ಮಲೇಶ್ಯ ವಿರುದ್ಧ ಭಾರತದ ಮೆರೆದಾಟ
Team Udayavani, Jun 4, 2018, 9:13 AM IST
ಕೌಲಾಲಂಪುರ: ಕೌಲಾಲಂ ಪುರದಲ್ಲಿ ಮೊದಲ್ಗೊಂಡ ವನಿತಾ ಟಿ20 ಏಶ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಭರ್ಜರಿ ಗೆಲುವಿನ ಆರಂಭ ಪಡೆದಿದೆ. ರವಿವಾರ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಆತಿಥೇಯ ಮಲೇಶ್ಯವನ್ನು 142 ರನ್ನುಗಳ ಭಾರೀ ಅಂತರದಿಂದ ಕೆಡವಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮಿಥಾಲಿ ರಾಜ್ ಅವರ ಅಜೇಯ 97 ರನ್ ಸಾಹಸದಿಂದ 3 ವಿಕೆಟಿಗೆ 169 ರನ್ ಪೇರಿಸಿದರೆ, ಮಲೇಶ್ಯ 13.4 ಓವರ್ಗಳಲ್ಲಿ ಕೇವಲ 27 ರನ್ನಿಗೆ ಗಂಟುಮೂಟೆ ಕಟ್ಟಿತು. ಭಾರತ ಎಸೆದ 13.4 ಓವರ್ಗಳಲ್ಲಿ 5 ಓವರ್ ಮೇಡನ್ ಆಗಿದ್ದವು. ಪೂನಂ ಯಾದವ್ ಎರಡೂ ಓವರ್ಗಳನ್ನು ಮೇಡನ್ ಮಾಡಿ ಒಂದೂ ರನ್ ನೀಡದೆ 2 ವಿಕೆಟ್ ಕಿತ್ತರು. 6 ರನ್ನಿಗೆ 3 ವಿಕೆಟ್ ಕಿತ್ತ ಪೂಜಾ ವಸ್ತ್ರಾಕರ್ ಭಾರತದ ಯಶಸ್ವೀ ಬೌಲರ್. ಅನುಜಾ ಪಾಟೀಲ್ 9ಕ್ಕೆ 2, ಶಿಖಾ ಪಾಂಡೆ 2 ರನ್ನಿಗೆ ಒಂದು ವಿಕೆಟ್ ಸಂಪಾದಿಸಿದರು.
ಶತಕ ವಂಚಿತ ಮಿಥಾಲಿ
ಭಾರತ ಸ್ಮತಿ ಮಂಧನಾ (2) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡ ಮಿಥಾಲಿ ರಾಜ್ ಅಜೇಯವಾಗಿ ಉಳಿದು 97 ರನ್ ಹೊಡೆದರು. 69 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಹಾಗೂ ಪಂದ್ಯದ ಏಕೈಕ ಸಿಕ್ಸರ್ ಒಳಗೊಂಡಿತ್ತು.
ಅಂತಿಮ ಓವರಿನಲ್ಲಿ ಮಿಥಾಲಿ ಶತಕಕ್ಕೆ 4 ರನ್ನುಗಳ ಅಗತ್ಯವಿತ್ತು. ಆದರೆ ಗಳಿಸಲು ಸಾಧ್ಯವಾದದ್ದು ಒಂದು ರನ್ ಮಾತ್ರ. ಈ ಓವರಿನ 4 ಎಸೆತಗಳನ್ನು ಎದುರಿಸಿದ ದೀಪ್ತಿ ಶರ್ಮ 2 ಬೌಂಡರಿ ಸಹಿತ 11 ರನ್ ಹೊಡೆದರು. ದೀಪ್ತಿ ಗಳಿಕೆ ಅಜೇಯ 18 ರನ್. ಪೂಜಾ ವಸ್ತ್ರಾಕರ್ 16 ರನ್ ಮಾಡಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 32 ರನ್ ಹೊಡೆದು ಅಜೇಯರಾಗಿ ಉಳಿದರು. ಉಳಿದ ಪಂದ್ಯಗಳಲ್ಲಿ ಪಾಕಿಸ್ಥಾನ, ಶ್ರೀಲಂಕಾ ಜಯ ಸಾಧಿಸಿವೆ. ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ಸೋಲನುಭವಿಸಿವೆ.
ಸಂಕ್ಷಿಪ್ತ ಸ್ಕೋರ್
ಭಾರತ-20 ಓವರ್ಗಳಲ್ಲಿ 3 ವಿಕೆಟಿಗೆ 169 (ಮಿಥಾಲಿ ಔಟಾಗದೆ 97, ಹರ್ಮನ್ಪ್ರೀತ್ 32, ದೀಪ್ತಿ ಔಟಾಗದೆ 18, ಪೂಜಾ 16, ಐನಾ ಹಾಶಿಂ 30ಕ್ಕೆ 1, ನೂರ್ ಝಕಾರಿಯ 30ಕ್ಕೆ 1). ಮಲೇಶ್ಯ-13.4 ಓವರ್ಗಳಲ್ಲಿ 27 ಆಲೌಟ್ (ಸಶಾ ಅಜ್ಮಿ 9, ಪೂಜಾ 6ಕ್ಕೆ 3, ಪೂನಂ 0ಗೆ 2, ಅನುಜಾ 9ಕ್ಕೆ 2, ಶಿಖಾ 2ಕ್ಕೆ 1). ಪಂದ್ಯಶ್ರೇಷ್ಠ: ಮಿಥಾಲಿ ರಾಜ್.
ಸೊನ್ನೆ ಸುತ್ತಿದ ಆರು ಆಟಗಾರ್ತಿಯರು!
ಮಲೇಶ್ಯ ಬ್ಯಾಟಿಂಗ್ ಸರದಿಯಲ್ಲಿ ಯಾವ ಆಟಗಾರ್ತಿಯೂ ಎರಡಂ ಕೆಯ ಸ್ಕೋರ್ ದಾಖಲಿಸಲಿಲ್ಲ. ಆರಂಭಿಕರಿಬ್ಬರ ಸಹಿತ ಒಟ್ಟು 6 ಮಂದಿ ಖಾತೆಯನ್ನೇ ತೆರೆಯಲಿಲ್ಲ. 9 ರನ್ ಮಾಡಿದ ಸಶಾ ಅಜ್ಮಿ ಅವರದೇ ಹೆಚ್ಚಿನ ಗಳಿಕೆ. 10 ಎಸೆತ ಎದುರಿಸಿದ ಅಜ್ಮಿ 2 ಬೌಂಡರಿ ಹೊಡೆದರು. ಇನ್ನೊಂದು ಬೌಂಡರಿ ಝುಮಿಕಾ ಅಜ್ಮಿ ಅವರಿಂದ ದಾಖಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ