ಈಡನ್ನಲ್ಲಿ ಕೆಕೆಆರ್-ಹೈದರಾಬಾದ್ ಮೇಲಾಟ
Team Udayavani, Mar 24, 2019, 7:01 AM IST
ಕೋಲ್ಕತಾ: ರವಿವಾರದ ಮೊದಲ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ರೈಡರ್ ಮತ್ತು ರನ್ನರ್ ಅಪ್ ಸನ್ರೈಸರ್ ಹೈದರಾಬಾದ್ ಮುಖಾಮುಖೀಯಾಗಲಿವೆ. ಮೇಲ್ನೋಟಕ್ಕೆ ಎರಡೂ ಸಮಬಲದ ತಂಡಗಳಾಗಿ ಗೋಚರಿಸುತ್ತಿದ್ದರೂ ಇದು “ಈಡನ್ ಗಾರ್ಡನ್ಸ್’ ಮೇಲಾಟವಾದ್ದರಿಂದ ಕೆಕೆಆರ್ ಒಂದು ಹೆಜ್ಜೆ ಮುಂದೆ ಎನ್ನಲಡ್ಡಿಯಿಲ್ಲ. ಕಳೆದ ವರ್ಷ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ಗೆ ಶರಣಾಗಿ ಕೂಟದಿಂದ ಹೊರಬಿದ್ದ ಕೆಕೆಆರ್ ಪಾಲಿಗೆ ಇದು ಸೇಡಿನ ಪಂದ್ಯವೂ ಆಗಿದೆ.
ಒಟ್ಟು 124 ವಿಕೆಟ್ ಪತನಕ್ಕೆ ಕಾರಣರಾಗಿ, ಐಪಿಎಲ್ನ ಯಶಸ್ವೀ ಕೀಪರ್ ಎನಿಸಿರುವ ದಿನೇಶ್ ಕಾರ್ತಿಕ್ ಸಾರಥ್ಯದಲ್ಲಿ ಕೆಕೆಆರ್ ಕಣಕ್ಕಿಳಿಯಲಿದೆ. ವೈಯಕ್ತಿಕವಾಗಿ ಈ ಸರಣಿ ಕಾರ್ತಿಕ್ಗೆ ಹೆಚ್ಚು ಮಹತ್ವದ್ದಾಗಿದೆ. ಕಾರಣ, ಏಕದಿನ ವಿಶ್ವಕಪ್. ಈಗಾಗಲೇ ವಿಶ್ವಕಪ್ ರೇಸ್ನಿಂದ ಬಹುತೇಕ ಹೊರಗುಳಿದರೂ ಇವರ “ಫಿನಿಶಿಂಗ್ ಟೆಕ್ನಿಕ್’ ಇಲ್ಲಿ ಗಣನೆಗೆ ಬರಬಹುದು.
ಕೆಕೆಆರ್ನಲ್ಲಿ ಕೆರಿಬಿಯನ್ನರು
ಕೆಕೆಆರ್ ಕೆರಿಬಿಯನ್ ಆಟಗಾರರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ಆರಂಭಿಕನಾಗಿಯೂ ಕ್ಲಿಕ್ ಆಗಿರುವ ಲೆಗ್ಗಿ ಸುನೀಲ್ ನಾರಾಯಣ್, ಕಾರ್ಲೋಸ್ ಬ್ರಾತ್ವೇಟ್, ಆ್ಯಂಡ್ರೆ ರಸೆಲ್ ಅವರ ಜತೆಗೆ ಕಾಂಗರೂ ನಾಡಿನ ಕ್ರಿಸ್ ಲಿನ್ ಬ್ಯಾಟಿಂಗ್ “ಫೈರ್ ಪವರ್’ ಹೊಂದಿದ್ದಾರೆ. ಉತ್ತಪ್ಪ, ಗಿಲ್, ರಾಣ, ಕುಲದೀಪ್ ಅವರೆಲ್ಲ ತವರಿನ ಹೀರೋಗಳು.
ವಾರ್ನರ್ ಜತೆಗಾರ ಯಾರು?
ಹೈದರಾಬಾದ್ಗೆ ಈ ಬಾರಿ ಧವನ್ ನೆರವಿಲ್ಲ. ವಾರ್ನರ್ ಜತೆಗಾರ ಯಾರೆಂಬುದೊಂದು ಕುತೂಹಲ. ನಾಯಕ ವಿಲಿಯಮ್ಸನ್, ಪಾಂಡೆ, ಸಾಹಾ, ಆಲ್ರೌಂಡರ್ಗಳಾದ ಶಕಿಬ್, ವಿಜಯ್ ಶಂಕರ್, ಯೂಸುಫ್ ಪಠಾಣ್ ಬ್ಯಾಟಿಂಗ್ ಸರದಿಯ ಪ್ರಮುಖರು. ಆದರೆ ಬೌಲಿಂಗ್ ವಿಭಾಗ ಹೆಚ್ಚು ಬಲಿಷ್ಠ. ರಶೀದ್ ಖಾನ್, ಭುವನೇಶ್ವರ್ ಅಪಾಯಕಾರಿಗಳಾಗಬಲ್ಲರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?