ಆಕ್ಲೆಂಡ್‌ನ‌ಲ್ಲಿ ಗೆದ್ದು ಬೀಗಿದ ಭಾರತ


Team Udayavani, Feb 9, 2019, 12:30 AM IST

w-6.jpg

ಆಕ್ಲೆಂಡ್‌: ಕೃಣಾಲ್‌ ಪಾಂಡ್ಯ ಅವರ ನಿಯಂತ್ರಿತ ಬೌಲಿಂಗ್‌, ರೋಹಿತ್‌ ಶರ್ಮ ಅವರ ಅಬ್ಬರದ ಆರಂಭ ಹಾಗೂ ರಿಷಬ್‌ ಪಂತ್‌ ಅವರ ಪರಿಪೂರ್ಣ ಫಿನಿಶಿಂಗ್‌ ಸಾಹಸ ದಿಂದ 2ನೇ ಟಿ20 ಪಂದ್ಯದಲ್ಲಿ ಭಾರತ ಆತಿಥೇಯ ನ್ಯೂಜಿಲೆಂಡಿಗೆ ತಿರುಗೇಟು ನೀಡಿದೆ. 7 ವಿಕೆಟ್ ಜಯದೊಂದಿಗೆ ಸರಣಿಯನ್ನು ಸಮ ಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

ವೆಲ್ಲಿಂಗ್ಟನ್‌ ಪಂದ್ಯದಂತೆ ಶುಕ್ರವಾರ ಆಕ್ಲೆಂಡ್‌ನ‌ ‘ಈಡನ್‌ ಪಾರ್ಕ್‌’ನಲ್ಲೂ ನ್ಯೂಜಿಲೆಂಡ್‌ ಮೊದಲು ಬ್ಯಾಟಿಂಗ್‌ ನಡೆಸಿತು. ಆದರೆ ಇನ್ನೂರರ ಗಡಿ ದಾಟಲು ಭಾರತದ ಬೌಲರ್‌ಗಳು ಬಿಡಲಿಲ್ಲ. ವಿಲಿಯಮ್ಸನ್‌ ಪಡೆಗೆ ಗಳಿಸಲು ಸಾಧ್ಯವಾದದ್ದು 8ಕ್ಕೆ 158 ರನ್‌ ಮಾತ್ರ. ಯಾವುದೇ ಒತ್ತಡಕ್ಕೊಳಗಾ ಗದೆ ಜವಾಬಿತ್ತ ಭಾರತ 18.5 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 162 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಸಿಡಿದ ರೋಹಿತ್‌: ಭಾರತದ ಚೇಸಿಂಗ್‌ ವೇಳೆ ರೋಹಿತ್‌ ಶರ್ಮ ಆಕ್ರಮಣಕಾರಿ ಆಟಕ್ಕಿಳಿದರು. ಶಿಖರ್‌ ಧವನ್‌ ಕೂಡ ಸಿಡಿದು ನಿಂತರು. ಇವರಿಂದ 9.2 ಓವರ್‌ಗಳಲ್ಲಿ 79 ರನ್‌ ಒಟ್ಟುಗೂಡಿತು. ಆಗ 29 ಎಸೆತಗಳಿಂದ ಭರ್ತಿ 50 ರನ್‌ ಬಾರಿಸಿದ ರೋಹಿತ್‌ ಅವರಿಗೆ ಸೋಧಿ ಬಲೆ ಬೀಸಿದರು. ರೋಹಿತ್‌ 4 ಸಿಕ್ಸರ್‌, 3 ಬೌಂಡರಿ ಬಾರಿಸಿ ಅಬ್ಬರಿಸಿದ್ದರು.

ಪಂತ್‌-ಧೋನಿ ಅಜೇಯ ಆಟ: 4ನೇ ವಿಕೆಟಿಗೆ ಜತೆಗೂಡಿದ ಪಂತ್‌ ಮತ್ತು ಧೋನಿ ಅಜೇಯ ಆಟದ ಮೂಲಕ ಭಾರತದ ಕೆಲಸವನ್ನು ಸುಲಭಗೊಳಿಸಿದರು. ಭರ್ಜರಿ ಜೋಶ್‌ನಲ್ಲಿದ್ದ ಪಂತ್‌ ಕೆಲವು ಆಕರ್ಷಕ ಹೊಡೆತಗಳ ಮೂಲಕ ರಂಜಿಸಿದರು. ಸೌದಿ ಎಸೆತವನ್ನು ಒಂದೇ ಕೈಯಿಂದ ಸಿಕ್ಸರ್‌ಗೆ ಅಟ್ಟಿದ್ದು, ಕ್ಯುಗೆಲೀನ್‌ ಎಸೆತವನ್ನು ‘ಬೌಲರ್ ಬ್ಯಾಕ್‌ ಡ್ರೈವ್‌’ ಫೋರ್‌ಗೆ ರವಾನಿಸಿ ಭಾರತದ ಗೆಲುವನ್ನು ಸಾರಿದ್ದೆಲ್ಲ ಪಂತ್‌ ಪರಾಕ್ರ ಮಕ್ಕೆ ಸಾಕ್ಷಿಯಾಗಿತ್ತು. ಪಂತ್‌ಕೊಡುಗೆ 28 ಎಸೆತಗಳಿಂದ ಅಜೇ ಯ 40 ರನ್‌. ಧೋನಿ 17 ಎಸೆತ ನಿಭಾಯಿಸಿ ಅಜೇಯ 20 ರನ್‌ ಹೊಡೆದರು. ಇದರಲ್ಲಿದ್ದದ್ದು ಒಂದು ಬೌಂಡರಿ ಮಾತ್ರ. ಪಂತ್‌-ಧೋನಿ 5.1 ಓವರ್‌ಗಳಲ್ಲಿ ಮುರಿಯದ 4ನೇ ವಿಕೆಟಿಗೆ 44 ರನ್‌ ಸೇರಿಸಿದರು.

ಕೃಣಾಲ್‌ ಪಾಂಡ್ಯ ಕಡಿವಾಣ: ಕಿವೀಸ್‌ಗೆ ಕಡಿವಾಣ ಹಾಕುವಲ್ಲಿ ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ ಪಾತ್ರ ಮಹತ್ವದ್ದಾಗಿತ್ತು. ಅವರು 4 ಓವರ್‌ಗಳ ಪೂರ್ತಿ ಕೋಟಾದಲ್ಲಿ 28 ರನ್ನಿತ್ತು 3 ಪ್ರಮುಖ ವಿಕೆಟ್ ಹಾರಿಸಿದರು. ಕೃಣಾಲ್‌ ಮೋಡಿಗೆ ಸಿಲುಕಿದವರೆಂ ದರೆ ಕಾಲಿನ್‌ ಮನ್ರೊ, ಡ್ಯಾರಿಲ್‌ ಮಿಚೆಲ್‌, ಕೇನ್‌ ವಿಲಿಯಮ್ಸನ್‌.

ರೋಹಿತ್‌ ದಾಖಲೆ
•ಟಿ20 ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮ ಸರ್ವಾಧಿಕ ರನ್‌ ಬಾರಿಸಿದರು (2,288). ಮಾರ್ಟಿನ್‌ ಗಪ್ಟಿಲ್‌ ಅವರ 2,272 ರನ್ನುಗಳ ದಾಖಲೆ ಪತನಗೊಂಡಿತು.

•ಟಿ20ಯಲ್ಲಿ 100 ಸಿಕ್ಸರ್‌ ಬಾರಿಸಿದ 3ನೇ ಆಟಗಾರನೆನಿಸಿದರು (102) ರೋಹಿತ್‌ . ಗೇಲ್‌ ಮತ್ತು ಗಪ್ಟಿಲ್‌ 103 ಸಿಕ್ಸರ್‌ ಸಿಡಿಸಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

•ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್‌ 349 ಸಿಕ್ಸರ್‌ ಬಾರಿಸಿ ಭಾರತೀಯ ದಾಖಲೆ ಬರೆ ದರು. ಧೋನಿ ಅವರ 348 ಸಿಕ್ಸರ್‌ಗಳ ದಾಖಲೆ ಪತನಗೊಂಡಿತು.

•ರೋಹಿತ್‌ ನಾಯಕನಾಗಿ ಮೊದಲ 14 ಪಂದ್ಯಗಳಲ್ಲಿ ಅತೀ ಹೆಚ್ಚು 12 ಗೆಲುವು ದಾಖಲಿಸಿದ ಮೈಕಲ್‌ ಕ್ಲಾರ್ಕ್‌ ಮತ್ತು ಸಫ‌ರ್ರಾಜ್‌ ದಾಖಲೆ ಸರಿದೂಗಿಸಿದರು.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.