ಈವೆಂಟ್‌ಗೆ ಸಮ್‌ ಹಿಂಟ್ಸ್‌


Team Udayavani, Jan 16, 2019, 7:25 AM IST

16-january-10.jpg

ಸಭೆ, ಸಮಾರಂಭಗಳ ಆಯೋಜನೆ ಬಲು ದೊಡ್ಡ ಸವಾಲು. ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುವುದು ಕೂಡ ಒಂದು ಕಲೆ. ಮಾತಿನ ಚಾಕಚಾಕ್ಯತೆ, ವಿಭಿನ್ನ ಐಡಿಯಾಗಳು ನಿಮ್ಮ ಕಲ್ಪನೆಗೊಂದು ಜೀವ ನೀಡಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ಉದ್ಯಮನ್ನಾಗಿಸಿಕೊಳ್ಳಲೂಬಹುದು. ಜೀವನ ನಿರ್ವಹಣೆಗೆಂದು ಇದನ್ನು ಆಯೋಜಿಸುವವರು ಕೆಲವರಾದರೆ ಇದನ್ನೇ ಫ್ಯಾಷನ್‌ ಆಗಿ ಇದರಲ್ಲೂ ವಿಭಿನ್ನತೆ ಕಂಡುಕೊಳ್ಳುವವರು ಹಲವರು.

ಒಂದೊಳ್ಳೆ ಥೀಂ ಇದೆ. ಆ ಥೀಂ ಅನ್ನು ನೂರಾರು ಜನಕ್ಕೆ ತಲುಪಿಸಬೇಕು. ಸೇರಿದ ಅಷ್ಟೂ ಜನ ಒಳ್ಳೇ ಕಾರ್ಯಕ್ರಮ ಎಂದು ಹೊಗಳಬೇಕು. ಜತೆಗೆ ಒಂದಷ್ಟು ಆಫರ್‌ಗಳನ್ನು ಸೃಷ್ಟಿಸಬೇಕು. ಆದರೆ ಅವಕಾಶ ಸುಮ್ಮನೇ ಬಂದೀತೆ?

ಖಂಡಿತಾ ಇಲ್ಲ. ಯಾವುದೇ ಒಂದು ಪರಿಕಲ್ಪನೆಯನ್ನು ಜನಮನ ಮುಟ್ಟಿಸಲು ಹೊರಟಾಗ ಅದನ್ನು ಆಸ್ವಾದಿಸುವ ನೂರಾರು, ಸಾವಿರಾರು ವೀಕ್ಷಕರ ಮನ ತಟ್ಟಬೇಕು. ಅಷ್ಟೇ ಅಲ್ಲ. ಮುಂದೆಯೂ ಆ ಕಾರ್ಯಕ್ರಮಕ್ಕೆ ವೀಕ್ಷಕರ ಸಂಖ್ಯೆ ದ್ವಿಗುಣಗೊಳ್ಳಬೇಕು. ಹೀಗಾಗಬೇಕಾದರೆ ಕಾರ್ಯಕ್ರಮ ನಿರೂಪಕರ, ಮುಖ್ಯ ಭಾಷಣಕಾರರ ಪಾತ್ರ ಎಷ್ಟಿದೆಯೋ ಅದಕ್ಕಿಂತ ಮೂರು ಪಟ್ಟು ಶ್ರಮ ಆ ಕಾರ್ಯಕ್ರಮದ ಆಯೋಜಕರದ್ದಾಗಬೇಕು.

ಯಶಸ್ವಿ ಆಯೋಜಕರಾಗುವುದೂ ಒಂದು ಕೌಶಲ. ಇದಕ್ಕೆಂದೇ ಪ್ರತ್ಯೇಕ ಕಲಿಕಾ ವ್ಯವಸ್ಥೆ ಇರದಿದ್ದರೂ, ಸ್ವಯಂ ಕಲಿಕೆ ಮತ್ತು ಸ್ವಯಂ ಅನುಭವದಿಂದ ಉತ್ತಮ ಕಾರ್ಯಕ್ರಮ ಆಯೋಜಕರಾಗಿ ಗುರುತಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಮುಖ್ಯವಾಗಿ ಬೇಕಾದುದು ಸಂಘಟನ ಮನೋಭಾವ, ಇಚ್ಛಾಶಕ್ತಿ ಮತ್ತು ಮಾತುಗಾರಿಕೆ.

ಕಾಲೇಜು ಅನುಭವ
ಯಾವುದೇ ಒಂದು ಚಾತುರ್ಯ ಅಥವಾ ಯಶಸ್ಸಿಯ ಮೈಲಿಗಲ್ಲಿಗೆ ಮೊದಲ ಅಡಿಪಾಯ ಶಾಲಾ-ಕಾಲೇಜು. ಇಲ್ಲಿ ಸಿಗುವ ಅವಕಾಶಗಳು ವ್ಯಕ್ತಿಯನ್ನು ಬದುಕಿನಲ್ಲಿ ಉತ್ತಮತೆಯ ಕಡೆಗೆ ಕೊಂಡೊಯ್ಯುವುದು ಹಲವರ ಅನುಭವಗಳಿಂದ ಬಂದ ಅನುಭಾವಗಳು. ಕಾಲೇಜು ಹಂತದಲ್ಲಿ ಹಲವಾರು ರೀತಿಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಕಾಲೇಜು ಡೇ, ವಿವಿಧ ಫೆಸ್ಟ್‌ಗಳು, ಅಂತರ್‌ ಕಾಲೇಜು ಉತ್ಸವಗಳೆಲ್ಲ ವಿದ್ಯಾರ್ಥಿಗಳು ಮುಂದೆ ಅತ್ಯುತ್ತಮ ಕಾರ್ಯಕ್ರಮ ಸಂಘಟಕರಾಗಿ ಬೆಳೆಯುವ ನಿಟ್ಟಿನಲ್ಲಿ ಇರುವ ಮೆಟ್ಟಿಲುಗಳು. ಈ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡರೆ ಮುಂದೆ ಅದೇ ದೊಡ್ಡ ಮಟ್ಟದ ಕಾರ್ಯಕ್ರಮಗಳ ಆಯೋಜನೆಗೆ ಮೈಲಿಗಲ್ಲಾಗುತ್ತವೆ.

ಸಂಘಟನಾ ಚಾತುರ್ಯ
ಯಾವುದೇ ಒಂದು ಕಾರ್ಯಕ್ರಮವನ್ನು ಆಯೋಜಿಸಬೇಕಾದರೆ ಆಯೋಜಕರಲ್ಲಿ ಸಂಘಟನಾ ಚಾತುರ್ಯ ಇರಬೇಕು. ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜನರ ಭಾಗವಹಿಸುವಿಕೆಯೂ ಮುಖ್ಯ. ಆದರೆ ಜನರನ್ನು ಸೇರಿಸುವುದು ಹೇಗೆ? ಪ್ರಮುಖವಾಗಿ ಕಾರ್ಯಕ್ರಮ ನಡೆಯುವ ತಿಂಗಳ ಹಿಂದಯೇ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಆಮಂತ್ರಣ ಪತ್ರಿಕೆ ವಿತರಣೆ ಹೇಗೂ ಇದ್ದಿದ್ದೆ. ಅದರ ಜತೆಗೆ ಈಗಿನ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು.

ಫೇಸ್‌ಬುಕ್‌, ಟ್ವಿಟರ್‌, ವಾಟ್ಸಾಪ್‌ ಕಾರ್ಯಕ್ರಮ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿಯೇ ಜನರನ್ನು ಆಹ್ವಾನಿಸುವುದರೊಂದಿಗೆ, ಸಹಾಯಧನಕ್ಕಾಗಿಯೂ ಮನವಿಗಳನ್ನು ಸಲ್ಲಿಸಬಹುದು. ದಾನಿಗಳ ನೆರವಿನಿಂದ ಕಾರ್ಯಕ್ರಮಗಳನ್ನು ಆಯೋಜಿಸುವುದಿದ್ದರೆ, ಎಲ್ಲ ಲೆಕ್ಕಾಚಾರಗಳನ್ನು ಸೂಕ್ತವಾ ಗಿಯೇ ಬರೆದಿಟ್ಟುಕೊಳ್ಳಬೇಕು. ಇಲ್ಲವಾದರೆ ಆಯೋಜ ಕರಿಗೂ ತಲೆನೋವಾಗಿ ಪರಿಣಮಿಸಬಹುದು.

ಇಚ್ಛಾಶಕ್ತಿ
ಕೇವಲ ಸಂಘಟನ ಚಾತುರ್ಯವಿದ್ದರೆ ಸಾಲದು. ಆ ಕಾರ್ಯಕ್ರಮದ ತಯಾರಿಯಿಂದ ಹಿಡಿದು ಮುಗಿಯುವವರೆಗೆ ಏಕ ರೀತಿಯ ಇಚ್ಛಾಶಕ್ತಿಯನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು. ಉದಾಹರಣೆಗೆ ರಾಜ್ಯ, ಜಿಲ್ಲಾ ಮಟ್ಟದ ಸಮ್ಮೇಳನಗಳನ್ನು ಆಯೋಜಿಸಲು ಹೊರಟರೆ ಹೇಗೂ ದಿನವಿದೆಯಲ್ಲ; ನಾಳೆ ಮಾಡಿದರಾಯಿತು ಎಂದು ಮುಂದಕ್ಕೆ ಹಾಕಿದರೆ ಕಾರ್ಯಕ್ರಮ ಯಶಸ್ವಿಯಾಗದರು. ಪ್ರತಿದಿನವೂ ಹೊಸ ಹುರುಪಿನೊಂದಿಗೆ ತೊಡಗಿಸಿಕೊಳ್ಳುವುದು ಇಲ್ಲಿ ಬಹು ಅಗತ್ಯವೂ ಆಗಿದೆ.

ಸಮಯ ಹೊಂದಾಣಿಕೆ
ಕೆಲವು ಕಾರ್ಯಕ್ರಮಗಳಲ್ಲಿ ಸಮಯಕ್ಕೆ ಬೆಲೆಯೇ ಇರುವುದಿಲ್ಲ. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿರುವ ಕಾರ್ಯಕ್ರಮಗಳು ಆರಂಭವಾಗುವುದು ಮಧ್ಯಾಹ್ನ 12 ಗಂಟೆಗೆ. ಇಂತಹ ಕಡೆಗಳಲ್ಲಿ ಆ ಕಾರ್ಯಕ್ರಮದ ಆಯೋಜಕರ ವೈಫಲ್ಯ ಎದ್ದು ಕಾಣುತ್ತದೆ. ಇದು ಮುಂದಿನ ಬಾರಿ ಆತನ ಸೋಲಿಗೆ ಕಾರಣವಾಗಲೂಬಹುದು. ಸಮಯವನ್ನು ಚಾಚೂ ತಪ್ಪದೆ ಪಾಲಿಸುವುದನ್ನು ಕಲಿತರೆ ನಿಗದಿತ ಸಮಯದಲ್ಲೇ ಆರಂಭವಾಗಿ, ನಿಗದಿತ ಸಮಯದಲ್ಲೇ ಮುಕ್ತಾಯಗೊಳ್ಳಲು ಕಾರಣವಾಗುತ್ತದೆ. ಸಮ್ಮೇಳನಗಳಾದರೆ ಗೋಷ್ಠಿಗಳಿಗೆ ಸಮಯದ ಮಿತಿ ಹೇರಿ, ಅಂತೆಯೇ ಮುಕ್ತಾಯಗೊಳಿಸಿದರೆ, ಅನಗತ್ಯ ಮಾತು, ಅನಗತ್ಯ ಸಮಯದ ಅಭಾವವನ್ನು ತಡೆಯಬಹುದು. ಒಟ್ಟಿನಲ್ಲಿ ಈ ಎಲ್ಲ ಕೌಶಲಗಳನ್ನು ಕಾರ್ಯಕ್ರಮ ಆಯೋಜಕ ರೂಢಿಸಿಕೊಂಡರೆ ಆತನ ಯಶಸ್ಸಿನ ಕೀಲಿಕೈ ಆ ಕಾರ್ಯಕ್ರಮದಲ್ಲಿಯೇ ಭದ್ರವಾಗಿರುತ್ತದೆ ಎಂದರೆ ತಪ್ಪಾಗದು.

ಜ್ಞಾನ ಸಂಗ್ರಹ
ಕಾರ್ಯಕ್ರಮ ಆಯೋಜನೆ ದೊಡ್ಡ ಸಮಸ್ಯೆಯಲ್ಲ. ಆದರೆ ಆ ಕಾರ್ಯಕ್ರಮ ಆಯೋಜಿಸುವ ಉದ್ದೇಶ, ಅದರ ಹಿನ್ನೆಲೆಯ ಬಗ್ಗೆ ಆಯೋಜಕರಿಗೆ ಸ್ಪಷ್ಟ ಅರಿವಿರಬೇಕಾದುದು ಅಗತ್ಯ. ಪ್ರಚಾರಕ್ಕೋಸ್ಕರ, ಹೆಸರಿನ ಹಂಬಲಕ್ಕಾಗಿ ಯಾವುದಾದರೂ ಕಾರ್ಯಕ್ರಮ ಆಯೋಜಿಸಿದರೆ ಅದು ವಿಫಲವಾಗುವುದೇ ಹೆಚ್ಚು. ದಿನದ ಮಹತ್ವವನ್ನೂ ಭಾಷಣಕಾರರು ಹೇಗೆ ಅರಿತಿರುತ್ತಾರೋ, ಹಾಗೆಯೇ ಆಯೋಜಕರೂ ಅರಿತುಕೊಳ್ಳಬೇಕು. ಇದಕ್ಕಾಗಿ ಜ್ಞಾನ ಸಂಗ್ರಹ ಅಗತ್ಯ. ಪುಸ್ತಕಗಳಿಂದಲೋ, ಅಂತರ್ಜಾಲ ಮಾಧ್ಯಮಗಳಿಂದಲೋ ಮಹತ್ವದ ಕುರಿತಂತೆ ಪ್ರಾಥಮಿಕ ಜ್ಞಾನ ಹೊಂದುವುದು ತೀರಾ ಅಗತ್ಯ.

•••ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.