Goa: ಸಮುದ್ರ ತಟದ ರಾಜ್ಯದಲ್ಲಿ ಜಲಪಾತ ಸೊಬಗು


Team Udayavani, Jul 21, 2023, 10:23 AM IST

4-panaji

ಪಣಜಿ: ಗೋವಾ ರಾಜ್ಯ ಕೇವಲ ಬೀಚ್‌ ಪ್ರವಾಸೋದ್ಯಮ ಅಲ್ಲದೇ ಸುಂದರ ಜಲಪಾತಗಳ ಮೂಲಕವೂ ಜಗತ್ಪ್ರಸಿದ್ಧ ಪಡೆದಿದೆ. ಮಳೆಗಾಲದ ಸಂದರ್ಭದಲ್ಲಂತೂ ಇಲ್ಲಿಯ ಅತ್ಯಾಕರ್ಷಣೀಯ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಕೆಲ ದಿನಗಳ ಹಿಂದೆ ಗೋವಾದ ಕೆಲ ಜಲಪಾತಗಳಲ್ಲಿ ಪ್ರವಾಸಿಗರು ಬಿದ್ದು ಮೃತಪಟ್ಟ  ಘಟನೆಗಳ ನಂತರ ಗೋವಾ ಸರ್ಕಾರ ಅಭಯಾರಣ್ಯ ಪ್ರದೇಶ ವ್ಯಾಪ್ತಿಯ ಎಲ್ಲ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. ಆದರೆ ಇದೀಗ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಸೇರಿದಂತೆ ಇನ್ನೂ ಕೆಲ ಜಲಪಾತಗಳನ್ನು ಹೊರತು ಪಡಿಸಿ ಕೇವಲ 14 ಜಲಪಾತಗಳಿಗೆ ಪ್ರವಾಸಿಗರು ಪ್ರವೇಶಿಸಲು ಮುಕ್ತಗೊಳಿಸಲಾಗಿದೆ. ದೂಧಸಾಗರ ಜಲಪಾತಕ್ಕೆ ನಿರ್ಬಂಧ ಮುಂದುವರೆದಿದೆ.

ಮಹದಾಯಿ ಅಭಯಾರಣ್ಯದಲ್ಲಿ ಬರುವ ಸತ್ತರಿ, ಪಾಳಿ, ಚರಾಯಣೆ, ಗೋಳಾಲಿ, ಚಿದಂಬರ, ನಾನೇಲಿ, ಉಕೀಚೆಕಡೆ ಕುಮಠಳ, ಚೋರ್ಲಾ ಘಾಟ್‌ ಮಾರ್ಗದಲ್ಲಿನ ಮಾಡಯಾನಿ ಮತ್ತು ಖಾಡೆ ಈ ಜಲಪಾತಗಳ ವೀಕ್ಷಣೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.ಅಂತೆಯೇ ಭಗವಾನ್‌ ಮಹಾವೀರ ಅಭಯಾರಣ್ಯದಲ್ಲಿ ಬರುವ ಮಯಡಾ ಕುಳೆ ಜಲಪಾತ, ನೇತ್ರಾವಳಿ ಅಭಯಾರಣ್ಯದಲ್ಲಿ ಬರುವ ಭಾಟಿ ನೇತ್ರಾವಳಿ, ಖೋತಿಗಾಂವ ಅಭಯಾರಣ್ಯದಲ್ಲಿ ಬರುವ ಕುಸ್ಕೆ ಖೋತಿಗಾಂವ ಈ ಜಲಪಾತಗಳನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ.

ಕುಸ್ಕೆ ಫಾಲ್ಸ್‌: ಖೋತಿಗಾಂವ ಅಭಯಾರಣ್ಯದಲ್ಲಿ ಬರುವ ಕುಸ್ಕೆ ಜಲಪಾತಕ್ಕೆ ದಕ್ಷಿಣ ಗೋವಾದ ಕಾಣಕೋಣ ನಗರದಿಂದ ಖೋತಿಗಾಂವ ವನ್ಯಜೀವಿ ಅಭಯಾರಣ್ಯದ ಮೂಲಕ ಕುಸ್ಕೆ ಗ್ರಾಮದ ಮೂಲಕ ತೆರಳಬಹುದಾಗಿದೆ. ಸುಮಾರು 1.5 ಕಿ.ಮೀ ಚಾರಣದ ಮೂಲಕ ಜಲಪಾತದ ಕೆಳಭಾಗಕ್ಕೆ ಹೋಗಬಹುದು. ಇಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರ ವರೆಗೆ ಮಾತ್ರ ವೀಕ್ಷಣೆಗೆ ಅವಕಾಶವಿದೆ.

ತಾಂಬಡಿ ಸುರ್ಲಾ: ತಾಂಬಡಿ ಸುರ್ಲಾ ಜಲಪಾತವು ಗೋವಾದ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ. ಇಲ್ಲಿನ ಸುಂದರ ಹಚ್ಚ ಹಸಿರಿನ ಬೆಟ್ಟಗಳ ಮಧ್ಯೆ ಸುಂದರ ಜಲಪಾತ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಈ ಜಲಪಾತ ದಟ್ಟ ಕಾಡಿನ ನಡುವೆ ಇದೆ. ಹೀಗಾಗಿ ಸ್ಥಳೀಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಉತ್ತಮ. ಒಂದೂವರೆ ಗಂಟೆಯಷ್ಟು ಇಲ್ಲಿನ ಚಾರಣ ಕೈಗೊಂಡರೆ ಇಲ್ಲಿ ತೆರಳಬಹದು. ಈ ಜಲಪಾತವು ಗೋವಾ ರಾಜಧಾನಿ ಪಣಜಿಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ದಟ್ಟ ಕಾಡಿನಲ್ಲಿ ಈ ಜಲಪಾತ ಇರುವುದರಿಂದ ಕಾಡುಪ್ರಾಣಿಗಳಿಂದ ಕೂಡ ಎಚ್ಚರಿಕೆ ಅಗತ್ಯ. ತಾಂಬಡಿ ಸುರ್ಲಾ ಜಲಪಾತಕ್ಕೆ ತೆರಳುವ ಮುನ್ನ ಅಲ್ಲಿಯೇ ಇರುವ ಪ್ರಸಿದ್ಧ ಏಕಶಿಲೆಯ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿದರೆ, ದೇವಸ್ಥಾನದ ಬಳಿಯಿಂದಲೇ ಜಲಪಾತಕ್ಕೆ ತೆರಳುವ ಮಾರ್ಗ ಕೂಡ ಸುಲಭವಾಗಲಿದೆ.

ಚರಾಯನೆ: ಚರಾಯನೆ ಜಲಪಾತ ಗೋವಾದ ವಾಳಪೈ ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿದೆ. ಚಾರಣಕ್ಕೆ ಹಾಗೂ ಸಾಹಸ ಉತ್ಸಾಹಿಗಳಿಗೆ ಈ ಜಲಪಾತ ಹೇಳಿಮಾಡಿಸಿದ ಸ್ಥಳ. ಈ ಜಲಪಾತಕ್ಕೆ ತಲುಪಬೇಕಾದರೆ ಸುಂದರ ಪರಿಸರದ ಮೂಲಕ ಟ್ರೆಕ್ಕಿಂಗ್‌ ಮೂಲಕವೇ ಸಾಗಬೇಕು. ಈ ಜಲಪಾತ ಪ್ರವಾಸಿಗರನ್ನು ಮಂತ್ರಮುಗªಗೊಳಿಸುತ್ತದೆ.

ಟ್ವಿನ್‌ ಜಲಪಾತ: ಈ ಜಲಪಾತವು ಗೋವಾ ರಾಜಧಾನಿ ಪಣಜಿಯಿಂದ 29 ಕಿ.ಮೀ ದೂರದಲ್ಲಿದೆ. ಪೋಂಡಾ ನಗರದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಇದು ಪೋಂಡಾ ಸಮೀಪದ ಬೋರಿಮ್‌ನ ಶಿರಶಿರೆಮ್‌ನಲ್ಲಿದೆ.

ಮೈನಾಪಿ ಜಲಪಾತ: ಈ ಜಲಪಾತವು ಗೋವಾದ ನೇತ್ರಾವಳಿ ನಗರದ ಸಮೀಪದಲ್ಲಿದೆ. ಈ ಜಲಪಾತದ ಮಾರ್ಗವು ಅತ್ಯಂತ ಕಷ್ಟಕರವಾಗಿದೆ. ನೇತ್ರಾವಳಿ ಪಟ್ಟಣದಿಂದ ದಟ್ಟ ಕಾಡಿನ ಮೂಲಕ ಮಧ್ಯ ಮಧ್ಯ ಐದಾರು ಸಣ್ಣ ಹಳ್ಳ ಕೊಳ್ಳಗಳನ್ನು ದಾಟಿ ಸುಮಾರು ಒಂದು ತಾಸು ಚಾರಣ ಮಾಡಿ ಈ ಜಲಪಾತದ ಬಳಿ ತಲುಪಬಹುದಾಗಿದೆ.

ಭಾಟಿ ಜಲಪಾತ: ಈ ಜಲಪಾತವು ದಕ್ಷಿಣ ಗೋವಾದ ಸಾಂಗೆಮ್‌ನಲ್ಲಿದೆ. ಮಡಗಾಂವ್‌ನಿಂದ 45 ಕಿ.ಮೀ ದೂರದಲ್ಲಿದೆ. ಮುಖ್ಯ ರಸ್ತೆಯಿಂದ ಕಾಲ್ನಡಿಗೆಯಲ್ಲಿ ಸಾಗಿದರೆ ಕೇವಲ 5 ನಿಮಿಷದಲ್ಲಿ ಜಲಪಾತದ ಬಳಿ ತಲುಪಬಹುದಾಗಿದೆ.

ಮಳೆಗಾಲದ ಜಲಪಾತಗಳು ಗೋವಾ ಬೆಳಗಾವಿ ಮಾರ್ಗ ಚೋರ್ಲಾ ಘಾಟ್‌ನಲ್ಲಿ ಮಳೆಗಾಲದ ಸಂದರ್ಭದಲ್ಲಿ ಸೃಷ್ಟಿಯಾಗುವ ಹತ್ತಾರು ಸುಂದರ ಜಲಪಾತಗಳಿವೆ. ಈ ಜಲಪಾತಗಳ ವೀಕ್ಷಣೆಗೆ ಮಳೆಗಾಲದ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿನ ಹತ್ತಾರು ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುವುದಂತೂ ಖಂಡಿತ.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yogi adityanath

Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ

farmers, trailer, housewives star campaigners for CM Jagan’s party

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್‌

ಉಗ್ರರಿದ್ದಲ್ಲೇ ನುಗ್ಗಿ ವಿನಾಶ: ಪ್ರಧಾನಿ ಮೋದಿ

ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ

Suspense still about Rae Bareli, Amethi Congress candidates!

Lok Sabha; ರಾಯ್‌ಬರೇಲಿ, ಅಮೇಠಿ ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.