“ಇವತ್ತು ಹಬ್ಬ ಕೆಲಸಕ್ಕೆ ಹೋಗಬೇಡ ಮಗಳೇ.. ಅಪ್ಪನ ಮಾತು ಕೇಳದೇ ಹೋದಾಕೆ ವಿಮಾನ ದುರಂತದಲ್ಲಿ ಸಜೀವ ದಹನ
ಬೇಗ ಬಂದು ನಿಮ್ಮೊಂದಿಗೆ ಹಬ್ಬ ಆಚರಿಸುತ್ತೇನೆ ಅಪ್ಪ ಎಂದಿದ್ದಳು.
Team Udayavani, Jan 17, 2023, 10:19 AM IST
ಕಾಠ್ಮಂಡು: ನೇಪಾಳ ವಿಮಾನ ದುರಂತದಲ್ಲಿ 72 ಮಂದಿ ಸಜಿವ ದಹನವಾದ ಬಳಿಕ ಒಂದೊಂದು ಕರುಣಾಜನಕ ಕಥೆ ಹೊರಬೀಳುತ್ತಿದೆ.
ಕಳೆದ ಎರಡು ವರ್ಷದಿಂದ ಯೇಟಿ ಏರ್ಲೈನ್ಸ್ ನಲ್ಲಿ ಗಗನ ಸಖಿ ಆಗಿ ಕೆಲಸ ಮಾಡುತ್ತಿದ್ದ ಓಶಿನ್(24) 72 ಮಂದಿಯೊಂದಿಗೆ ಸಜೀವ ದಹನವಾಗಿದ್ದಾಳೆ.
ಭಾರತದಲ್ಲಿ ಕಲಿತ ನೇಪಾಳದ ಚಿತ್ವಾನ್ ನ ಮಡಿ ಪ್ರದೇಶದ ಓಶಿನ್ ಭಾನುವಾರ ಸಂಕ್ರಾಂತಿ ಹಬ್ಬದಂದು ಕೆಲಸಕ್ಕೆ ಹೋಗಿದ್ದರು. ಮುಂಜಾನೆ ಓಶಿನ್ ಅವರ ತಂದೆ ಇವತ್ತು ವಿಶೇಷವಾದ ದಿನ ಕೆಲಸಕ್ಕೆ ಹೋಗುವುದು ಬೇಡ, ಕುಟುಂಬದೊಂದಿಗೆ ಇದ್ದು ಸಮಯ ಕಳಿ ಎಂದು ಹೇಳಿದ್ದಾರೆ. ಎರಡು ವಿಮಾನಯಾನವನ್ನು ಮುಗಿಸಿ ಮನೆಗೆ ಬಂದು ಹಬ್ಬವನ್ನು ನಿಮ್ಮೊಂದಿಗೆ ಆಚರಿಸುತ್ತೇನೆ ಎಂದು ಅಪ್ಪ – ಅಮ್ಮನ ಬಳಿ ಹೇಳಿ ಹೋಗಿದ್ದಾಳೆ. ಆದರೆ ಮರಳಿ ಬಂದದ್ದು ಮಾತ್ರ ಆಕೆಯ ಸುಟ್ಟು ಕರಕಲಾದ ಮೃತದೇಹ ಮಾತ್ರ.
ಇದನ್ನೂ ಓದಿ: ಮನೆ ಮೇಲೆ ಗುಂಡಿನ ದಾಳಿ: 6 ತಿಂಗಳ ಹಸುಳೆ, ತಾಯಿ ಸೇರಿ ಆರು ಮಂದಿ ದುರಂತ ಅಂತ್ಯ
ಮಗಳನ್ನು ಹೋಗಬೇಡ ಎಂದು ಹೇಳಿದರೂ ಆಕೆ, ಮಾತು ಕೇಳದೆ ಈಗ ಬರುತ್ತೇನೆ ಎಂದು ಹೇಳಿ ಹೋದಳು ಎಂದು ದುಃಖಿಸುತ್ತಾ ಸ್ಥಳೀಯ ಮಾಧ್ಯಮವೊಂದಕ್ಕೆ ಓಶಿನ್ ತಂದೆ ಮೋಹನ್ ಅಲೆ ಮಗರ್ ಹೇಳಿದ್ದಾರೆ.
ಎರಡು ವರ್ಷದ ಹಿಂದೆ ಮದುವೆಯಾದ ಓಶಿನ್ ಕೆಲಸದ ನಿಮಿತ್ತ ಊರಿನಲ್ಲೇ ಇದ್ದರು. ಇವರ ಪತಿ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಟಿಕ್ ಟಾಕ್ ನಲ್ಲೂ ಓಶಿನ್ ಅವರು ಖ್ಯಾತಿಯನ್ನು ಪಡೆದಿದದ್ದರು. ಸಾವಿರಾರು ಫಾಲೋವರ್ಸ್ ಗಳನ್ನು ಹೊಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?