ದೀರ್ಘಕಾಲದ ಕೋರ್ಟ್ ಎದುರಾಳಿ ವಿದಾಯ ಹೇಳುತ್ತಿದ್ದಂತೆ ಕಣ್ಣೀರಿಟ್ಟ ರಾಫೆಲ್ ನಡಾಲ್
Team Udayavani, Sep 24, 2022, 5:10 PM IST
ಲಂಡನ್: ಟೆನ್ನಿಸ್ ಲೋಕದ ದಂತಕಥೆ ರೋಜರ್ ಫೆಡರರ್ ಶುಕ್ರವಾರ ತಮ್ಮ ಅಂತಿಮ ಪಂದ್ಯವಾಡಿದರು. ಕೆಲ ದಿನಗಳ ಹಿಂದಷ್ಟೇ ವಿದಾಯದ ಬಗ್ಗೆ ಘೋಷಣೆ ಮಾಡಿದ್ದ ಫೆಡರರ್, ಶುಕ್ರವಾರ ಲಂಡನ್ ನಲ್ಲಿ ನಡೆದ ಲೇವರ್ ಕಪ್ ನಲ್ಲಿ ಕೊನೆಯ ಪಂದ್ಯವಾಡಿದರು.
ವಿಶೇಷವೆಂದರೆ ದೀರ್ಘಕಾಲದ ಕೋರ್ಟ್ ಎದುರಾಳಿ ರಾಫೆಲ್ ನಡಾಲ್ ಜೊತೆ ಜೋಡಿಯಾಗಿ ಫೆಡರರ್ ಆಡಿದ್ದು, ಯುರೋಪ್ ತಂಡದ ಪರವಾಗಿ ಆಡಿದ ಫೆಡಲ್, ವಿಶ್ವ ತಂಡದ ಎದುರು ಸೋಲನುಭವಿಸಿತು.
ಕೊನೆಯ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ರೋಜರ್ ಭಾರವಾದ ಹೃದಯದಿಂದಲೇ ಟೆನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಇದೇ ವೇಳೆ ರೋಜರ್ ಫೆಡರರ್ ಭಾವುಕರಾಗುತ್ತಿದ್ದಂತೆ ರಾಫೆಲ್ ನಡಾಲ್ ಕೂಡಾ ಕಣ್ಣೀರು ಹರಿಸಿದರು. ನಡಾಲ್ ಭಾವುಕಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ:ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹಂಚಿಕೊಂಡ ಸಲಾರ್ ನಟಿ ಶ್ರುತಿ ಹಾಸನ್
ಫೆಡರರ್ ವಿದಾಯ ಭಾಷಣ ಕೇಳಿದ ರಾಫ ಬಿಕ್ಕಿ ಬಿಕ್ಕಿ ಅತ್ತಿದ್ದು, ಈ ಇಬ್ಬರು ದಿಗ್ಗಜರ ಅಳು, ಸ್ನೇಹಕ್ಕೆ ಇಡೀ ಟೆನಿಸ್ ಜಗತ್ತೇ ಸಾಕ್ಷಿಯಾಗಿತ್ತು. ಪಂದ್ಯ ಮುಕ್ತಾಯದ ಬಳಿಕ ರೋಜರ್ ಫೆಡರರ್ ಕೊಂಚ ಭಾವೋದ್ವೇಗಕ್ಕೆ ಒಳಗಾಗಿ ತಮ್ಮ ಟೆನಿಸ್ ವೃತ್ತಿಬದುಕನ್ನು ಸ್ಮರಿಸಿದರು. ರೋಜರ್ ಫೆಡರರ್ ಭಾವುಕರಾಗುತ್ತಿದ್ದಂತೆ 22 ಟೆನಿಸ್ ಗ್ರ್ಯಾನ್ ಸ್ಲಾಂ ಒಡೆಯ ನಡಾಲ್ ಕೂಡಾ ದುಃಖ ತಡೆದುಕೊಳ್ಳದೇ ಕಣ್ಣೀರು ಹಾಕಿದ್ದಾರೆ.
ಯಾವ ಪ್ರತಿಸ್ಪರ್ಧಿಗಳು ಪರಸ್ಪರ ಈ ರೀತಿಯಾಗಿ ಭಾವುಕರಾಗುತ್ತಾರೆ. ಇದುವೇ ಕ್ರೀಡಾ ಸೌಂದರ್ಯ. ಇದು ನನ್ನ ಪಾಲಿಗೆ ಅತ್ಯಂತ ಸುಂದರವಾದ ಕ್ರೀಡಾ ಚಿತ್ರವಾಗಿದೆ. ಗೌರವಿಸುವುದನ್ನು ಬಿಟ್ಟು ಬೇರೆನೂ ಇಲ್ಲ ಎಂದು ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ರೋಜರ್ ಫೆಡರರ್-ರಾಫೆಲ್ ನಡಾಲ್ ಎದುರು ರೆಸ್ಟ್ ಆಫ್ ದಿ ವರ್ಲ್ಡ್ ತಂಡದ ಫ್ರಾನ್ಸೆಸ್ ಟಿಯಾಫೋ ಮತ್ತು ಜ್ಯಾಕ್ ಸಾಕ್ ಜೋಡಿಯು 4-6, 7-6(7/2), 11-9 ಅಂತರದಲ್ಲಿ ಗೆಲುವು ದಾಖಲಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ