ದಿನೇಶ್ ಕಾರ್ತಿಕ್ ಕೈಗೆ ಟ್ರೋಫಿ ಕೊಟ್ಟ ಕಪ್ತಾನ
Team Udayavani, Sep 26, 2022, 10:58 PM IST
ಹೈದರಾಬಾದ್: ಆಸ್ಟ್ರೇಲಿಯ ಎದುರಿನ ಟಿ20 ಸರಣಿ ಗೆಲುವಿನ ಟ್ರೋಫಿ ಪಡೆದ ಬಳಿಕ ನಾಯಕ ರೋಹಿತ್ ಶರ್ಮ ನೂತನ ಸಂಪ್ರದಾಯದ ಮೂಲಕ ಗಮನ ಸೆಳೆದರು. ಇದನ್ನು ತಂಡದ ಅತೀ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಕೈಗೆ ನೀಡಿದರು. ಇದರೊಂದಿಗೆ ಧೋನಿ ಆರಂಭಿಸಿದ ಸಂಪ್ರದಾಯವೊಂದನ್ನು ಮುರಿದರು.
ಸರಣಿ ಗೆಲುವಿನ ಟ್ರೋಫಿಯನ್ನು ತಂಡದ ಹೊಸ ಆಟಗಾರರಿಗೆ ಅಥವಾ ಕಿರಿಯ ಕ್ರಿಕೆಟಿಗರಿಗೆ ನೀಡುವುದು ಅಂದಿನ ನಾಯಕ ಧೋನಿ ಆರಂಭಿಸಿದ ಸಂಪ್ರದಾಯವಾಗಿತ್ತು. ಇದನ್ನು ವಿರಾಟ್ ಕೊಹ್ಲಿ ಮುಂದುವರಿಸಿಕೊಂಡು ಬಂದರು. ರೋಹಿತ್ ಶರ್ಮ ಕೂಡ ಇದನ್ನೇ ಪಾಲಿಸತೊಡಗಿದರು. ಆದರೆ ಆಸ್ಟ್ರೇಲಿಯ ವಿರುದ್ಧದ ಸರಣಿ ಬಳಿಕ ಇದಕ್ಕೆ ಬ್ರೇಕ್ ಹಾಕಿದರು. ತಂಡದ ಅತ್ಯಂತ ಹಿರಿಯ ಆಟಗಾರನಿಗೆ ಟ್ರೋಫಿ ಹಸ್ತಾಂತರಿಸುವ ಮೂಲಕ ಸುದ್ದಿಯಾದರು.
ನಾಯಕನ ಈ ದಿಢೀರ್ ಹಾಗೂ ಅಚ್ಚರಿಯ ಕ್ರಮವನ್ನು ದಿನೇಶ್ ಕಾರ್ತಿಕ್ ಆರಂಭದಲ್ಲಿ ನಿರಾಕರಿಸಿದರು. ಆದರೆ ಸಹ ಆಟಗಾರರಾದ ಆರ್. ಅಶ್ವಿನ್, ಹಾರ್ದಿಕ್ ಪಾಂಡ್ಯ ಮೊದಲಾದವರು ಒತ್ತಾಯ ಮಾಡಿದ ಬಳಿಕ ಕಾರ್ತಿಕ್ ಟ್ರೋಫಿ ಸ್ವೀಕರಿಸಲು ಸಮ್ಮತಿಸಿದರು.
Winners Are Grinners! ☺️ ☺️
That moment when #TeamIndia Captain @ImRo45 received the #INDvAUS @mastercardindia T20I series trophy ? from the hands of Mr. @ThakurArunS, Treasurer, BCCI. ? ? pic.twitter.com/nr31xBrRBQ
— BCCI (@BCCI) September 25, 2022
ಮರಳಿ ಟೀಮ್ ಇಂಡಿಯಾಕ್ಕೆ
2019ರಲ್ಲಿ ಟೀಮ್ ಇಂಡಿಯಾದಿಂದ ಸಂಪೂರ್ಣ ಬೇರ್ಪಟ್ಟಿದ್ದ 37 ವರ್ಷದ ದಿನೇಶ್ ಕಾರ್ತಿಕ್, ವೀಕ್ಷಕ ವಿವರಣಕಾರನಾಗಿಯೂ ಕರ್ತವ್ಯ ನಿಭಾಯಿಸಿದ್ದರು. ಆದರೆ ಕಳೆದ ಐಪಿಎಲ್ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿ, ಬೆಸ್ಟ್ ಫಿನಿಶರ್ ಎನಿಸುವ ಮೂಲಕ ಮತ್ತೆ ಚಾಲ್ತಿಗೆ ಬಂದಿದ್ದರು. ಟೀಮ್ ಇಂಡಿಯಾದ ಬಾಗಿಲು ಕೂಡ ತೆರೆಯಲ್ಪಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ