿದ್ಧರಾಗಿರಬೇಕು. 2,200 ರೂಪಾಯಿ ವೆಚ್ಚವಾಗುತ್ತಿದ್ದ ಪ್ರವಾಸಕ್ಕೆ ನೀವು ಈಗ 9,800 ರೂಪಾಯಿಗಳನ್ನು ತೆರಬೇಕಾಗಲಿದೆ.
ಬೆಂಗಳೂರಿನಿಂದ ಗೋವಾ ಮಾತ್ರವಲ್ಲದೆ ಇತರ ಸ್ಥಳಗಳಿಂದಲೂ ಗೋವಾಕ್ಕೆ ಬರಬೇಕಾದರೆ ಆಗಸ್ಟ್ 11 ರಂದು ಪುಣೆಯಿಂದ ಬರುವ ವಿಮಾನ ಟಿಕೆಟ್ ದರವು ಸಾಮಾನ್ಯ ಬೆಲೆ 4,500 ರೂ.ಗಳಿಂದ 13,300 ರೂ.ಗೆ ಏರಿಕೆಯಾಗಿದೆ.
ಆಗಸ್ಟ್ 15 ರ ಶನಿವಾರ ಮತ್ತು ಭಾನುವಾರದಂದು ಸಾರ್ವಜನಿಕ ರಜೆ ಇರುವುದರಿಂದ ಮಂಗಳವಾರ ಕೊನೆಗೊಳ್ಳುವ ಐದು ದಿನಗಳ ರಜೆಗಾಗಿ ಕಚೇರಿ ನೌಕರರು ಸೋಮವಾರ ಒಂದು ದಿನ ಹೆಚ್ಚು ರಜೆ ತೆಗೆದುಕೊಂಡರೆ ಐದು ದಿನಗಳ ದೀರ್ಘ ಕಾಲದ ರಜೆ ಲಭಿಸುತ್ತದೆ.
ಇದರಿಂದಾಗಿ ಹಲವು ಮಾರ್ಗಗಳಲ್ಲಿ ವಿಮಾನ ದರ ದುಪ್ಪಟ್ಟಾಗಿದೆ. ಈ ಹಿಂದೆ ಚೆನ್ನೈನಿಂದ ಗೋವಾಕ್ಕೆ ಪ್ರಯಾಣಿಸಲು ಪ್ರಯಾಣಿಕರಿಗೆ 4,000 ರೂ., ಆದರೆ ಆಗಸ್ಟ್ 11 ರಿಂದ ಈ ದರವು 9,500 ರೂ. ರಿಟರ್ನ್ ಟಿಕೆಟ್ಗಳು ಇನ್ನಷ್ಟು ದುಬಾರಿಯಾಗಿವೆ ಮತ್ತು ಚೆನ್ನೈಗೆ ಹಿಂತಿರುಗಲು ನಿಮಗೆ 9,200 ಪಾವತಿಸಬೇಕಾಗಲಿದೆ.
ದೆಹಲಿಯಿಂದ ವಿಮಾನಯಾನ ಮಾಡುವವರು ಪ್ರತಿ ಟಿಕೆಟ್ಗೆ 4,600 ರೂಪಾಯಿಯಿಂದ ಸದ್ಯ 9,500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆಗಸ್ಟ್ 15 ರಂದು ದೆಹಲಿಗೆ ಹಿಂದಿರುಗುವ ದರವೂ 11 ಸಾವಿರ ರೂ.ಗೆ ಏರಿಕೆಯಾಗಿದೆ. ಹೈದರಾಬಾದ್ನಿಂದ ಪ್ರಯಾಣಿಸುವವರ ಸ್ಥಿತಿಯೂ ಇದೇ ಆಗಿದೆ. ಈ ಹಿಂದೆ 3,700 ರೂಪಾಯಿ ಇದ್ದ ಟಿಕೆಟ್ಗೆ ಈಗ 7,750 ರೂ. ತೆರಬೇಕಾಗಲಿದೆ.
ಇದೀಗ ಮುಂಬಯಿ-ಗೋವಾ ವಿಮಾನ ದರ 5,800 ರೂ.ಗೆ ತಲುಪಿದೆ. ಈ ಹಿಂದೆ ಮುಂಬೈ-ಗೋವಾ ಪ್ರಯಾಣಕ್ಕೆ ಸರಾಸರಿ 2.600 ರೂ ಇತ್ತು. ಇದಲ್ಲದೆ, ಮುಂಬೈನಿಂದ ಗೋವಾಕ್ಕೆ ಬಸ್ ಪ್ರಯಾಣವು ಸಾಮಾನ್ಯ ವಿಮಾನ ದರಕ್ಕಿಂತ ಹೆಚ್ಚು ದುಬಾರಿಯಾಗಿದೆ. ಆಗಸ್ಟ್ 11 ರಿಂದ್ ಸ್ಲೀಪರ್ ಎಸಿ ಸೀಟ್ಗಳಿಗೆ 4,000 ರೂ ಗಳಷ್ಟು ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ