ಡೆಲ್ಲಿ ಫೈನಲ್ ಕನಸು ಛಿದ್ರ; ಫೈನಲ್‌ ಗೆ ಚೆನ್ನೈ

ಚೆನ್ನೈಗೆ 6 ವಿಕೆಟ್ ಜಯ ; ಮುಂಬೈ ವಿರುದ್ಧ ಫೈನಲ್

Team Udayavani, May 11, 2019, 6:00 AM IST

Chennai-Super-Kings

ವಿಶಾಖಪಟ್ಟಣ: ಮೊದಲ ಸಲ ಐಪಿಎಲ್ ಫೈನಲಿಗೇರುವ ಡೆಲ್ಲಿ ಕನಸು ಶುಕ್ರವಾರ ರಾತ್ರಿ ವಿಶಾಖಪಟ್ಟಣದಲ್ಲಿ ಛಿದ್ರಗೊಂಡಿದೆ. ಹಾಲಿ ಚಾಂಪಿಯನ್‌ ಚೆನ್ನೈ 6 ವಿಕೆಟ್ ಜಯಭೇರಿಯೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ರವಿವಾರ ಚೆನ್ನೈ-ಮುಂಬೈ ಪ್ರಶಸ್ತಿ ಸಮರದಲ್ಲಿ ಎದುರಾಗಲಿವೆ.

ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 9 ವಿಕೆಟಿಗೆ 147 ರನ್ನುಗಳ ಸಾಮಾನ್ಯ ಮೊತ್ತ ಗಳಿಸಿತು. ಇದನ್ನು ಸುಲಭದಲ್ಲಿ ಬೆನ್ನಟ್ಟಿಕೊಂಡು ಹೋದ ಚೆನ್ನೈ19 ಓವರ್‌ಗಳಲ್ಲಿ 4 ವಿಕೆಟಿಗೆ 151 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಆರಂಭಿಕರಾದ ಫಾ ಡು ಪ್ಲೆಸಿಸ್‌ ಮತ್ತು ಶೇನ್‌ ವಾಟ್ಸನ್‌ ಇಬ್ಬರೂ 50 ರನ್‌ ಪೇರಿಸಿ ಚೆನ್ನೈಗೆ ಮೇಲುಗೈ ಒದಗಿಸಿದರು. ವಾಟ್ಸನ್‌ 32 ಎಸೆತ ಎದುರಿಸಿ 4 ಸಿಕ್ಸರ್‌, 3 ಫೋರ್‌ ಸಿಡಿಸಿದರು. ಡು ಪ್ಲೆಸಿಸ್‌ ಅವರ 39 ಎಸೆತಗಳ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ, 1 ಸಿಕ್ಸರ್‌ ಸೇರಿತ್ತು.

ಜೋಶ್‌ ತೋರದ ಡೆಲ್ಲಿ
ಡೆಲ್ಲಿ ಯಾವ ಹಂತದಲ್ಲೂ ಟಿ20 ಜೋಶ್‌ ತೋರಲಿಲ್ಲ. ಅಯ್ಯರ್‌ ಪಡೆಯ ಆಟ ಕ್ವಾಲಿಫೈಯರ್‌ ಪಂದ್ಯದ ಮಟ್ಟದಿಂದ ಎಷ್ಟೋ ಹಿಂದಿತ್ತು. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಎಡವಿದ್ದ ಚೆನ್ನೈ ಬಿಗಿ ಬೌಲಿಂಗ್‌ ದಾಳಿ ಮೂಲಕ ಡೆಲ್ಲಿಗೆ ಕಡಿವಾಣ ಹಾಕಿತು. ಬ್ರಾವೊ, ಜಡೇಜ, ಚಹರ್‌, ತಾಹಿರ್‌ ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

ಡೆಲ್ಲಿ ಸರದಿಯಲ್ಲಿ ಯಾರಿಂದಲೂ ದೊಡ್ಡ ಜತೆಯಾಟ ದಾಖಲಾಗಲಿಲ್ಲ. 38 ರನ್‌ ಮಾಡಿದ ರಿಷಭ್‌ ಪಂತ್‌ ಅವರದೇ ಸರ್ವಾಧಿಕ ಮೊತ್ತ. ಆದರೆ ಅವರಿಗೂ ಇಲ್ಲಿ ದಿಗ್ಬಂಧನ ವಿಧಿಸಲಾಯಿತು. 25 ಎಸೆತ ಎದುರಿಸಿದ ಪಂತ್‌ ಸಿಡಿಸಿದ್ದು ಕೇವಲ 2 ಬೌಂಡರಿ ಹಾಗೂ ಒಂದು ಸಿಕ್ಸರ್‌.

ಎಲಿಮಿನೇಟರ್‌ ಪಂದ್ಯದಲ್ಲಿ ಮಿಂಚಿದ ಪೃಥ್ವಿ ಶಾ ಇಲ್ಲಿ ಸಿಡಿಯಲು ವಿಫ‌ಲರಾದರು. ಅವರ ಗಳಿಕೆ ಕೇವಲ 5 ರನ್‌. ಶಿಖರ್‌ ಧವನ್‌ ಸಿಡಿಯುವ ಸೂಚನೆಯಿತ್ತು ಅಷ್ಟೇ ಬೇಗ ವಾಪಸಾದರು. ಧವನ್‌ ಗಳಿಕೆ 14 ಎಸೆತಗಳಿಂದ 18 ರನ್‌ (3 ಬೌಂಡರಿ). ವನ್‌ಡೌನ್‌ನಲ್ಲಿ ಬಂದ ಕಾಲಿನ್‌ ಮುನ್ರೊ 24 ಎಸೆತ ನಿಭಾಯಿಸಿ 27 ರನ್‌ ಹೊಡೆದರು (4 ಬೌಂಡರಿ).

ಶ್ರೇಯಸ್‌ ಅಯ್ಯರ್‌ ಕಪ್ತಾನನ ಆಟವಾಡುವಲ್ಲಿ ಮತ್ತೂಮ್ಮೆ ವಿಫ‌ಲರಾದರು. 13 ರನ್ನಿಗೆ 18 ಎಸೆತ ತೆಗೆದುಕೊಂಡರು. ಹೊಡೆದದ್ದು ಒಂದೇ ಬೌಂಡರಿ. ಅಕ್ಷರ್‌ ಪಟೇಲ್ ಆಟ ಮೂರೇ ರನ್ನಿಗೆ ಮುಗಿಯಿತು.

ಆಲ್ರೌಂಡರ್‌ ರುದರ್‌ಫೋರ್ಡ್‌, ಕೀಮೊ ಪೌಲ್ ಕೂಡ ಕ್ಲಿಕ್‌ ಆಗಲಿಲ್ಲ. ಕೊನೆಯಲ್ಲಿ ಇಶಾಂತ್‌ ಶರ್ಮ 3 ಎಸೆತಗಳಿಂದ 10 ರನ್‌ (1 ಬೌಂಡರಿ, 1 ಸಿಕ್ಸರ್‌) ಬಾರಿಸಿ ಮಿಂಚಿದರು. ಇದು ಐಪಿಎಲ್ನಲ್ಲಿ ಅವರ ಅತ್ಯಧಿಕ ರನ್‌ ಆಗಿದೆ.

ಚೆನ್ನೈ ಒಂದು ಬದಲಾವಣೆ
ಈ ಪಂದ್ಯಕ್ಕಾಗಿ ಚೆನ್ನೈ ತನ್ನ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಂಡಿತು. ಮುಂಬೈ ವಿರುದ್ಧ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಿದ್ದ ಮುರಳಿ ವಿಜಯ್‌ ಅವರನ್ನು ಕೈಬಿಟ್ಟು ಬೌಲರ್‌ ಶಾರ್ದೂಲ್ ಠಾಕೂರ್‌ ಅವರಿಗೆ ಅವಕಾಶ ನೀಡಿತು. ಡೆಲ್ಲಿ ತಂಡದಲ್ಲಿ ಯಾವುದೇ ಪರಿವರ್ತನೆಯಾಗಲಿಲ್ಲ. ಹೈದರಾಬಾದ್‌ ವಿರುದ್ಧ ಎಲಿಮಿನೇಟರ್‌ ಪಂದ್ಯದಲ್ಲಿ ಆಡಿದ್ದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಿತು.

ಸ್ಕೋರ್‌ಪಟ್ಟಿ

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಎಲ್‌ಬಿಡಬ್ಲ್ಯು ಚಹರ್‌ 5
ಶಿಖರ್‌ ಧವನ್‌ ಸಿ ಧೋನಿ ಬಿ ಹರ್ಭಜನ್‌ 18
ಕಾಲಿನ್‌ ಮುನ್ರೊ ಸಿ ಬ್ರಾವೊ ಬಿ ಜಡೇಜ 27
ಶ್ರೇಯಸ್‌ ಅಯ್ಯರ್‌ ಸಿ ರೈನಾ ಬಿ ತಾಹಿರ್‌ 13
ರಿಷಭ್‌ ಪಂತ್‌ ಸಿ ಬ್ರಾವೊ ಬಿ ಚಹರ್‌ 38
ಅಕ್ಷರ್‌ ಪಟೇಲ್‌ ಸಿ ತಾಹಿರ್‌ ಬಿ ಬ್ರಾವೊ 3
ರುದರ್‌ಫೋರ್ಡ್‌ ಸಿ ವಾಟ್ಸನ್‌ ಬಿ ಹರ್ಭಜನ್‌ 10
ಕೀಮೊ ಪೌಲ್‌ ಬಿ ಬ್ರಾವೊ 3
ಅಮಿತ್‌ ಮಿಶ್ರಾ ಔಟಾಗದೆ 6
ಟ್ರೆಂಟ್‌ ಬೌಲ್ಟ್ ಬಿ ಜಡೇಜ 6
ಇಶಾಂತ್‌ ಶರ್ಮ ಔಟಾಗದೆ 10
ಇತರ 8
ಒಟ್ಟು (9 ವಿಕೆಟಿಗೆ) 147
ವಿಕೆಟ್‌ ಪತನ: 1-21, 2-37, 3-57, 4-75, 5-80, 6-102, 7-119, 8-125, 9-137.
ಬೌಲಿಂಗ್‌:
ದೀಪಕ್‌ ಚಹರ್‌ 4-0-28-2
ಶಾದೂìಲ್‌ ಠಾಕೂರ್‌ 1-0-13-0
ಹರ್ಭಜನ್‌ ಸಿಂಗ್‌ 4-0-31-2
ರವೀಂದ್ರ ಜಡೇಜ 3-0-23-2
ಇಮ್ರಾನ್‌ ತಾಹಿರ್‌ 4-0-28-1
ಡ್ವೇನ್‌ ಬ್ರಾವೊ 4-0-19-2

ಚೆನ್ನೈ ಸೂಪರ್‌ ಕಿಂಗ್ಸ್‌
ಫಾ ಡು ಪ್ಲೆಸಿಸ್‌ ಸಿ ಪೌಲ್‌ ಬಿ ಬೌಲ್ಟ್ 50
ಶೇನ್‌ ವಾಟ್ಸನ್‌ ಸಿ ಬೌಲ್ಟ್ ಬಿ ಮಿಶ್ರಾ 50
ಸುರೇಶ್‌ ರೈನಾ ಬಿ ಪಟೇಲ್‌ 11
ಅಂಬಾಟಿ ರಾಯುಡು ಔಟಾಗದೆ 20
ಎಂ.ಎಸ್‌. ಧೋನಿ ಸಿ ಪೌಲ್‌ ಬಿ ಇಶಾಂತ್‌ 9
ಡ್ವೇನ್‌ ಬ್ರಾವೊ ಔಟಾಗದೆ 4
ಇತರ 7
ಒಟ್ಟು (19 ಓವರ್‌ಗಳಲ್ಲಿ 4 ವಿಕೆಟಿಗೆ) 151
ವಿಕೆಟ್‌ ಪತನ: 1-61, 2-109, 3-127, 4-146.
ಬೌಲಿಂಗ್‌:
ಟ್ರೆಂಟ್‌ ಬೌಲ್ಟ್ 4-0-20-1
ಇಶಾಂತ್‌ ಶರ್ಮ 4-0-28-1
ಅಕ್ಷರ್‌ ಪಟೇಲ್‌ 4-0-32-1
ಅಮಿತ್‌ ಮಿಶ್ರಾ 4-0-21-1
ಕೀಮೊ ಪೌಲ್‌ 3-0-49-0

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.