ಬ್ಯಾಡ್ಮಿಂಟನ್ ಸಿಂಗಲ್ಸ್ ಸ್ಪರ್ಧೆ: ಕ್ವಾರ್ಟರ್ ಫೈನಲ್ಗೆ ಪಿ.ವಿ.ಸಿಂಧು, ಶ್ರೀಕಾಂತ್
Team Udayavani, Aug 5, 2022, 9:30 PM IST
ಬರ್ಮಿಂಗ್ಹ್ಯಾಮ್: ಪಿ.ವಿ.ಸಿಂಧು ಮತ್ತು ಕೆ.ಶ್ರೀಕಾಂತ್ ಬ್ಯಾಡ್ಮಿಂಟನ್ ಸಿಂಗಲ್ಸ್ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಕಳೆದ ಸಲ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಉಗಾಂಡದ ಹುಸಿನಾ ಕೊಬುಗಬೆ ಅವರನ್ನು 21-10, 21-9 ಅಂತರದಿಂದ ಪರಾಭವಗೊಳಿಸಿದರು. ಇವರ ಮುಂದಿನ ಎದುರಾಳಿ ಮಲೇಷ್ಯಾದ ಗೋಹ್ ಜಿನ್ ವೀ.
ಕೆ.ಶ್ರೀಕಾಂತ್ ಶ್ರೀಲಂಕಾದ ದುಮಿಂದು ಅಭಯವಿಕ್ರಮ ಅವರಿಗೆ 21-9, 21-12 ಅಂತರದ ಸೋಲುಣಿಸಿದರು. ಶ್ರೀಕಾಂತ್ ಕೂಡ ಗೋಲ್ಸ್ಕೋಸ್ಟ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಶ್ರೀಕಾಂತ್ ಅವರಿನ್ನು 54ನೇ ರ್ಯಾಂಕಿಂಗ್ನ ಇಂಗ್ಲೆಂಡ್ ಆಟಗಾರ ಟಾಬಿ ಪೆಂಟಿ ಅವರೆದುರು ಆಡಲಿದ್ದಾರೆ.
ಇದಕ್ಕೂ ಮೊದಲು ವನಿತಾ ಡಬಲ್ಸ್ನಲ್ಲಿ ಗಾಯತ್ರಿ ಗೋಪಿಚಂದ್-ತ್ರಿಶಾ ಜಾಲಿ ಕೂಡ ಗೆಲುವಿನ ಓಟ ಮುಂದುವರಿಸಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇವರು ಮಾರಿಶಿಯಸ್ನ ಜೆಮಿಮಾ ಲೆಯುಂಗ್ ಫಾರ್ ಸಾಂಗ್-ಗಣೇಶ ಮುಂಗ್ರಾಹ್ ವಿರುದ್ಧ 21-2, 21-4 ಅಂತರದ ಸುಲಭ ಜಯ ಸಾಧಿಸಿದ್ದರು. ಇವರ ಎದುರಾಳಿಯಾಗಿರುವವರು ಜಮೈಕಾದ ಟಹ್ಲಿಯಾ ರಿಚರ್ಡ್ಸನ್-ಕ್ಯಾಥರಿನ್ ವಿಂಟರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ