ಆಸೀಸ್‌ ಮಣಿಸಿ ಅಂಡರ್‌ 19 ವಿಶ್ವಕಪ್‌ ಎತ್ತಿದ ಭಾರತದ ಯುವ ಪಡೆ


Team Udayavani, Feb 3, 2018, 9:07 AM IST

258888.jpg

ಮೌಂಟ್‌ ಮಾಂಗನಿ: ಅಂಡರ್‌ 19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಶುಕ್ರವಾರ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ಭಾರತದ ಯುವ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡು ಸಂಭ್ರಮಿಸಿದೆ. 

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಪ್ರಥ್ವಿ ಶಾ ಪಡೆ ಬೌಲಿಂಗ್‌ ದಾಳಿಗೆ ಸಿಲುಕಿ 216 ರನ್‌ ಗಳಿಗೆ ಸರ್ವ ಪತನ ಕಂಡು ಗೆಲುವಿಗೆ 217 ರನ್‌ಗಳ ಸಾಧಾರಣ ಗುರಿ ಮುಂದಿಟ್ಟಿತ್ತು. ಗುರಿ ಬೆನ್ನಟ್ಟಿದ ಯುವ ಪಡೆ 38.5 ಓವರ್‌ಗಳಲ್ಲಿ  220 ರನ್‌ ಗಳಿಸಿ 8 ವಿಕೆಟ್‌ಗಳಿದ ವಿಜಯದ ಕೇಕೆ ಹಾಕಿತು. 

ಮನ್‌ಜೋತ್‌ ಕಾಲ್ರಾ ಅಮೋಘ ಶತಕ !
ಭಾರತ ತಂಡಕ್ಕೆ ಆಧಾರವಾದ ಆರಂಭಿಕ ಆಟಗಾರ ಮನ್‌ಜೋತ್‌ ಕಾಲ್ರಾ ನೆಲಕಚ್ಚಿ ಆಟವಾಡಿ ಭರ್ಜರಿ ಶತಕ ಸಿಡಿದರು. 102 ಎಸೆತಗಳಿಂದ 101 ರನ್‌ಗಳಿಸಿದ ಅವರು ಅಜೇಯರಾಗಿ ಉಳಿದರು. 

ಕಾಲ್ರಾಗೆ ಸಾಥ್‌ ನೀಡಿದ ನಾಯಕ ಪ್ರಥ್ವಿ ಶಾ 29 ರನ್‌ ಗಳಿಸಿ ಔಟಾದರೆ, ಶುಭಂ ಗಿಲ್‌ 31 ರನ್‌ಗಳಿಸಿ ಔಟಾದರು. ವಿಕೆಟ್‌ ಕೀಪರ್‌ ಹಾರ್ವಿಕ್‌ ದೇಸಾಯಿ 47 ರನ್‌ಗಳಿಸಿ ಅಜೇಯರಾಗಿ ಉಳಿದರು. 

ದ್ರಾವಿಡ್‌ ಶಿಷ್ಯರ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.  

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸೀಸ್‌ 32 ರನ್‌ ಆಗುವಷ್ಟರಲ್ಲಿ ಮೊದಲ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೊಳಗಾಯಿತು. 47.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. 

 3 ನೇ ವಿಕೆಟ್‌ಗೆ ಭರ್ಜರಿ ಜೊತೆಯಾಟವಾಡಿದ ಜೋನಾಥನ್‌ ಮೆರ್‌ಲೋ ಗರಿಷ್ಠ 76 ರನ್‌ಗಳಿಸಿ ನಿರ್ಗಮಿಸಿದರು. ತಂಡಕ್ಕೆ  ಆರಂಭಿಕ ಆಟಗಾರರಾದ ಜಾಕ್‌ ಎಡ್ವರ್ಡ್‌ 28 , ಮ್ಯಾಕ್ಸ್‌ ಬ್ರ್ಯಾಂಟ್‌ 14 ,ನಾಯಕ  ಜೇಸನ್‌ ಸಾಂಗಾ 13, ಪರಮ್‌ ಉಪ್ಪಲ್‌ 34 , ಮ್ಯಾಕ್‌ ಸ್ವೀನಿ 23 , ವಿಲ್‌ ಸಥರ್‌ಲ್ಯಾಂಡ್‌ 5 , ಬ್ಯಾಕ್‌ಸ್ಟರ್‌ ಜೆ ಹೋಲ್ಟ್ 13 ರನ್‌ ಕೊಡುಗೆ ಸಲ್ಲಿಸಿ ಔಟಾದರು. 

ಬಿಗಿ ಬೌಲಿಂಗ್‌ 
ಪ್ರಬಲ ಆಸೀಸ್‌ ತಂಡವನ್ನು ಬೌಲಿಂಗ್‌ನಲ್ಲೂ ಶಾ ಪಡೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಇಶಾನ್‌ ಪೊರೆಲ್‌, ಶಿವಸಿಂಗ್‌ , ಕಮಲೇಶ್‌ ನಾಗರಕೋಟಿ ಅನುಕೂಲ್‌ ರಾಯ್‌ ಅವರು ತಲಾ 2 ವಿಕೆಟ್‌ ಪಡೆದರೆ ಶಿವಮ್‌ ಮಾವಿ ಅವರು 1 ವಿಕೆಟ್‌ ಪಡೆದು ಆಸೀಸ್‌ ಕಟ್ಟಿ ಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದರು. 

ಭಾರತ ಕಂಡ 6ನೇ ಪ್ರಶಸ್ತಿ ಸಮರದಲ್ಲಿ  4 ನೇ  ಸಲ ಚಾಂಪಿಯನ್‌ ಆಗಿದೆ. ಈ ಹಿಂದೆ 2 ಸಲ ಫೈನಲ್‌ನಲ್ಲಿ ಎಡವಿತ್ತು. ಇದರಲ್ಲಿ 2016ರಲ್ಲಿ ನಡೆದ ಕಳೆದ ಸಲದ ವಿಶ್ವಕಪ್‌ ಫೈನಲ್‌ ಸೋಲು ಕೂಡ ಸೇರಿದೆ.

 5ನೇ ವಿಶ್ವಕಪ್‌ ಫೈನಲ್‌ ಆಡಿದ  ಆಸ್ಟ್ರೇಲಿಯಕ್ಕೆ ನಿರಾಶೆ ಅನುಭವಿಸಿತು.  3 ಸಲ ಟ್ರೋಫಿ ಎತ್ತಿದ ಕಾಂಗರೂ ಕಿರಿಯರು, ಒಮ್ಮೆ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದರು. ಅದು 2012ರ ಪ್ರಶಸ್ತಿ ಸಮರ. ಟೌನ್ಸ್‌ವಿಲ್ಲೆಯಲ್ಲಿ ಅಂದು ಆಸ್ಟ್ರೇಲಿಯಕ್ಕೆ ಎದುರಾದ ತಂಡ ಭಾರತ ಎಂಬುದು ವಿಶೇಷ. ಭಾರತದ ಗೆಲುವಿನ ಅಂತರ 6 ವಿಕೆಟ್‌. 2012ರ ಬಳಿಕ ಆಸ್ಟ್ರೇಲಿಯ ಕಾಣುತ್ತಿರುವ ಮೊದಲ ಫೈನಲ್‌ ಇದಾಗಿತ್ತು. 

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.