ಕರ್ನಾಟಕ ಸಂಘ ಕಲಾಭಾರತಿ ವಿನೂತನ ಪ್ರಯೋಗ


Team Udayavani, Feb 27, 2018, 3:39 PM IST

7.jpg

ಮುಂಬಯಿ: “ಕಾವ್ಯೇಷು ನಾಟಕಂ ರಮ್ಯಂ’ ಮತ್ತು “ಕೇಳುವ ಸೂರಿಗಳು ಜಂಗಮಜನಾರ್ದನರು’ ಎಂಬ ಉಕ್ತಿಗಳು. ಬಹುಶಃ ದೃಶ್ಯ ಮತ್ತು ಶ್ರವ್ಯ ಕಾವ್ಯಗಳ ಹೆಗ್ಗಳಿಕೆಗೆ ನೀಡಲಾಗಿರುವ ಅತ್ಯುತ್ತಮ ವರ್ಣನೆಗಳಾಗಿವೆ. ನಾಟಕದಲ್ಲಿ ಕಲಾವಿದರ ಸಂಭಾಷಣೆ, ಅವರ ಅಭಿನಯ, ಚಲನ-ವಲನ, ರಂಗ ವಿನ್ಯಾಸ, ಬೆಳಕಿನ ವಿನ್ಯಾಸ, ವಸ್ತ್ರ ವಿನ್ಯಾಸ ಮೊದಲಾದವುಗಳು ಪ್ರೇಕ್ಷಕನನ್ನು ಇಡಿಯಾಗಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಈ ಎಲ್ಲ ಪರಿಕರಗಳಲ್ಲೂ ಅತಿ ಮುಖ್ಯವಾಗುವುದು ಸಂಭಾಷಣೆಯೇ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.

ರಂಗದ ಮೇಲಿನ ಸಕಲ ವಿನ್ಯಾಸಗಳು ಎಷ್ಟೇ ಮನೋಹರವಾಗಿದ್ದರೂ ನಾಟಕದ ಸಂಭಾಷಣೆಗಳು ಪ್ರಭಾವ ಪೂರ್ಣವಾಗಿಲ್ಲ ಎಂದಾದಲ್ಲಿ ನಾಟಕವು ವಿಫಲವಾದಂತೆಯೇ. ಇಲ್ಲಿ ಸಂಭಾಷಣೆಯ ಭಾಷೆ, ಸಾಹಿತ್ಯ ಮತ್ತು ಅವುಗಳನ್ನು ಪ್ರಕಟಗೊಳಿಸುವ ಪ್ರಕ್ರಿಯೆಗಳು ಪ್ರಮುಖವಾಗುತ್ತವೆ. ರಂಗದ ವಿನ್ಯಾಸಗಳು ನಾಟಕದ ಸಾಹಿತ್ಯಕ್ಕೆ, ಅದರ ಭಾವ ಪ್ರಕಟನೆೆಗೆ ಪೂರಕವಾಗಿ ನಿಲ್ಲುತ್ತವೆಯೇ ಹೊರತು, ಅವೇ ಪ್ರಮುಖವಲ್ಲ. ಹಾಗಾಗಿ ದೃಶ್ಯಕಾವ್ಯವಾದ ನಾಟಕದಲ್ಲೂ ಶ್ರವ್ಯಕ್ಕೇ ಮೊದಲ ಸ್ಥಾನ. ಶ್ರವ್ಯಕ್ಕೆ ಈ ಪ್ರಾಮುಖ್ಯತೆ ಇರುವುದರಿಂದಲೇ ನಾಟಕದ ತಯಾರಿಯಲ್ಲಿ ಮೊದಲಿಗೆ ಕಲಾವಿದರು ಹಲವು ದಿನಗಳ ಕಾಲ ಕೇವಲ ಸಂಭಾಷಣೆಯನ್ನು ಅಭ್ಯಸಿಸುವುದು. ಸಂಭಾಷಣೆಗಳಲ್ಲಿನ ಭಾವೋತ್ಪತ್ತಿ, ರಸೋತ್ಪತ್ತಿ, ನಡುವಣದ ಮೌನ, ಕಂಠದ ಏರಿಳಿತಗಳು ರಸಿಕನನ್ನು ಏಕಾಗ್ರತೆಯತ್ತ ಕೊಂಡೊಯ್ಯುವಂಥವು. ರಸಿಕನು ತನ್ನ ಅಸ್ತಿತ್ವವನ್ನು ಮರೆತು ಕಲೆಯಲ್ಲಿ ಒಂದಾಗಿ ಹೋಗುವಂತೆ ಮಾಡುವುದು ನಾಟಕದಲ್ಲಿನ ಸಂಭಾಷಣೆಗಳು. ಆ ಏಕಾಗ್ರತೆಯ ಹಂತವೇ ಒಂದು ಕಲೆಯ ಸಾರ್ಥಕ್ಯದ ಹಂತ.

ಕಲಾ ಭಾರತಿಯ ಒಂದು ವಿನೂತನ ಪ್ರಯೋಗ ಇಂತಹ ಒಂದು ಸಂಭಾಷಣೆಯ ಹಂತವನ್ನೇ ಮುಖ್ಯವಾಹಿನಿಯಲ್ಲಿ ತಂದು ವೇದಿಕೆಯಲ್ಲಿ ಪ್ರಸ್ತುತಪಡಿಸಿ ರಸಿಕರನ್ನು ಏಕಾಗ್ರತೆಯತ್ತ ಕೊಂಡೊಯ್ಯುವ ಒಂದು ಪ್ರಯತ್ನ ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆಯಿತು. ಯಾವುದೇ ರಂಗ ವಿನ್ಯಾಸಗಳಿಲ್ಲದೇ ಕೇವಲ ನಾಟಕವನ್ನು ಓದುತ್ತಾ ಪ್ರೇಕ್ಷಕರನ್ನು ಸೆರೆಹಿಡಿದುಕೊಂಡವರು, ಕರ್ನಾಟಕ ಸಂಘ ಮುಂಬಯಿಯ ಕಲಾ ಭಾರತಿ ತಂಡದವರು.

ಮಹಾಕವಿ ಕಾಳಿದಾಸನ ಖಾಸಗಿ ಬದುಕಿನ ಬಗೆಗೆ ಬೆಳಕು ಚೆಲ್ಲುವ ಮೋಹನ್‌ ರಾಕೇಶರ ಹಿಂದಿ ನಾಟಕವಾದ “ಆಷಾಢ್‌ ಕಾ ಏಕ್‌ ದಿನ್‌’ ಇದರ ಕನ್ನಡಾವತರಣವಾದ “ಆಷಾಢದ ಒಂದು ದಿನ’ ನಾಟಕದ (ಅನುವಾದ  ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ) ಮೂರನೇ ಅಂಕವನ್ನು ಪ್ರಸ್ತುತಪಡಿಸಿ, ಕನ್ನಡ ರಂಗ ಭೂಮಿಯಲ್ಲಿ ವಿರಳವಾಗಿ ನಡೆಯುವ ಈ ಬಗೆಯ ಪ್ರಯೋಗವನ್ನು ಈ ಕಲಾವಿದರು ಯಶಸ್ವಿಯಾಗಿ ನಡೆಸಿಕೊಟ್ಟರು.

ಡಾ| ಭರತ್‌ ಕುಮಾರ್‌ ಪೊಲಿಪು ಇವರ ನಿರ್ದೇಶನದಲ್ಲಿ ಪ್ರಸ್ತುತಪಡಿಸಲಾದ ಈ ನಾಟಕದ ಕಾಳಿದಾಸನ ಪಾತ್ರವನ್ನು ಮೋಹನ್‌ ಮಾರ್ನಾಡ್‌, ಮಲ್ಲಿಕಾಳ ಪಾತ್ರವನ್ನು ಅಹಲ್ಯಾ ಬಲ್ಲಾಳ್‌, ವಿಲೋಮನ ಪಾತ್ರವನ್ನು ಅವಿನಾಶ್‌ ಕಾಮತ್‌ ಮತ್ತು ಮಾತುಲನ ಪಾತ್ರವನ್ನು ರಾಜೀವ್‌ ನಾಯಕ್‌ ಇವರು ನಿರ್ವಹಿಸಿ ಭಾವಪೂರ್ಣವಾಗಿ ಬಿತ್ತರಿಸಿ ಸಭೆಯನ್ನು ಮಂತ್ರಮುಗ್ಧವನ್ನಾಗಿಸಿದರು. ಪ್ರಯೋಗದ ಮೊದಲಿಗೆ ಅವಿನಾಶ್‌ ಕಾಮತ್‌ ಅವರು ನೀಡಿದ ನಾಟಕದ ವಸ್ತುವಿನ ಕುರಿತಾದ ಪರಿಚಯವು, ಸಂದರ್ಭವನ್ನು ಗ್ರಹಿಸಲು ಸಹಕಾರಿಯಾಯಿತು. ನಾಟಕ ಪ್ರಾರಂಭವಾದ ತುಸು ಹೊತ್ತಿನಲ್ಲೇ ನಾಟಕ ರಂಗದ ಇತರ ಪರಿಕರ ವಿನ್ಯಾಸಗಳ ಆವಶ್ಯಕತೆ ಇಲ್ಲವೆನ್ನುವಷ್ಟು ಈ ಕಲಾವಿದರ ಸಂಭಾಷಣೆಯ ಪ್ರಸ್ತುತಿಯೇ ಸಭಿಕರನ್ನು ಆಕರ್ಷಿಸಿತು. ಮರಾಠಿಯಲ್ಲಿ ಇಂತಹ ಪ್ರಯೋಗಗಳು ಜನಪ್ರಿಯವಾಗಿದ್ದು, ಕನ್ನಡ ರಂಗಭೂಮಿಯಲ್ಲಿ ಇಂಥ ಪ್ರಯೋಗಗಳು ನಿಯಮಿತವಾಗಿ ನಡೆಯುವ ಉದಾಹರಣೆಗಳಿಲ್ಲ. ಸಾಮಾನ್ಯವಾಗಿ ನಾಟಕ ಪ್ರದರ್ಶನಗಳಿಗೆ ತಗಲುವ ಹೇರಳವಾದ ಖರ್ಚು ವೆಚ್ಚಗಳಿಲ್ಲದ, ಈ ರೀತಿಯ ಪ್ರಯೋಗಗಳ ಮೂಲಕ ಪ್ರದರ್ಶನಗಳಿಲ್ಲದೇ ಸೊರಗುತ್ತಿರುವ ನಾಟಕ ಸಾಹಿತ್ಯವನ್ನು ಜೀವಂತವಾಗಿರಿಸಬಹುದಾಗಿದೆ. ಕಲಾವಿದರಿಗೆ ಹೆಚ್ಚಿನ ವೇದಿಕೆಗಳನ್ನು ಇದರಿಂದ ಕಲ್ಪಿಸಿಕೊಡಬಹುದಾಗಿದೆ.

ಹಾಗೆಂದು ಇದನ್ನು ಯಾರೂ, ಎಲ್ಲಿಯೂ ನಿಭಾಯಿಸಬಹುದೆಂದು ತಿಳಿದರೂ ತಪ್ಪಾದೀತು. ಸಾಮಾನ್ಯ ನಾಟಕ ಪ್ರದರ್ಶನಗಳಿಗಿಂತ ಹೆಚ್ಚಿನ ಭಾವ ತನ್ಮಯತೆ, ಏಕಾಗ್ರತೆ ಇಲ್ಲಿ ಆವಶ್ಯಕವಾಗುತ್ತದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಕಲಾವಿದರು ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಅತ್ಯಂತ ಪರಿಣತ ಮತ್ತು ಸೃಜನಾತ್ಮಕ ನಿರ್ದೇಶಕರು ಮತ್ತು ಕಲಾವಿದರುಗಳು ಮಾತ್ರ ಈ ರೀತಿಯ ಪ್ರಯೋಗಗಳನ್ನು ಯಶಸ್ವಿಗೊಳಿಸಬಲ್ಲರು. ಹಾಗೆಯೇ ಸೂಕ್ಷ್ಮ ಗುಣಗ್ರಾಹಿಗಳಾದ, ಕಲ್ಪನಾಶಕ್ತಿಯುಳ್ಳ ಪ್ರೌಢ ಕೇಳುಗರು ಅಗತ್ಯವಾಗಿ ಇಲ್ಲಿ ಬೇಕಾಗುತ್ತಾರೆ.

ಮುಂಬಯಿ ವಿಶ್ವವಿದ್ಯಾಲಯದಲ್ಲಿ ನಡೆದ ಇತ್ತೀಚಿನ ಈ ಪ್ರಯೋಗದಲ್ಲಿ ಈ ಮೇಲಿನ ಎರಡೂ ಅಂಶಗಳು ಮೇಳೈಸಿತ್ತೆನ್ನಬಹುದು. ಲಭ್ಯ ಸಮಯಾವಕಾಶದಲ್ಲಿ ಅತ್ಯುತ್ತಮ ನಾಟಕ ವಾಚನ ಕಾರ್ಯಕ್ರಮವನ್ನು ನೀಡಿದ ಕಲಾವಿದರಿಗೂ, ನಿರ್ದೇಶಕರಿಗೂ ಅಭಿನಂದನೆಗಳು. ಇಂಥ ಒಂದು ಹೊಸ ಪ್ರಯೋಗಕ್ಕೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್‌. ಉಪಾಧ್ಯ ಅವರೂ ಅಭಿನಂದನಾರ್ಹರು. ಕಲಾರಂಗದ ಈ ಬಗೆಯ ಹೊಸ ಪ್ರಯೋಗಗಳನ್ನು ಪ್ರೋತ್ಸಾಹಿಸಿ, ಬೆಳೆಸುವ ಹೊಣೆ ನಮ್ಮೆಲ್ಲರದು.

ಲೇಖಕಿ : ಡಾ| ವಿದುಷಿ ಶ್ಯಾಮಲಾ ಪ್ರಕಾಶ್‌ 
ಚಿತ್ರ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.