ವಿದ್ಯುತ್ ಪಿಪಿಎ ಹಗರಣ ಸಿದ್ದರಾಮಯ್ಯ ಕಾಲಕ್ಕೂ ವ್ಯಾಪಿಸಿದೆಯೇ?: ಪರಿಶೀಲನೆಗೆ ಮುಂದಾದ ಸರ್ಕಾರ
Team Udayavani, Sep 12, 2022, 10:38 AM IST
ಬೆಂಗಳೂರು: ಖಾಸಗಿ ವಿದ್ಯುತ್ ಕಂಪನಿಗಳ ಜತೆಗೆ ಈ ಹಿಂದೆ ರಾಜ್ಯ ಸರಕಾರ ಮಾಡಿಕೊಂಡ ದೀರ್ಘಾವಧಿ ಒಪ್ಪಂದ (ಪಿಪಿಎ) ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೇ ಸುತ್ತಿಕೊಳ್ಳಲಿದೆಯೇ? ಇಂಥದೊಂದು ಚರ್ಚೆ ಈಗ ಆಡಳಿತ ಪಕ್ಷದ ವಲಯದಲ್ಲಿ ಕೇಳಿ ಬರಲಾರಂಭಿಸಿದ್ದು, ವಿದ್ಯುತ್ ಪಿಪಿಎ ಮೂಲಕ ಕಾಂಗ್ರೆಸ್ ಗೆ ಶಾಕ್ ಕೊಡಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ನಲವತ್ತು ಪರ್ಸೆಂಟ್ ಆರೋಪವನ್ನು ಪ್ರತಿ ದಿನ ಜಪ ಮಾಡುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಲು ಬಿಜೆಪಿ, ದುರ್ಬೀನು ಹಾಕಿ ಹುಡುಕಾಟ ಆರಂಭಿಸಿದಾಗ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕ ಪ್ರಕರಣದ ಜತೆಗೆ ಈಗ ಇಂಧನ ಇಲಾಖೆಯಲ್ಲೂ ಒಂದಿಷ್ಟು ವಿಚಾರಗಳು ಲಭ್ಯವಾಗಿದೆ. ವಿದ್ಯುತ್ ಒಡಂಬಡಿಕೆಗಳ ಪೈಕಿ ಕೆಲವು ಸಂಶಯಾತ್ಮಕವಾಗಿರುವುದು ಕಂಡು ಬಂದಿವೆ.
ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗುವ ಮುನ್ನ ಅಂದರೆ 2014 ಜುಲೈಗೆ ಮುಂಚೆ ನಡೆದಿರುವ ವಿದ್ಯುತ್ ಖರೀದಿ ಒಪ್ಪಂದಗಳ ಬಗ್ಗೆ ಸಾಕಷ್ಟು ಅನುಮಾನ ಕಂಡುಬಂದಿದ್ದು, ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಎದ್ದು ಕಾಣಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಲಂಕೆಗೆ ಜಯ: ಬೀದಿಗಳಲ್ಲಿ ಹಾಡಿ ಕುಣಿದ ಅಫ್ಘಾನಿಗರು
ತಾತ್ಕಾಲಿಕ ವಿದ್ಯುತ್ ಅಭಾವದ ದುರ್ಲಾಭ ಪಡೆದು ಕಾರ್ಯ ಸಾಧುವಲ್ಲದ ದೀರ್ಘಾವಧಿ ಒಪ್ಪಂದ, ಸ್ಪರ್ಧಾತ್ಮಕಕ್ಕಿಂತಲೂ ಅನಿವಾರ್ಯತೆಗೆ ಕಟ್ಟುಬಿದ್ದಂತೆ ಹೆಚ್ಚಿನ ದರ ನಿಗದಿ ಮಾಡಿ, ಷರತ್ತುಗಳ ಬಗ್ಗೆ ನಿರ್ಲಕ್ಷ್ಯ, ಪಾರದರ್ಶಕ ಕಾಯ್ದೆ ಉಲ್ಲಂಘನೆ ಮುಂತಾದವು ಈಗ ಸಂಶಯಕ್ಕೆ ಪುಷ್ಠಿ ನೀಡಿದೆ.
ತಂತ್ರಜ್ಞಾನ ಮತ್ತು ವಿದ್ಯುತ್ ಉತ್ಪಾದನೆ ನಿಂತ ನೀರಲ್ಲ. ಆಡಳಿತ ನಡೆಸುವವರಿಗೂ ಒಪ್ಪಂದದ ಪ್ರಸ್ತಾವನೆ ಸಿದ್ಧಪಡಿಸುವವರಿಗೂ ಇರಬೇಕಾದ ಪ್ರಾಥಮಿಕ ಜ್ಞಾನ. ಆದರೆ, ರಾಜ್ಯದ ಜನರ ಕಷ್ಟವನ್ನೇ ‘ಲಾಭದ ವ್ಯವಹಾರ’ಕ್ಕೆ ‘ಕೈ’ ಹಾಕಿವೆ ಎಂದು ತಜ್ಞರು ದಾಖಲೆ ಪರಿಶೀಲನೆ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.
ದರ ನಿಗದಿಯು, ಒಪ್ಪಂದದ ಅವಧಿ, ಸರ್ಕಾರಕ್ಕೆ ತನಗೆ ಬೇಕಾದ ಷರತ್ತುಗಳನ್ನು ಹಾಕಿಕೊಳ್ಳುವ ಅವಕಾಶಗಳಿದ್ದರೂ ಕಾಣದ ಕೈಗಳ ಪ್ರಭಾವದಿಂದ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿವೆ ಎಂಬುದು ಕಂಡುಬಂದಿವೆ.
ಪವನ ಹಾಗೂ ಸೌರ ವಿದ್ಯುತ್ ಮೂಲದ ಸರಾಸರಿ ವೆಚ್ಚ ಪರಿಗಣಿಸಿಲ್ಲ. ಗರಿಷ್ಠ ದರವನ್ನು ನಿಗದಿ ಮಾಡುವಾಗ ನಿರ್ದಿಷ್ಟ ಕಾಲಮಿತಿ ಕಡೆಗಣಿಸಲಾಗಿದೆ. ಹೆಚ್ಚು ಬಳಕೆ ಮಾಡುವ ಅವಧಿ, ಸಾಮಾನ್ಯ ಅವಧಿ ಎರಡರ ಮಧ್ಯೆ ವ್ಯತ್ಯಾಸ ತಿಳಿಯದೇ ಏಕರೂಪದಲ್ಲಿ ಯೂನಿಟ್ ದರ ನಿಗದಿ ಮಾಡಿ ಬೊಕ್ಕಸಕ್ಕೆ ಅನಗತ್ಯ ಹೊರೆ ಹೇರಲಾಗಿದೆ ಎಂದು ಅಂದಾಜಿಸಲಾಗಿದೆ.
ಎಷ್ಟು ನಷ್ಟ?
ಪ್ರತಿ ಯೂನಿಟ್ಗೆ ಗರಿಷ್ಠ 11 ರೂ. ವರೆಗೆ 25 ವರ್ಷಗಳವರೆಗೆ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಎರಡು ಸಾವಿರ ಕೋಟಿ ರೂ. ವರೆಗೂ ಹೆಚ್ಚುವರಿ ಹೊರೆ ಬೀಳುತ್ತಿದೆ ಎಂಬ ಅಂದಾಜಿಸಲಾಗಿದೆ. ಇದೇ ಕಾರಣಕ್ಕೆ ಸರ್ಕಾರ ಪ್ರತಿ ಒಡಂಬಡಿಕೆಯನ್ನು ಪರಿಶೀಲಿಸಿ ಕಾನೂನು ತಜ್ಞರ ಮೂಲಕ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಪ್ರಕ್ರಿಯೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…