- Tuesday 10 Dec 2019
ಆಸೀಸ್ ಗೆಲುವು; ಸರಣಿ ಮುನ್ನಡೆ
Team Udayavani, Sep 9, 2019, 12:53 AM IST
ಮ್ಯಾಂಚೆಸ್ಟರ್: ಆ್ಯಶಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ 185 ರನ್ನುಗಳಿಂದ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಗೆಲುವಿಗೆ 383 ರನ್ ಗುರಿ ಪಡೆದ ಇಂಗ್ಲೆಂಡ್ ಪಂದ್ಯದ ಕೊನೆಯ ದಿನವಾದ ರವಿವಾರ 197 ರನ್ನಿಗೆ ಆಲೌಟ್ ಆಯಿತು.
ಇದಕ್ಕೂ ಮುನ್ನ ಆಸ್ಟ್ರೇಲಿಯ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 251 ರನ್ನುಗಳಿಂದ ಜಯಿಸಿತ್ತು. ಬಳಿಕ ಇಂಗ್ಲೆಂಡ್ ಲೀಡ್ಸ್ನಲ್ಲಿ ಆಡಲಾದ 3ನೇ ಪಂದ್ಯವನ್ನು ಒಂದು ವಿಕೆಟ್ನಿಂದ ರೋಚಕವಾಗಿ ಗೆದ್ದಿತ್ತು. ಸರಣಿಯ ಅಂತಿಮ ಟೆಸ್ಟ್ ಸೆ. 12ರಿಂದ ಓವಲ್ನಲ್ಲಿ ಆರಂಭವಾಗಲಿದೆ.
ವೇಗಿ ಪ್ಯಾಟ್ ಕಮಿನ್ಸ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ರನ್ ಖಾತೆ ತೆರೆಯುವ ಮೊದಲೇ 2 ವಿಕೆಟ್ ಉರುಳಿಸಿಕೊಂಡು ಆತಂಕಕ್ಕೆ ಸಿಲುಕಿತ್ತು. ಬಳಿಕ 138 ರನ್ನಿಗೆ 6 ವಿಕೆಟ್ಗಳನ್ನು ಕಳೆದುಕೊಂಡಿತು. 7ನೇ ವಿಕೆಟಿಗೆ ಜತೆಗೂಡಿದ ಜಾಸ್ ಬಟ್ಲರ್ ಮತ್ತು ಕ್ರೆಗ್ ಓವರ್ಟನ್ ತಂಡದ ಸೋಲು ತಪ್ಪಿಸಲು ಹೋರಾಟವನ್ನೇನೋ ಜಾರಿಯಲ್ಲಿರಿಸಿದರು. ಆದರೆ ಸ್ಕೋರ್ 172ಕ್ಕೆ ಏರಿದಾಗ ಬಟ್ಲರ್ ಅವರನ್ನು ಬೌಲ್ಡ್ ಮಾಡಿದ ಹ್ಯಾಝಲ್ವುಡ್ ಆಸ್ಟ್ರೇಲಿಯದ ಗೆಲುವಿನ ಆಸೆಯನ್ನು ಚಿಗುರಿಸಿದರು. ಬಟ್ಲರ್ ಗಳಿಕೆ 111 ಎಸೆತಗಳಿಂದ 34 ರನ್.
4ನೇ ದಿನದ ಕೊನೆಯಲ್ಲಿ ಆರಂಭಕಾರ ರೋರಿ ಬರ್ನ್ಸ್ ಮತ್ತು ನಾಯಕ ಜೋ ರೂಟ್ ರನ್ ಗಳಿಸದೆ ನಿರ್ಗಮಿಸಿದ್ದು ಇಂಗ್ಲೆಂಡಿಗೆ ದುಬಾರಿಯಾಗಿ ಪರಿಣಮಿಸಿತು. ಬಳಿಕ ಜೋ ಡೆನ್ಲಿ (53) ಮತ್ತು ಜಾಸನ್ ರಾಯ್ (31) 64 ರನ್ ಜತೆಯಾಟ ನಡೆಸಿದರು.
ಈ ವಿಭಾಗದಿಂದ ಇನ್ನಷ್ಟು
-
ಸೌತ್ ಏಶ್ಯನ್ ಗೇಮ್ಸ್ : ಭಾರತ 159 ಚಿನ್ನ, 91 ಬೆಳ್ಳಿ, 44 ಕಂಚು ಕಾಠ್ಮಂಡು (ನೇಪಾಲ), ಡಿ. 9: ಸೌತ್ ಏಶ್ಯನ್ ಗೇಮ್ಸ್ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತ ಅವಳಿ ಚಿನ್ನವನ್ನು...
-
ಮಾಸ್ಕೊ (ರಶ್ಯ): ರಶ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗ ಎದುರಾಗಿದೆ. ಮುಂದಿನ 4 ವರ್ಷಗಳ ಕಾಲ ಅದು ಯಾವುದೇ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಿಲ್ಲ...
-
ದಿಂಡಿಗಲ್ (ತಮಿಳುನಾಡು): ನೂತನ ರಣಜಿ ಋತುವಿನಲ್ಲಿ ಕರ್ನಾಟಕ ಸಾಧಾರಣ ಆರಂಭ ಕಂಡಿದೆ. ಸೋಮವಾರ ಆತಿಥೇಯ ತಮಿಳುನಾಡು ವಿರುದ್ಧ ದಿಂಡಿಗಲ್ನಲ್ಲಿ ಆರಂಭಗೊಂಡ ಮುಖಾಮುಖೀಯಲ್ಲಿ...
-
ತಿರುವನಂತಪುರ: ಕೇರಳ ಪರ ಮೊದಲ ರಣಜಿ ಪಂದ್ಯ ಆಡಿದ ಕರ್ನಾಟಕದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ದಿಲ್ಲಿ ವಿರುದ್ಧ ಇಲ್ಲಿ ಮೊದಲ್ಗೊಂಡ...
-
ತಿರುವನಂತಪುರ: "ಎಲ್ಲರೂ ನಾನು ಕೋರ್ಟ್ನಿ ವಾಲ್ಶ್ ಅವರ ಮಗನೆಂದೇ ತಿಳಿದುಕೊಂಡಿದ್ದಾರೆ. ಆದರೆ ಕೋರ್ಟ್ನಿ ವಾಲ್ಶ್ ನನ್ನ ತಂದೆ ಯಲ್ಲ...' ಎಂಬುದಾಗಿ ವಿಂಡೀಸ್ ತಂಡದ...
ಹೊಸ ಸೇರ್ಪಡೆ
-
ಹೊಸದಿಲ್ಲಿ: ಭಾರಿ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇಂದು ಈಶಾನ್ಯ ಭಾರತದ ರಾಜ್ಯಗಳಲ್ಲಿ ಬಂದ್ ಆಚರಿಸಲಾಗುತ್ತಿದೆ. ಈಶಾನ್ಯ...
-
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಬಂಟ್ವಾಳ ನಿವಾಸಿ ಆನಂದ ಜಿ. ಅವರು ಡಿ. 9ರ ತಡರಾತ್ರಿ ನಿಧನ ಹೊಂದಿದ್ದಾರೆ. ಬಿಜೆಪಿ ಪಕ್ಷದಲ್ಲಿ ವಿವಿಧ...
-
ಹೊಸದಿಲ್ಲಿ: ಜನರ ಬ್ಯಾಂಕ್ ಖಾತೆಯಿಂದ ಕಳ್ಳದಾರಿಯಲ್ಲಿ ಹಣ ಕದಿಯುತ್ತಿದ್ದ ರೋಮಾನಿಯಾದ ಪ್ರಜೆಯೋರ್ವನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೋಮಾನಿಯಾ...
-
ಹೊಸದಿಲ್ಲಿ: ಐವತ್ತು ಮೈಕ್ರಾನ್ಗಳಿಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ಬ್ಯಾಗ್ ಬಳಕೆಯಲ್ಲಿ ಬರದಂತೆ ನೋಡಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ...
-
ಇಂಫಾಲ್: ಕೆಳಗೆ ಬಿದ್ದ ವಸ್ತುಗಳನ್ನು ಹೆಕ್ಕಿ ಕೊಡುವ ಮತ್ತು ಸಂಭಾಷಣೆ ನಡೆಸುವ ರೋಬೋಟ್ ಅನ್ನು ಮಣಿಪುರ ರಾಜಧಾನಿ ಇಂಫಾಲ್ನ ಇರಾಮ್ ರೋಶನ್ (21) ಎಂಬ ಯುವಕ...