ಮ್ಯಾಂಚೆಸ್ಟರ್ ಅಂಗಣದಲ್ಲಿ ಸಚಿನ್, ಕುಂಬ್ಳೆ ಸೃಷ್ಟಿಸಿದ ಇತಿಹಾಸಕ್ಕೆ 30ರ ಸಂಭ್ರಮ

ತೆಂಡುಲ್ಕರ್‌ 100 ಶತಕಗಳಿಗೆ ಮುಹೂರ್ತವಿರಿಸಿ ಉರುಳಿತು ಮೂವತ್ತು ವರ್ಷ!

Team Udayavani, Aug 14, 2020, 5:33 PM IST

ಮ್ಯಾಂಚೆಸ್ಟರ್ ಅಂಗಣದಲ್ಲಿ ಸಚಿನ್, ಕುಂಬ್ಲೆ ಸೃಷ್ಟಿಸಿದ ಇತಿಹಾಸಕ್ಕೆ 30ರ ಸಂಭ್ರಮ

ಮುಂಬಯಿ: ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕಕ್ಕೆ ಶುಕ್ರವಾರ ಬರೋಬ್ಬರಿ 30 ವರ್ಷ ತುಂಬಿತು. ಅರ್ಥಾತ್‌, ಅವರು ತಮ್ಮ ಶತಕಗಳ ಶತಕಕ್ಕೆ ಮುಹೂರ್ತವಿರಿಸಿ ಮೂರು ದಶಕಗಳೇ ಉರುಳಿದವು. ಈ ಸಂದರ್ಭದಲ್ಲಿ ನೆನಪಿನಂಗಳದಲ್ಲಿ ವಿಹರಿಸಿದ್ದಾರೆ ವಾಮನಮೂರ್ತಿ…

“ನನ್ನ ಮೊದಲ ಅಂತಾರಾಷ್ಟ್ರೀಯ ಶತಕ ವಿಶೇಷ ಸಂದರ್ಭದಲ್ಲಿ ದಾಖಲಾಯಿತು. ಅಂದು ಆಗಸ್ಟ್‌ 14. ಮರುದಿನವೇ ಭಾರತದ ಸ್ವಾತಂತ್ರ್ಯ ಸಂಭ್ರಮ. ಈ ಕಾರಣಕ್ಕಾಗಿ ನನ್ನ ಪಾಲಿಗೆ ಇದೊಂದು ಸ್ಪೆಷಲ್‌ ಸೆಂಚುರಿ. ಜತೆಗೆ ಟೆಸ್ಟ್‌ ಪಂದ್ಯವೊಂದನ್ನು ಉಳಿಸಿಕೊಳ್ಳುವುದೂ ಒಂದು ಕಲೆ ಎಂಬುದರ ಪಾಠವೊಂದು ನನಗೆ ಲಭಿಸಿತು. ಸರಣಿ ಜೀವಂತವಾಗಿ ಉಳಿಯಿತು…’ ಎಂದು 1990ರ ಆಗಸ್ಟ್‌ 14ರ ದಿನವನ್ನು ಸಚಿನ್‌ ಸ್ಮರಿಸಿಕೊಂಡಿದ್ದಾರೆ.

ಸಚಿನ್‌-ಪ್ರಭಾಕರ್‌ ಜತೆಯಾಟ
ಅಜರುದ್ದೀನ್‌ ನೇತೃತ್ವದ ಭಾರತ ಅಂದು ಇಂಗ್ಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ದ್ವಿತೀಯ ಟೆಸ್ಟ್‌ ಆಡಲಿಳಿದಿತ್ತು. ಮೊದಲ ಸರದಿಯಲ್ಲಿ 68 ರನ್‌ ಬಾರಿಸಿ ಮಿಂಚಿದ ಸಚಿನ್‌, ದ್ವಿತೀಯ ಸರದಿಯಲ್ಲಿ ಅಜೇಯ 119 ರನ್‌ (189 ಎಸೆತ, 17 ಬೌಂಡರಿ) ಬಾರಿಸಿ ಭಾರತವನ್ನು ಸೋಲಿನಿಂದ ಬಚಾಯಿಸಿದ್ದರು. 408 ರನ್‌ ಟಾರ್ಗೆಟ್‌ ಪಡೆದಿದ್ದ ಭಾರತ, ಪಂದ್ಯ ಮುಗಿಯುವಾಗ 6ಕ್ಕೆ 343 ರನ್‌ ಗಳಿಸಿತ್ತು. ಈ 6 ವಿಕೆಟ್‌ 183 ರನ್ನಿಗೆ ಉರುಳಿದಾಗ ಭಾರತ ಸೋಲಿನ ಆತಂಕದಲ್ಲಿತ್ತು. ಆದರೆ 6ನೇ ಕ್ರಮಾಂಕದಲ್ಲಿ ಆಡಲಿಳಿದ ಸಚಿನ್‌ ಮತ್ತು ನಂ.8 ಆಟಗಾರ ಮನೋಜ್‌ ಪ್ರಭಾಕರ್‌ (ಅಜೇಯ 67) ಸೇರಿಕೊಂಡು ಮುರಿಯದ 7ನೇ ವಿಕೆಟಿಗೆ 160 ರನ್‌ ಪೇರಿಸಿ ಇಂಗ್ಲೆಂಡಿನ ಕನಸನ್ನು ಛಿದ್ರಗೊಳಿಸಿದ್ದರು. “ಯೇ ಹಮ್‌ ಕರ್‌ ಸಕ್ತೇ ಹೇಂ, ಮ್ಯಾಚ್‌ ಬಚಾ ಲೇಂಗೆ’ ಎಂದು ಪ್ರಭಾಕರ್‌ ಧೈರ್ಯ ತುಂಬಿಸಿದ್ದನ್ನು ಸಚಿನ್‌ ನೆನಪಿಸಿಕೊಂಡರು.

ಎರಡೂ ಇನ್ನಿಂಗ್ಸ್‌ಗಳಲ್ಲಿ ಮಿಂಚಿದ ಸಚಿನ್‌ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಇದಕ್ಕಾಗಿ ನೀಡಿದ ಶಾಂಪೇನ್‌ ಬಾಟಲಿಯನ್ನು ಓಪನ್‌ ಮಾಡಲು ಸಚಿನ್‌ಗೆ ಕಾನೂನು ನಿಯಮ ಅಡ್ಡಿಯಾಗಿತ್ತು. ಏಕೆಂದರೆ, ಅವರಿಗೆ ಆಗ 18 ವರ್ಷ ತುಂಬಿರಲಿಲ್ಲ!

ಮೊದಲ ಶತಕಕ್ಕಾಗಿ ಸಂಜಯ್‌ ಮಾಂಜ್ರೆಕರ್‌ ಬಿಳಿ ಟೀ-ಶರ್ಟ್‌ ಒಂದನ್ನು ಉಡುಗೊರೆಯಾಗಿ ನೀಡಿದ್ದನ್ನೂ ತೆಂಡುಲ್ಕರ್‌ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಅಂದಿನ ಶತಕದ ಬಳಿಕ ಸಚಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನೂ 50 ಸೆಂಚುರಿ ಬಾರಿಸುತ್ತಾರೆಂದು ಬಹುಶಃ ಯಾರೂ ಭಾವಿಸಿರಲಿಲ್ಲ.

ಇಲ್ಲಿ ಉಲ್ಲೇಖೀಸಲೇಬೇಕಾದ ಇನ್ನೊಂದು ಸಂಗತಿಯಿದೆ. ಇದು ಸ್ಪಿನ್‌ ಮಾಂತ್ರಿಕನಾಗಿ ಮೆರೆದ ಅನಿಲ್‌ ಕುಂಬ್ಳೆ ಅವರ ಪದಾರ್ಪಣ ಟೆಸ್ಟ್‌ ಪಂದ್ಯವಾಗಿತ್ತು!

ಟಾಪ್ ನ್ಯೂಸ್

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.