ಲೆವಿಸ್‌ ಹೊಡೆತಕ್ಕೆ ಬೆಚ್ಚಿತು ಭಾರತ


Team Udayavani, Jul 11, 2017, 2:50 AM IST

levis.jpg

ಕಿಂಗ್‌ಸ್ಟನ್‌ (ಜಮೈಕಾ): ರವಿವಾರದ ಏಕೈಕ ಟಿ-20 ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸಿನ ಎಡಗೈ ಆರಂಭಕಾರ ಎವಿನ್‌ ಲೆವಿಸ್‌ ಅವರ ಬ್ಯಾಟಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಭಾರತ 9 ವಿಕೆಟ್‌ಗಳ ಭಾರೀ ಸೋಲಿಗೆ ತುತ್ತಾಗಿದೆ. ಏಕದಿನ ಸರಣಿ ಕಳೆದುಕೊಂಡ ಕೆರಿಬಿಯನ್ನರ ಮೊಗದಲ್ಲಿ ಗೆಲುವಿನ ಮಂದಹಾಸ ಅರಳಿದೆ.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 190 ರನ್ನುಗಳ ದೊಡ್ಡ ಮೊತ್ತವನ್ನೇ ಪೇರಿಸಿತ್ತು. ಆದರೆ ಇದು ತನಗೆ ಲೆಕ್ಕಕ್ಕೇ ಇಲ್ಲ ಎಂಬ ರೀತಿಯಲ್ಲಿ ಬ್ಯಾಟ್‌ ಬೀಸಿದ ವೆಸ್ಟ್‌ ಇಂಡೀಸ್‌ 18.3 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 194 ರನ್‌ ಬಾರಿಸಿ ಗೆದ್ದು ಬಂದಿತು. ಎವಿನ್‌ ಲೆವಿಸ್‌ ಒಬ್ಬರೇ 125 ರನ್‌ ಸೂರೆಗೈದರು!

ಈ ಏಕೈಕ ಪಂದ್ಯಕ್ಕಾಗಿ ಗೇಲ್‌, ಪೊಲಾರ್ಡ್‌, ಸಾಮ್ಯುಯೆಲ್ಸ್‌, ನಾರಾಯಣ್‌, ಬದ್ರಿ ಮೊದಲಾದ ಬಲಾಡ್ಯರನ್ನು ಸೇರಿಸಿಕೊಂಡಾಗಲೇ ವೆಸ್ಟ್‌ ಇಂಡೀಸ್‌ ಬಗ್ಗೆ ಅಪಾಯದ ಮುನ್ಸೂಚನೆ ಲಭಿಸಿತ್ತು. ಆದರೆ ಈ ಪಂದ್ಯದ ಸ್ಟಾರ್‌ ಆಗಿ ಮೆರೆದದ್ದು ಮಾತ್ರ ಎವಿನ್‌ ಲೆವಿಸ್‌. ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಹೋದ ಟ್ರಿನಿಡಾಡ್‌ನ‌ ಈ ಬ್ಯಾಟ್ಸ್‌ಮನ್‌ ಕೇವಲ 62 ಎಸೆತಗಳಲ್ಲಿ ಅಜೇಯ 125 ರನ್‌ ಬಾರಿಸಿ ವಿಂಡೀಸ್‌ ಜಯಭೇರಿ ಮೊಳಗಿಸಿದರು. ಲೆವಿಸ್‌ ಆರ್ಭಟದ ವೇಳೆ 12 ಪ್ರಚಂಡ ಸಿಕ್ಸರ್‌ ಹಾಗೂ 6 ಬೌಂಡರಿ ಸಿಡಿಯಿತು. ಅವರ ಶತಕ 53 ಎಸೆತಗಳಲ್ಲಿ ದಾಖಲಾಯಿತು. ಜಡೇಜ 5 ಸಿಕ್ಸರ್‌, ಅಶ್ವಿ‌ನ್‌ 4 ಸಿಕ್ಸರ್‌ ನೀಡಿ ದಂಡಿಸಿಕೊಂಡರು.

ಇದು ಎವಿನ್‌ ಲೆವಿಸ್‌ ಬಾರಿಸಿದ 2ನೇ ಟಿ-20 ಶತಕ. ಎರಡೂ ಭಾರತದ ವಿರುದ್ಧವೇ ದಾಖಲಾದದ್ದು ವಿಶೇಷ. ಮೊದಲ ಶತಕ ಕಳೆದ ವರ್ಷ ಲಾಡರ್‌ಹಿಲ್‌ನಲ್ಲಿ ಬಂದಿತ್ತು. ಅಲ್ಲಿ 49 ಎಸೆತಗಳಿಂದ ಭರ್ತಿ 100 ರನ್‌ ಬಾರಿಸಿದ್ದರು. 
ಭಾರತಕ್ಕೆ ದಕ್ಕಿದ ಏಕೈಕ ವಿಕೆಟ್‌ ಕ್ರಿಸ್‌ ಗೇಲ್‌ ಅವರದಾಗಿತ್ತು. 18 ರನ್‌ ಮಾಡಿದ ಗೇಲ್‌ ಅವರನ್ನು ಕುಲದೀಪ್‌ ಯಾದವ್‌ ಕೀಪರ್‌ ಧೋನಿಗೆ ಕ್ಯಾಚ್‌ ಕೊಡಿಸುವ ಮೂಲಕ ಪೆವಿಲಿಯನ್ನಿಗೆ ರವಾನಿಸಿದರು. ಆಗ ಸ್ಕೋರ್‌ 8.2 ಓವರ್‌ಗಳಲ್ಲಿ 82 ರನ್‌ ಆಗಿತ್ತು. ವಿಂಡೀಸ್‌ ಓವರಿಗೆ ಹತ್ತರ ಸರಾಸರಿಯ ವೇಗ ಹೊಂದಿತ್ತು. ಕುಲದೀಪ್‌ಗೆ ಇದು ಪಾದಾರ್ಪಣಾ ಟಿ-20 ಪಂದ್ಯವಾಗಿತ್ತು.

ಮುಂದಿನದು ಲೆವಿಸ್‌-ಸಾಮ್ಯುಯೆಲ್ಸ್‌ ಜೋಡಿಯ ಪ್ರಚಂಡ ಆಟ. 10.1 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಇವರು ಮುರಿಯದ 2ನೇ ವಿಕೆಟಿಗೆ 112 ರನ್‌ ಸೂರೆಗೈದರು. ಕಳಪೆ ಫೀಲ್ಡಿಂಗ್‌, ಕೈಚೆಲ್ಲಿದ ಕ್ಯಾಚ್‌ಗಳು, “ಸಬೀನಾ ಪಾರ್ಕ್‌’ನ ಫ್ಲ್ಯಾಟ್‌ ಟ್ರ್ಯಾಕ್‌ನಲ್ಲಿ ಉಳಿಸಿಕೊಳ್ಳಲಾಗದ ಆರಂಭಿಕ ಬ್ಯಾಟಿಂಗ್‌ ರಭಸವೆಲ್ಲ ಭಾರತದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದವು. 

ಉಳಿಯಲಿಲ್ಲ ಆರಂಭಿಕ ವೇಗ…
ಸ್ವತಃ ವಿಂಡೀಸ್‌ ನಾಯಕ ಬ್ರಾತ್‌ವೇಟ್‌ ನೀಡಿದ ಹೇಳಿಕೆಯಂತೆ, ಈ ಪಿಚ್‌ನಲ್ಲಿ ಭಾರತ 210ರಷ್ಟು ಮೊತ್ತವನ್ನು ಧಾರಾಳವಾಗಿ ಪೇರಿಸಬಹುದಿತ್ತು. ಕೊಹ್ಲಿ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟುವ ಮೂಲಕ ಬಿರುಸಿನ ಆಟಕ್ಕೆ ಮುಹೂರ್ತವಿರಿಸಿದ್ದರು. ಶಿಖರ್‌ ಧವನ್‌ ಕೂಡ ಸಿಡಿದು ನಿಂತರು. ಇವರಿಬ್ಬರ 5.3 ಓವರ್‌ಗಳ ಮೊದಲ ವಿಕೆಟ್‌ ಜತೆಯಾಟದಲ್ಲಿ 64 ರನ್‌ ಒಟ್ಟುಗೂಡಿತ್ತು. ಆದರೆ ವನ್‌ಡೌನ್‌ನಲ್ಲಿ ಬಂದ ರಿಷಬ್‌ ಪಂತ್‌ ಬ್ಯಾಟಿಂಗಿನಲ್ಲಿ ಬಿರುಸು ಕಂಡುಬರಲಿಲ್ಲ. ಅವರ 38 ರನ್ನಿಗೆ 35 ಎಸೆತ ತಗುಲಿತು (2 ಬೌಂಡರಿ, 1 ಸಿಕ್ಸರ್‌). ಕೊಹ್ಲಿ 22 ಎಸೆತಗಳಿಂದ 39 ರನ್‌ (7 ಬೌಂಡರಿ, 1 ಸಿಕ್ಸರ್‌), ಧವನ್‌ 12 ಎಸೆತಗಳಿಂದ 23 ರನ್‌ (5 ಬೌಂಡರಿ) ಹೊಡೆದರು.

ಭಾರತದ ಸರದಿಯಲ್ಲಿ 48 ರನ್‌ ಮಾಡಿದ ದಿನೇಶ್‌ ಕಾರ್ತಿಕ್‌ ಅವರದೇ ಸರ್ವಾಧಿಕ ಗಳಿಕೆ. 29 ಎಸೆತ ಎದುರಿಸಿದ ಅವರು 3 ಸಿಕ್ಸರ್‌, 5 ಬೌಂಡರಿ ಬಾರಿಸಿ ಮೆರೆದರು. ಆದರೆ ಧೋನಿ (2) ಮತ್ತು ಜಾಧವ್‌ (4) ಕ್ಲಿಕ್‌ ಆಗಲಿಲ್ಲ. 
ವೆಸ್ಟ್‌ ಇಂಡೀಸ್‌ ಪರ ಜೆರೋಮ್‌ ಟಯ್ಲರ್‌ ಮತ್ತು ಕೆಸ್ರಿಕ್‌ ವಿಲಿಯಮ್ಸ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌ ಪಟ್ಟಿ
ಭಾರತ

ವಿರಾಟ್‌ ಕೊಹ್ಲಿ    ಸಿ ನಾರಾಯಣ್‌ ಬಿ ವಿಲಿಯಮ್ಸ್‌    39
ಶಿಖರ್‌ ಧವನ್‌    ರನೌಟ್‌    23
ರಿಷಬ್‌ ಪಂತ್‌    ಸಿ ವಾಲ್ಟನ್‌ ಬಿ ಟಯ್ಲರ್‌    38
ದಿನೇಶ್‌ ಕಾರ್ತಿಕ್‌    ಬಿ ಸಾಮ್ಯುಯೆಲ್ಸ್‌    48
ಎಂ.ಎಸ್‌. ಧೋನಿ    ಸಿ ಸಾಮ್ಯುಯೆಲ್ಸ್‌ ಬಿ ಟಯ್ಲರ್‌    2
ಕೇದಾರ್‌ ಜಾಧವ್‌    ಸಿ ನಾರಾಯಣ್‌ ಬಿ ವಿಲಿಯಮ್ಸ್‌    4
ರವೀಂದ್ರ ಜಡೇಜ    ಔಟಾಗದೆ    13
ಆರ್‌. ಅಶ್ವಿ‌ನ್‌    ಔಟಾಗದೆ    11
ಇತರ        12
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)    190
ವಿಕೆಟ್‌ ಪತನ:
1-64, 2-65, 3-151, 4-156, 5-156, 6-164.
ಬೌಲಿಂಗ್‌:
ಸಾಮ್ಯುಯೆಲ್‌ ಬದ್ರಿ        4-0-31-0
ಜೆರೋಮ್‌ ಟಯ್ಲರ್‌        4-0-31-2
ಕೆಸ್ರಿಕ್‌ ವಿಲಿಯಮ್ಸ್‌        4-0-42-2
ಕಾರ್ಲೋಸ್‌ ಬ್ರಾತ್‌ವೇಟ್‌    2-0-26-0
ಸುನೀಲ್‌ ನಾರಾಯಣ್‌    3-0-22-0
ಮಾರ್ಲಾನ್‌ ಸಾಮ್ಯುಯೆಲ್ಸ್‌    3-0-32-1
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌    ಸಿ ಧೋನಿ ಬಿ ಕುಲದೀಪ್‌    18
ಎವಿನ್‌ ಲೆವಿಸ್‌    ಔಟಾಗದೆ    125
ಎಂ. ಸಾಮ್ಯುಯೆಲ್‌    ಔಟಾಗದೆ    36
ಇತರ        15
ಒಟ್ಟು  (18.3 ಓವರ್‌ಗಳಲ್ಲಿ 1 ವಿಕೆಟಿಗೆ)    194
ವಿಕೆಟ್‌ ಪತನ: 1-82.
ಬೌಲಿಂಗ್‌:

ಭುವನೇಶ್ವರ್‌ ಕುಮಾರ್‌    4-0-27-0
ಆರ್‌. ಅಶ್ವಿ‌ನ್‌        4-0-39-0
ಮೊಹಮ್ಮದ್‌ ಶಮಿ        3-0-46-0
ಕುಲದೀಪ್‌ ಯಾದವ್‌    4-0-34-1
ರವೀಂದ್ರ ಜಡೇಜ        3.3-0-41-0
ಪಂದ್ಯಶ್ರೇಷ್ಠ: ಎವಿನ್‌ ಲೆವಿಸ್‌

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.