ಕನ್ನಿಕಾ ಕಪೂರ್ಗೆ ಕೋವಿಡ್ 19: ದ.ಆಫ್ರಿಕಾ ಕ್ರಿಕೆಟಿಗರಿಗೆ ಆತಂಕ!
Team Udayavani, Mar 23, 2020, 6:46 AM IST
ಹೊಸದಿಲ್ಲಿ: ಬಾಲಿವುಡ್ ಸಿಂಗರ್ ಕನ್ನಿಕಾ ಕಪೂರ್ಗೆ ತಗುಲಿದ ಕೋವಿಡ್ 19 ಸೋಂಕು ಭಾರತ ಪ್ರವಾಸ ದಲ್ಲಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರನ್ನು ನಿದ್ದೆಗೆಡುವಂತೆ ಮಾಡಿದೆ. ಲಕ್ನೋದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಉಳಿದು ಕೊಂಡಿದ್ದ ಹೊಟೇಲ್ನಲ್ಲಿ ಕನ್ನಿಕಾ ಕೂಡ ತಂಗಿದ್ದೇ ಇದಕ್ಕೆ ಕಾರಣ!
3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಭಾರತಕ್ಕೆ ಬಂದ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಲಕ್ನೋದ ಪಂಚತಾರಾ ಹೊಟೇಲ್ನಲ್ಲಿ ಉಳಿದುಕೊಂಡಿದ್ದರು. ಆಗ ಕನ್ನಿಕಾ ಕೂಡ ಅದೇ ಹೊಟೇಲ್ನಲ್ಲಿ ತಂಗಿರುವುದಾಗಿ ತಿಳಿದು ಬಂದಿದೆ. ಜತೆಗೆ ಅಲ್ಲಿ ಸಾರ್ವಜನಿಕ ಭೋಜನ ಮಾಡಿದ್ದರು. ಹೊಟೇಲ್ ಲಾಬಿಯಲ್ಲಿ ಅವರನ್ನು ಬಹಳಷ್ಟು ಮಂದಿ ಮಾತನಾಡಿಸಿದ್ದರು. ನ್ಯೂಸ್ ಚಾನೆಲ್ ಒಂದರ ಜತೆ ಸುದ್ದಿಗೋಷ್ಠಿ ಕೂಡ ನಡೆಸಿದ್ದರು. ಆ ವೇಳೆ ಯಾರೆಲ್ಲ ಕನ್ನಿಕಾ ಅವರನ್ನು ಭೇಟಿಯಾಗಿದ್ದರು ಎಂಬುದರ ಸಿಸಿಟಿ ದೃಶ್ಯಾವಳಿಯನ್ನೀಗ ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ಯುಪಿ ಸರಕಾರ ಸ್ಪೆಷಲ್ ಟಾಸ್ಕ್ ಫೋರ್ಸ್ ಒಂದನ್ನು ಕೂಡ ರಚಿಸಿದೆ.
ಲಕ್ನೋ ಏಕದಿನ ಪಂದ್ಯವನ್ನಾಡುವ ಸಲುವಾಗಿ ಆಗಮಿಸಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಕೂಡ ಇದೇ ಹೊಟೇಲ್ನಲ್ಲಿದ್ದದ್ದು ಆತಂಕಕ್ಕೆ ಕಾರಣವಾಗಿದೆ. ಬಳಿಕ ಕೋವಿಡ್ 19 ಭೀತಿಯಿಂದ ಈ ಪಂದ್ಯದ ಜತೆಗೆ ಸರಣಿ ಕೂಡ ರದ್ದುಗೊಂಡು ಆಫ್ರಿಕಾ ಕ್ರಿಕೆಟಿಗರು ತವರಿಗೆ ಮರಳಿದರು. “ಕನ್ನಿಕಾ ಕೋವಿಡ್ 19 ಪ್ರಕರಣ’ವೀಗ ಹರಿಣಗಳ ನಾಡಿನ ಕ್ರಿಕೆಟ್ ವಲಯದಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ