ಪ್ರೊ ಕಬಡ್ಡಿ: ಬೆಂಗಾಲ್ ಭರ್ಜರಿ ಗೆಲುವು
ಆತಿಥೇಯ ತೆಲುಗು ಟೈಟಾನ್ಸ್ಗೆ ಹ್ಯಾಟ್ರಿಕ್ ಸೋಲಿನ ಸಂಕಟ
Team Udayavani, Jul 25, 2019, 5:10 AM IST
ಹೈದರಾಬಾದ್: ಪ್ರೊ ಕಬಡ್ಡಿ 7ನೇ ಆವೃತ್ತಿಯ ಹೈದರಾಬಾದ್ ಚರಣದ ಬುಧವಾರದ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಬೆಂಗಾಲ್ ವಾರಿಯರ್ 48-17 ಅಂಕಗಳಿಂದ ಪ್ರಚಂಡ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಎರಡೂ ತಂಡಗಳಿಗೆ ಇದು ಕೂಟದ ಮೊದಲ ಪಂದ್ಯವಾಗಿತ್ತು.
ಈ ಪಂದ್ಯ ಏಕಪಕ್ಷೀಯವಾಗಿ ಸಾಗಿದರೆ, ದ್ವಿತೀಯ ಮುಖಾಮುಖೀ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ದಬಾಂಗ್ ಡೆಲ್ಲಿ ವಿರುದ್ಧದ ಈ ಪಂದ್ಯವನ್ನು ಆತಿಥೇಯ ತೆಲುಗು ಟೈಟಾನ್ಸ್ 34-33ರಿಂದ ಕಳೆದುಕೊಂಡು ಹ್ಯಾಟ್ರಿಕ್ ಸೋಲಿಗೆ ತುತ್ತಾಯಿತು.
ಬೆಂಗಾಲ್ ತ್ರಿಮೂರ್ತಿಗಳ ಅಬ್ಬರ
ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಯುಪಿ ಯೋಧಾ ಮೇಲೆ ಬೆಂಗಾಲ್ ಸವಾರಿ ಮಾಡಲು ಆರಂಭಿಸಿತು. ಅದರಲ್ಲೂ ರೈಡರ್ಗಳಾದ ಮೊಹಮ್ಮದ್ ನಬಿಭಕ್Ò, ಮಣಿಂದರ್ ಸಿಂಗ್ ಮತ್ತು ಕೆ. ಪ್ರಪಂಜನ್ ಶ್ರೇಷ್ಠ ದಾಳಿ ಸಂಘಟಿಸುವ ಮೂಲಕ ಯೋಧಾಕ್ಕೆ ಆರಂಭದಲ್ಲೇ ನಡುಕ ಹುಟ್ಟಿಸಿದರು.
ನಬಿಭಕ್Ò 11 ರೈಡಿಂಗ್ ನಡೆಸಿ 10 ಟಚ್ ಪಾಯಿಂಟ್ ತಂದರು. ಬಹುತೇಕ ಎಲ್ಲ ಸಲವೂ ಅಂಕ ತರುವಲ್ಲಿ ನಬಿಭಕ್Ò ಸಫಲರಾದರು. ಮತ್ತೂಬ್ಬ ತಾರಾ ರೈಡರ್ ಮಣಿಂದರ್ ಸಿಂಗ್ 13 ರೈಡಿಂಗ್ನಿಂದ 9 ಅಂಕ ತಂದು ಬೆಂಗಾಲ್ ಪರ ರೈಡಿಂಗ್ನಿಂದ ಅತ್ಯಧಿಕ ಅಂಕ ಗಳಿಸಿದ 2ನೇ ಆಟಗಾರನೆನಿಸಿದರು. ಪ್ರಪಂಜನ್ ರೈಡಿಂಗ್ನಿಂದ 5 ಅಂಕ ತಂದರು.
ಬಲದೇವ್ ಸಿಂಗ್ (7 ಅಂಕ), ರಿಂಕು ನರ್ವಾಲ್ (4 ಅಂಕ) ಮತ್ತು ಜೀವಾ ಕುಮಾರ್ (3 ಅಂಕ) ಕೂಡ ಉತ್ತಮ ಟ್ಯಾಕಲ್ ನಡೆಸಿ ಬೆಂಗಾಲ್ ತಂಡದ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.
ಯುಪಿ ಸೋಲಿನ ಆರಂಭ
ಯುಪಿ ಯೋಧಾ ತಂಡದ ತಾರಾ ಆಟಗಾರರ್ಯಾರೂ ದಿಟ್ಟ ಪ್ರದರ್ಶನ ನೀಡಲಿಲ್ಲ. ಪ್ರಮುಖ ರೈಡರ್ ಮೋನು ಗೊಯತ್ ತಂದಿದ್ದು 6 ಅಂಕ ಮಾತ್ರ. ಒಟ್ಟು 14 ಸಲ ಎದುರಾಳಿ ಕೋಟೆಗೆ ನುಗ್ಗಿದರೂ 5 ಸಲ ಖಾಲಿ ಕೈಯಿಂದ ವಾಪಸ್ ಆದರು.
ಸುರೇಂದ್ರ ಸಿಂಗ್ ಅವರಿಂದ 3 ಅಂಕ ಪಡೆಯಲಷ್ಟೇ ಸಾಧ್ಯವಾಯಿತು. ನಿತೇಶ್ ಟ್ಯಾಕ್ಲಿಂಗ್ ಕೇವಲ 2 ಅಂಕಕ್ಕೆ ಮಾತ್ರ ಸೀಮಿತವಾಯಿತು. ಅಮಿತ್, ನರೇಂದ್ರ, ನಿರೀಕ್ಷೆ ಮೂಡಿಸಿದ್ದ ಶ್ರೀಕಾಂತ್ ಜಾಧವ್, ಸಚಿನ್ ಕುಮಾರ್ ಸಮಯಕ್ಕೆ ಸರಿಯಾಗಿ ತಂಡದ ನೆರವಿಗೆ ಬರಲಿಲ್ಲ.
ಗಂಭೀರ್ ರಾಯಭಾರಿ
ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಆಡುತ್ತಿರುವ ಯುಪಿ ಯೋಧಾ ತಂಡಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
“ಯೋಧಾ ತಂಡಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ನನ್ನ ಜೀವನದಲ್ಲಿ ಎಂದೂ ಸತ್ತವರಂತೆ ಇರುವುದನ್ನು ಬಯಸುವುದಿಲ್ಲ. ಸೋಲನ್ನು ಎದುರಿಸಿ ಗೆಲ್ಲುವುದರ ಕಡೆಗೆ ಚಿಂತಿಸುತ್ತಿದ್ದೆ. ಇಂತಹುದನ್ನೇ ಯುಪಿ ತಂಡದಿಂದಲೂ ನಿರೀಕ್ಷಿಸುವೆ’ ಎಂದು ಗಂಭೀರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…