ಬುಮ್ರಾ ದಾಳಿಗೆ ಬೆದರಿದ ಆಫ್ರಿಕಾ


Team Udayavani, Jan 26, 2018, 9:39 AM IST

26-13.jpg

ಜೊಹಾನ್ಸ್‌ಬರ್ಗ್‌: ವೇಗಿ ಜಸ್‌ಪ್ರೀತ್‌ ಬುಮ್ರಾ ದಾಳಿಗೆ ಬೆದರಿದ ದಕ್ಷಿಣ ಆಫ್ರಿಕಾ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದ ದ್ವಿತೀಯ ದಿನ 194 ರನ್ನಿಗೆ ತನ್ನ ಮೊದಲ ಸರದಿಯನ್ನು ಮುಗಿಸಿದೆ. ಇದು ಭಾರತದ ಮೊತ್ತಕ್ಕಿಂತ ಕೇವಲ 7 ರನ್‌ ಹೆಚ್ಚು.

ಬುಮ್ರಾ ಸಾಧನೆ 54ಕ್ಕೆ 5 ವಿಕೆಟ್‌. ಇದು ಅವರ 3ನೇ ಟೆಸ್ಟ್‌ ಆಗಿದ್ದು, ಮೊದಲ ಸಲ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಉರುಳಿಸಿದ ಸಾಹಸಗೈದಿದ್ದಾರೆ. ಉಳಿದಂತೆ ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮ ಮತ್ತು ಮೊಹಮ್ಮದ್‌ ಶಮಿ ಒಂದೊಂದು ವಿಕೆಟ್‌ ಹಾರಿಸಿದರು. 

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತ ಒಂದು ವಿಕೆಟ್‌ ನಷ್ಟಕ್ಕೆ 49 ರನ್‌ ಮಾಡಿದ್ದು, 42 ರನ್‌ ಮುನ್ನಡೆಯಲ್ಲಿದೆ. 2ನೇ ಸರದಿಯಲ್ಲಿ ಟೀಮ್‌ ಇಂಡಿಯಾದ ಓಪನಿಂಗ್‌ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಯಿತು. ರಾಹುಲ್‌ ಬದಲು ಪಾರ್ಥಿವ್‌ ಪಟೇಲ್‌ ಬಂದರು. ಪಟೇಲ್‌ 3 ಬೌಂಡರಿ ಸಿಡಿಸಿ ಆಕ್ರಮಣಕಾರಿ ಆಟಕ್ಕಿಳಿದರೂ 16 ರನ್‌ ಮಾಡಿ ನಿರ್ಗಮಿಸಿದರು. ವಿಜಯ್‌ 13, ರಾಹುಲ್‌ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ನೆರವಿಗೆ ನಿಂತ ಆಮ್ಲ
ಭಾರತದ ಬ್ಯಾಟ್ಸ್‌ಮನ್‌ಗಳಂತೆ ಆತಿಥೇಯ ಆಫ್ರಿಕಾ ಆಟಗಾರರೂ ವಾಂಡರರ್ ವೇಗದ ಟ್ರ್ಯಾಕ್‌ ಮೇಲೆ ಪರದಾಡಿದರು. ಟೀಮ್‌ ಇಂಡಿಯಾ ಬೌಲರ್‌ಗಳು ಜಬರ್ದಸ್ತ್ ದಾಳಿ ಮೂಲಕ ಡು ಪ್ಲೆಸಿಸ್‌ ಪಡೆಯನ್ನು ಸಂಕಟಕ್ಕೆ ತಳ್ಳಿದರು. ಅನುಭವಿ ಬ್ಯಾಟ್ಸ್‌ಮನ್‌ ಹಾಶಿಮ್‌ ಆಮ್ಲ 239 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡು ಉತ್ತಮ ಹೋರಾಟವೊಂದನ್ನು ಸಂಘಟಿಸದೇ ಹೋಗಿದ್ದರೆ ಭಾರತಕ್ಕೆ ಇನ್ನಿಂಗ್ಸ್‌ ಮುನ್ನಡೆಯ ಸಾಧ್ಯತೆ ಇತ್ತು. ಆಮ್ಲ 121 ಎಸೆತಗಳನ್ನು ನಿಭಾಯಿಸಿ 61 ರನ್‌ ಬಾರಿಸಿದರು. ಇದರಲ್ಲಿ 7 ಬೌಂಡರಿ ಸೇರಿತ್ತು. 

ಆಮ್ಲ ಅವರಿಗೆ ನೈಟ್‌ ವಾಚ್‌ಮನ್‌ ಕಾಗಿಸೊ ರಬಾಡ ಉತ್ತಮ ಬೆಂಬಲ ನೀಡಿದರು. 84 ಎಸೆತಗಳನ್ನು ನಿಭಾಯಿಸಿದ ರಬಾಡ 30 ರನ್‌ ಕೊಡುಗೆ ಸಲ್ಲಿಸಿದರು (6 ಬೌಂಡರಿ). ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 64 ರನ್‌ ಒಟ್ಟುಗೂಡಿತು. ಎರಡಂಕೆಯ ಗಡಿ ದಾಟಿದ ಮತ್ತೂಬ್ಬ ಆಟಗಾರನೆಂದರೆ ವೆರ್ನನ್‌ ಫಿಲಾಂಡರ್‌. 55 ಎಸೆತ ಎದುರಿಸಿದ ಫಿಲಾಂಡರ್‌ 5 ಬೌಂಡರಿ ನೆರವಿನಿಂದ 35 ರನ್‌ ಮಾಡಿದರು. ಕಾಕತಾಳೀಯವೆಂದರೆ, ಭಾರತದ 3, 4 ಹಾಗೂ 8ನೇ ಕ್ರಮಾಂಕದ ಆಟಗಾರರಂತೆ ದಕ್ಷಿಣ ಆಫ್ರಿಕಾದ ಸರದಿಯಲ್ಲೂ ಇದೇ ಕ್ರಮಾಂಕದ ಆಟಗಾರರಷ್ಟೇ ಎರಡಂಕೆಯ ಸ್ಕೋರ್‌ ದಾಖಲಿಸಿದ್ದು! ಭಾರತದ ಪರ ಪೂಜಾರ, ಕೊಹ್ಲಿ ಮತ್ತು ಭುವನೇಶ್ವರ್‌ ಈ ಸಾಧನೆ ಮಾಡಿದ್ದರು.

ಆತಿಥೇಯರ ಮಧ್ಯಮ ಸರದಿಯ ಬ್ಯಾಟ್ಸ್‌ಮನ್‌ಗಳಾದ ಡಿ ವಿಲಿಯರ್, ಡು ಪ್ಲೆಸಿಸ್‌, ಡಿ ಕಾಕ್‌ ಅವರನ್ನು ಬೇಗನೇ ಪೆವಿಲಿಯನ್ನಿಗೆ ಅಟ್ಟಿದ ಭಾರತ ತನ್ನ ಹಿಡಿತವನ್ನು ಬಿಗಿಗೊಳಿಸತೊಡಗಿತು. 125 ರನ್ನಿಗೆ ಹರಿಣಗಳ 6 ವಿಕೆಟ್‌ ಹಾರಿಹೋಯಿತು. ಆಗ ಆಮ್ಲ-ಫಿಲಾಂಡರ್‌ 44 ರನ್‌ ಜತೆಯಾಟ ನಿಭಾಯಿಸಿದರು. ಹೀಗಾಗಿ ಆಫ್ರಿಕಾಕ್ಕೆ ಭಾರತದ ಮೊತ್ತವನ್ನು ದಾಟಲು ಸಾಧ್ಯವಾಯಿತು. ದಕ್ಷಿಣ ಆಫ್ರಿಕಾ ಒಂದಕ್ಕೆ 6 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿತ್ತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌        187

ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌
ಡೀನ್‌ ಎಲ್ಗರ್‌    ಸಿ ಪಟೇಲ್‌ ಬಿ ಭುವನೇಶ್ವರ್‌    4
ಐಡನ್‌ ಮಾರ್ಕ್‌ರಮ್‌    ಸಿ ಪಟೇಲ್‌ ಬಿ ಭುವನೇಶ್ವರ್‌    2
ಕಾಗಿಸೊ ರಬಾಡ    ಸಿ ರಹಾನೆ ಬಿ ಇಶಾಂತ್‌    30
ಹಾಶಿಮ್‌ ಆಮ್ಲ    ಸಿ ಪಾಂಡ್ಯ ಬಿ ಬುಮ್ರಾ    61
ಎಬಿ ಡಿ ವಿಲಿಯರ್    ಬಿ ಭುವನೇಶ್ವರ್‌    5
ಫಾ ಡು ಪ್ಲೆಸಿಸ್‌    ಬಿ ಬುಮ್ರಾ    8
ಕ್ವಿಂಟನ್‌ ಡಿ ಕಾಕ್‌    ಸಿ ಪಟೇಲ್‌ ಬಿ ಬುಮ್ರಾ    8
ವೆರ್ನನ್‌ ಫಿಲಾಂಡರ್‌    ಸಿ ಬುಮ್ರಾ ಬಿ ಶಮಿ    35
ಆ್ಯಂಡಿಲ್‌ ಫೆಲಿಕ್ವಾಯೊ    ಎಲ್‌ಬಿಡಬ್ಲ್ಯು ಬುಮ್ರಾ    9
ಮಾರ್ನೆ ಮಾರ್ಕೆಲ್‌    ಔಟಾಗದೆ    9
ಲುಂಗಿ ಎನ್‌ಗಿಡಿ    ಸಿ ಪಟೇಲ್‌ ಬಿ ಬುಮ್ರಾ    0

ಇತರ        23
ಒಟ್ಟು  (ಆಲ್‌ಟ್‌)        194
ವಿಕೆಟ್‌ ಪತನ: 1-3, 2-16, 3-80, 4-92, 5-107, 6-125, 7-169, 8-175, 9-194.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        19-9-44-3
ಜಸ್‌ಪ್ರೀತ್‌ ಬುಮ್ರಾ        18.5-2-54-5
ಇಶಾಂತ್‌ ಶರ್ಮ        14-2-33-1
ಮೊಹಮ್ಮದ್‌ ಶಮಿ        12-0-46-1
ಹಾರ್ದಿಕ್‌ ಪಾಂಡ್ಯ        2-0-3-0
ಭಾರತ ದ್ವಿತೀಯ ಇನ್ನಿಂಗ್ಸ್‌
ಮುರಳಿ ವಿಜಯ್‌    ಬ್ಯಾಟಿಂಗ್‌    13
ಪಾರ್ಥಿವ್‌ ಪಟೇಲ್‌    ಸಿ ಐಡನ್‌ಬಿ ಫಿಲಾಂಡರ್‌    16
ಕೆ.ಎಲ್‌. ರಾಹುಲ್‌    ಬ್ಯಾಟಿಂಗ್‌    16

ಇತರ        4
ಒಟ್ಟು  (ಒಂದು ವಿಕೆಟಿಗೆ)        49
ವಿಕೆಟ್‌ ಪತನ: 1-17.

ಬೌಲಿಂಗ್‌: 
ವೆರ್ನನ್‌ ಫಿಲಾಂಡರ್‌        5-2-11-1
ಕಾಗಿಸೊ ರಬಾಡ        6-1-19-0
ಮಾರ್ನೆ ಮಾರ್ಕೆಲ್‌        4-1-9-0
ಲುಂಗಿ ಎನ್‌ಗಿಡಿ        2-0-6-0

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqwewq-ew

IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

IPL: ಪ್ಲೇ ಆಫ್‌ ರೇಸ್‌ ನಡುವೆಯೇ ಚೆನ್ನೈ ತಂಡಕ್ಕೆ ಆಘಾತ; ತವರಿಗೆ ಮರಳಿದ ಸ್ಟಾರ್‌ ಬೌಲರ್

1-wwwqewq

RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.