ಇತಿಹಾಸವನ್ನು ಬಣ್ಣಿಸುವ “ಬಳ್ಳಿಕಾಳ ಬೆಳ್ಳಿ’


Team Udayavani, Sep 18, 2019, 4:00 AM IST

Udayavani Kannada Newspaper

ಬಳ್ಳಿಕಾಳ ಬೆಳ್ಳಿ ಡಾ| ಕೆ.ಎನ್‌. ಗಣೇಶಯ್ಯನವರ 15ನೇ ಪುಸ್ತಕ. ಮರೆತು ಹೋದ ಭವ್ಯ ಇತಿಹಾಸವನ್ನು ಮತ್ತೆ ಪರಿಚಯಿಸಬೇಕು ಎನ್ನುವ ಹಂಬಲದಿಂದ ಮೂಡಿಬಂದ ಪುಸ್ತಕವೇ ಬಳ್ಳಿಕಾಳ ಬೆಳ್ಳಿ. ಇದು ಇತಿಹಾಸವನ್ನು ನೆನಪಿಸುವ ಕಾದಂಬರಿ. ಇತಿಹಾಸ ಎಂದರೆ ಬೋರಿಂಗ್‌ ಎನ್ನುವ ಮಾತನ್ನು ಸುಳ್ಳು ಮಾಡುವಂತೆ ಓದುಗರನ್ನು ಕುತೂಹಲದಿಂದ ಓದಿಸುತ್ತಾ ಹೋಗುವ ಬಳ್ಳಿಕಾಳ ಬೆಳ್ಳಿ ಕಾದಂಬರಿ ಪ್ರತಿಯೊಂದು ಸೂಕ್ಷ್ಮ ವಿಷಯಗಳಿಗೂ ಮಹತ್ವ ನೀಡಿದೆ.

ಇತಿಹಾಸದಲ್ಲಿ ಅಚ್ಚಳಿಯದೆ ಉಳಿದವರು ಸ್ವಲ್ಪ ಜನರಾದರೆ, ಇನ್ನೂ ಸ್ವಲ್ಪ ಜನ, ಘಟನೆಗಳು ತೆರೆಮರೆಯಲ್ಲಿಯೆ ಉಳಿದುಕೊಂಡುಬಿಟ್ಟಿವೆ. ಇನ್ನೊಂದಷ್ಟು ಇತಿಹಾಸವು ಕಾರಣಾಂತರಗಳಿಂದ ಮುಚ್ಚಿ ಹೋಗಿದೆ. ಕರಾವಳಿಯ ಇತಿಹಾಸವು ಭವ್ಯವಾಗಿದ್ದು, ಇಂದು ಅವು ಮರೆತು ಹೋಗಿದೆ. ಅವುಗಳನ್ನು ಮತ್ತೆ ನೆನಪಿಸುವ ಪ್ರಯತ್ನದಲ್ಲಿ ಕಾದಂಬರಿಕಾರರು ಯಶಸ್ವಿಯಾಗಿದ್ದಾರೆ.

 ಘಟನೆ: 1
ಪಶ್ಚಿಮದ ಕರಾವಳಿಯ ವೀರಗಾಥೆಯ ಸುತ್ತ ಹೆಣೆದಿರುವ ಕಾದಂಬರಿ ಇದಾಗಿದೆ. ಇತಿಹಾಸಕಾರರು ಹೇಗೆ ಇತಿಹಾಸವನ್ನು ಕೆದಕುತ್ತಾರೆ, ಕಾಲಘಟ್ಟವನ್ನು ಅರಿಯುತ್ತಾರೆ, ಇತಿಹಾಸವನ್ನು ತಿಳಿಯಲು ಶಾಸನಗಳ ಮಹತ್ವವೇನು ಎನ್ನುವುದನ್ನು ಲೇಖಕರು ತಿಳಿಸುತ್ತಾ ಹೋಗುತ್ತಾರೆ. ಕರಾವಳಿಯು ಹೆಚ್ಚು ಶ್ರೀಮಂತವಾಗಿದ್ದು, ಹಿಂದೆ ಸಂಪತ್ತನ್ನು ಹೇಗೆ ಸಂಗ್ರಹಿಸಿಡುತ್ತಿದ್ದರು ಮತ್ತು ಅದನ್ನು ಒಂದೊಂದಾಗಿ ಹೇಗೆ ಬ್ರಿಟಿಷರು ವಶಪಡಿಸಿಕೊಂಡರು ಎನ್ನುವುದನ್ನೂ ಸೂಚ್ಯವಾಗಿ ತಿಳಿಸುತ್ತಾರೆ.

 ಘಟನೆ: 2
ಇದರಲ್ಲಿ ಬರುವ ಲಕ್ಷ್ಮೀ ಪೊದ್ದಾರ್‌ ಮತ್ತು ಪೂಜಾ ಪಾತ್ರಗಳು ಕಾದಂಬರಿಯುದ್ದಕ್ಕೂ ಇತಿಹಾಸದ ಕುರಿತು ಮಾಹಿತಿ ನೀಡುತ್ತಾ ಹೋಗುತ್ತವೆ. ಮಾಫಿಯಾ ಗ್ಯಾಂಗ್‌ನವರು ಭಾರತದಲ್ಲಿದ್ದ ಸಂಪತ್ತನ್ನು ವಶಪಡಿಸಿಕೊಳ್ಳಲು ಮಾಡುವ ಪ್ರಯತ್ನ, ಅವರ ಸುಳಿಯೊಳಗೆ ಬಿದ್ದ ಲಕ್ಷ್ಮೀ ಪೊದ್ದಾರ್‌ ಮತ್ತು ಪೂಜಾ ಮತ್ತು ಆ ಕಾರಣದಿಂದ ಇತಿಹಾಸವನ್ನು ಕೆದಕುವ ಪ್ರಯತ್ನ ನಡೆಸಿದ ರೀತಿಯನ್ನು ಸರಳ, ಸುಂದರವಾಗಿ ಚಿತ್ರಿಸಿದ್ದಾರೆ.

 ಘಟನೆ: 3
ಇತಿಹಾಸದ ಬೆನ್ನತ್ತಿ ಹೊರಟ ಕಾದಂಬರಿಯ ಪಾತ್ರಗಳಿಗೆ ಹೊಸ ಹೊಸ ಮಾಹಿತಿಗಳು ಸಿಗುತ್ತಾ ಹೋಗುತ್ತವೆ. ಇತಿಹಾಸ ಕುತೂಹಲಕಾರಿಯಾದುದು ಎನ್ನುವುದನ್ನು ಈ ಕಾದಂಬರಿಯ ಮೂಲಕ ಲೇಖಕರು ಸಾರುತ್ತಾರೆ. ಜತೆಗೆ ಕರಾವಳಿ ಇತಿಹಾಸ, ಇಲ್ಲಿದ್ದ ರಾಣೆಯರ ಪರಾಕ್ರಮ, ಸಾಹಸಗಳು ಇತಿಹಾಸದ ಪುಟಗಳಲ್ಲಿ ಹೆಚ್ಚು ಮಹತ್ವ ಪಡೆದಿಲ್ಲ. ಆದರೆ ಅವರ ಸಾಧನೆ, ಪರಾಕ್ರಮ ಪ್ರಮುಖವಾದದ್ದು ಎನ್ನುವುದನ್ನು ತಿಳಿಸುತ್ತಾರೆ. ಇಲ್ಲಿರುವ ಭೂತಾರಾಧನೆ, ದೇವಸ್ಥಾನ, ಬಸದಿಗಳ ಹಿಂದಿರುವ ಇತಿಹಾಸ, ಕಥೆಗಳನ್ನು ಕಾದಂಬರಿಯಲ್ಲಿ ತಿಳಿಸಿದ್ದಾರೆ. ನಮ್ಮ ದೇಶ, ರಾಜ್ಯದ ಇತಿಹಾಸದಲ್ಲಿ ಅನೇಕ ವ್ಯಕ್ತಿ, ಘಟನೆಗಳ ತುಂಬಾ ಲೇಖಕರು ಬರೆದಿದ್ದಾರೆ. ಆದರೆ ಇನ್ನೂ ಬೇಧಿಸದೇ ಇದ್ದ ಅನೇಕ ಹೊಸ ಸಂಗತಿಗಳನ್ನು ತಿಳಿಸುವ ಬಳ್ಳಿಕಾಳ ಬೆಳ್ಳಿ ಉಳಿದ ಇತಿಹಾಸ ಪುಸ್ತಕಗಳಿಗಿಂತ ಭಿನ್ನವಾಗಿದೆ.

- ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.