ಸೂಟು ಬೂಟಿನಲ್ಲಿ ನೀವು ವೇಟರ್ ತರ ಕಾಣುತ್ತೀರಿ: ತರೂರ್ಗೆ ಸ್ವಾಮಿ
Team Udayavani, Aug 7, 2018, 4:26 PM IST
ಹೊಸದಿಲ್ಲಿ : “ನೀವು ತೊಡುವ ವಿದೇಶಿ ಸೂಟು ಬೂಟು ನಮಗೇನೂ ಹೊಸದಲ್ಲ; ಆದರೂ ನೀವು ಆ ದಿರಿಸಿನಲ್ಲಿ ಹೊಟೇಲ್ ವೇಟರ್ ತರ ಕಾಣುತ್ತೀರಿ’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ನಾಯಕ ಶಶಿ ತರೂರ್ ಗೆ ಟಾಂಗ್ ನೀಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ತಾವು ಹೋದಲ್ಲೆಲ್ಲ ಅಲ್ಲಿನ ಸಾಂಪ್ರದಾಯಿಕ ಶಿರಸ್ತ್ರಾಣಗಳನ್ನು ಧರಿಸುತ್ತಾರೆ; ಆದರೆ ಮುಸ್ಲಿಮರ ಟೋಪಿ ಧರಿಸಲು ಏಕೆ ನಿರಾಕರಿಸುತ್ತಾರೆ’ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ಗೆ ಬಿಜೆಪಿಯ ಉರಿ ನಾಲಗೆಯ ನಾಯಕ ಸುಬ್ರಮಣಿಯನ್ ಸ್ವಾಮಿ ಈ ರೀತಿಯಲ್ಲಿ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಅವರ ಈಶಾನ್ಯ ಭಾರತದ ರಾಜ್ಯಗಳಿಗೆ ಭೇಟಿ ನೀಡಿದ್ದಾಗ ಅಲ್ಲಿನ ಬಡಕಟ್ಟು ಸಮುದಾಯದವರು ತೊಡುವ ಸಾಂಪ್ರದಾಯಿಕ ಶಿರಸ್ತ್ರಾಣ ತೊಟ್ಟದ್ದನ್ನು ಲೇವಡಿ ಮಾಡಿದ್ದ ತರೂರ್, ಈ ಬಗೆಯ ಶಿರಸ್ತ್ರಾಣಗಳು ಈ ನೆಲದ್ದಲ್ಲದ ವಿಚಿತ್ರ ರೀತಿಯ ಶಿರಸ್ತ್ರಾಣಗಳು ಎಂದು ಟೀಕಿಸಿದ್ದರು.
ಇದಕ್ಕೆ ಕಟುವಾಗಿ ಉತ್ತರಿಸಿರುವ ಕೇಂದ್ರ ಸಹಾಯಕ ಸಚಿವ ಕಿರಣ್ ರಿಜಿಜು ಅವರು “ಕಾಂಗ್ರೆಸ್ ಪಕ್ಷ ಮತ್ತು ಶಶಿ ತರೂರ್ ಜೀ, ನೀವು ದಯವಿಟ್ಟು ವಿವರಿಸಿ ಹೇಳಿ : ಔಟ್ಲ್ಯಾಂಡಿಶ್ ಮತ್ತು ಹಿಲೇರಿಯಸ್ ಹೆಡ್ ಗೇರ್ ಎಂದರೇನು ಎಂದು. ನೀವು ಈಶಾನ್ಯ ಜನರನ್ನು, ಬುಡಕಟ್ಟು ಸಮುದಾಯದವರನ್ನು ಅವಮಾನಿಸಿ ಪಾರಾಗಲಾರಿರಿ; ಇದಕ್ಕಾಗಿ ನೀವು ಕ್ಷಮೆ ಕೇಳಬೇಕು’ ಎಂದು ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ