ಆಲ್ ರೌಂಡರ್ ದುಬೆ ಫಿಫ್ಟಿ ; ಪಂತ್ ಬಿರುಸಿನ ಬ್ಯಾಟಿಂಗ್ ; ವಿಂಡಿಸ್ ಗೆಲುವಿಗೆ 171 ಟಾರ್ಗೆಟ್
Team Udayavani, Dec 8, 2019, 8:49 PM IST
ತಿರುವನಂತಪುರಂ: ಪ್ರವಾಸಿ ವೆಸ್ಟ್ ವಿಂಡೀಸ್ ವಿರುದ್ದ ಇಲ್ಲಿನ ಗ್ರೀನ್ ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡ ವಿಂಡೀಸ್ ಗೆಲುವಿಗೆ 171 ರನ್ ಗುರಿ ನೀಡಿದೆ. ಬ್ಯಾಟಿಂಗ್ ಗೆ ಅಷ್ಟೇನೂ ಪೂರಕವಲ್ಲದ ಇಲ್ಲಿನ ಪಿಚ್ ನಲ್ಲಿ ಟಾಸ್ ಗೆದ್ದ ವಿಂಡೀಸ್ ಕಪ್ತಾನ ಕೈರನ್ ಪೊಲಾರ್ಡ್ ಅವರು ಭಾರತವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು.
ಯುವ ಆಲ್ ರೌಂಡರ್ ಶಿವಂ ದುಬೆ (54) ಅವರ ಭರ್ಜರಿ ಅರ್ಧಶತಕ ಮತ್ತು ಇನ್ನಿಂಗ್ಸ್ ನ ಕೊನೆಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ (33) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರುಗಳಲ್ಲಿ ಒಟ್ಟು 07 ವಿಕೆಟುಗಳನ್ನು ಕಳೆದುಕೊಂಡು 170 ರನ್ ಗಳನ್ನು ಕಲೆಹಾಕಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಟೀಂ ಇಂಡಿಯಾ ತಂಡದ ಮೊತ್ತ 24 ಆಗುವಷ್ಟರಲ್ಲಿ ರೋಹಿತ್ ಶರ್ಮಾ (15) ಔಟಾದರೆ ಇವರ ಬೆನ್ನಿಗೇ ಕೆ.ಎಲ್. ರಾಹುಲ್ (11) ಸಹ ಪೆವಿಯಲಿಯನ್ ದಾರಿ ಹಿಡಿದರು. ಈ ಹಂತದಲ್ಲಿ ಜೊತೆಯಾದ ದುಬೆ ಮತ್ತು ಕೊಹ್ಲಿ ಜೋಡಿ ಅಮೂಲ್ಯ 34 ರನ್ ಗಳ ಜೊತೆಯಾಟ ನೀಡಿತು.
ಇದರಲ್ಲಿ ದುಬೆ ಸಿಡಿದದ್ದೇ ಹೆಚ್ಚು. ನಾಯಕ ಕೊಹ್ಲಿ ಈ ಯುವ ಬ್ಯಾಟ್ಸ್ ಮನ್ ಗೆ ಉತ್ತಮ ಬೆಂಬಲ ನೀಡಿದರು. ಅಂತಿಮವಾಗಿ 30 ಎಸೆತೆಗಳಲ್ಲಿ 54 ರನ್ ಸಿಡಿಸಿದ ದುಬೆ ಕ್ಯಾಚ್ ನೀಡಿ ಔಟಾದರು. ಅವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 4 ಭರ್ಜರಿ ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದರು. ನಾಯಕ ಪೊಲಾರ್ಡ್ ಓವರಿನಲ್ಲಿ ದುಬೆ ಹ್ಯಾಟ್ರಿಕ್ ಸಿಕ್ಸ್ ಬಾರಿಸಿ ತನ್ನ ಬ್ಯಾಟಿಂಗ್ ತಾಖತ್ತನ್ನು ಪ್ರದರ್ಶಿಸಿದರು.
ಭಾರತೀಯ ಇನ್ನಿಂಗ್ಸ್ ನಲ್ಲಿ ಶಿವಂ ದುಬೆ ಮತ್ತು ರಿಷಭ್ ಪಂತ್ (33 ನಾಟೌಟ್) ಮಾತ್ರವೇ ವಿಂಡೀಸ್ ಬೌಲರ್ ಗಳನ್ನು ಕಾಡಿದರು. ಪಂತ್ ಅವರು 22 ಎಸೆತೆಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 33 ರನ್ ಸಿಡಿಸಿ ಔಟಾಗದೆ ಉಳಿದರು.
ಉಳಿದಂತೆ ನಾಯಕ ಕೊಹ್ಲಿ (19), ಶ್ರೇಯಸ್ ಐಯರ್ (10), ರವೀಂದ್ರ ಜಡೇಜಾ (9) ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದರು.
ವಿಂಡೀಸ್ ಪರ ಕೆಸ್ರಿಕ್ ವಿಲಿಯಮ್ಸ್ ಮತ್ತು ಲೆಗ್ ಬ್ರೇಕ್ ಸ್ಪಿನ್ನರ್ ಹೆಡೇನ್ ರಶೀದಿ ವಾಲ್ಷ್ ತಲಾ 02 ವಿಕೆಟ್ ಪಡೆದು ಮಿಂಚಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ