ಪೂಜ್ಯ ಭಾವನೆಯಿಂದ ದೇವರೊಲುಮೆ


Team Udayavani, Jan 27, 2020, 5:56 AM IST

kiru-lekhana-1-(3)-copy

ಮನಸ್ಸು ಇದ್ದರೆ ಏನನ್ನೂ ಸಾಧಿಸಬಹುದು. ಅಲಾರಂ ಇಟ್ಟು ಅದು ಬೆಲ್‌ ಮಾಡುವ ಮೊದಲೇ ಎದ್ದುಬಿಟ್ಟರೆ ಮಹಾನ್‌ ಸಾಧಕನಾಗಬಹುದೇನೋ. ಅದೇ ತಡವಾಗಿ ಎದ್ದರೆ ಎಲ್ಲ ಕೆಲಸವೂ ನಿಧಾನವೇ. ಅದಕ್ಕೆಂದೇ ಅಂದರೆ ಹಾಗಾಗಬಾರದೆಂದೇ ಈ ಅಲಾರಂ.

ಈಗೀಗ ಬ್ರಾಹ್ಮೀ ಮುಹೂರ್ತದ ಹೊತ್ತಲ್ಲಿ ಚಳಿಗಾಲದಲ್ಲಿ ಏಳುವುದು ಕೊಂಚ ತಡವಾಗಿಯೇ. ಹಾಗೆಂದು ಎಲ್ಲರೂ ಹಾಗಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಎದ್ದು ತಮ್ಮೆಲ್ಲ ಕೆಲಸಗಳನ್ನು ಮುಗಿಸಿ ಬಳಿಕ ವೃತ್ತಿಗೆ ತೆರಳುವವರನೇಕರಿದ್ದಾರೆ. ವೃತ್ತಿಪರರೂ ಇದ್ದಾರೆ. ಆದರೆ ಒಂದು ವೃತ್ತಿಗೆ ಜೀವಮಾನವಿಡೀ ನಿವೃತ್ತಿಯೆಂಬ ಪದವೇ ಬರುವುದಿಲ್ಲ. ಅದಕ್ಕೆ ವಿರಾಮವೂ ಇಲ್ಲ. ಹೀಗಾಗಿ ಬಹುತೇಕರು ಆ ವೃತ್ತಿಯನ್ನು ಶ್ರದ್ಧಾಪೂರ್ವಕವಾಗಿ, ಇನ್ನು ಕೆಲವರು ಮಾಡಬೇಕಲ್ಲ ಎಂಬ ಒತ್ತಾಸೆಯಿಂದ ಅಲ್ಲದೆ ಇನ್ನುಳಿದವರು ಅದಲ್ಲದೆ ಬೇರೆ ನಿರ್ವಾಹವೇ ಇಲ್ಲವೆಂದು ಮಾಡುವವರಿರುತ್ತಾರೆ. ಏನೇ ಆಗಲಿ ಗೃಹಿಣಿಯ ಕೆಲಸಗಳಿಗೆ ಬೇರೆ ಯಾವ ಕೆಲಸವೂ ಸರಿಸಾಟಿಯಾಗಲು ಕೊಂಚ ಕಷ್ಟವೇ.
ಆದರೆ ಈಗೀಗ ಅದಕ್ಕೂ ಪರಿಹಾರ ಸಿಗತೊಡಗಿದೆ. ಮೊಬೈಲಲ್ಲಿ ಆ್ಯಪ್‌ ಡೌನೊÉàಡ್‌ ಮಾಡಿದರೆ ಆಯಿತು. ಬೇಕಾದಾಗ ತಿಂಡಿಗಾಗಿ ಅಥವಾ ಊಟಕ್ಕಾಗಿ ಆರ್ಡರ್‌ ಮಾಡಿದರೆ ಆಯಿತು ಅಷ್ಟೆ. ಅರ್ಧ ಗಂಟೆಯೊಳಗೆ ಮನೆಗೆ ತಂದು ತಲುಪಿಸಿಬಿಡುತ್ತಾರೆ. ಏನು ಉತ್ತಮವಾಗಿದೆಯೋ ಅಷ್ಟೇ ಹಾನಿಯೂ ಇರಬಹುದೇನೋ ಎಂದನ್ನಿಸುತ್ತಿದೆ. ಅದೀಗ ಒಂದು ಪಕ್ಕದಲ್ಲಿ ಇರಲಿ ಬಿಡಿ.

ಬಾಂಧವ್ಯ ಗಟ್ಟಿಗೊಳಿಸೋಣ
ದೈಹಿಕ ಶ್ರಮವೆಂಬುದು ಈಗ ಬಹಳ ಕಡಿಮೆಯಾಗುತ್ತಿದೆ. ಮಾನಸಿಕ ಶ್ರಮವೆಂಬುದು ಮಿತಿ ಮೀರಿದೆಯೇನೋ ಎಂದು ತೋರುತ್ತಿದೆ. ಮನಸ್ಸು ನಾಗಾಲೋಟದ ಕುದುರೆಯಂತೆ ಚಲಿಸುತ್ತಿದೆ. ಕಡಿವಾಣ ಹಾಕೋಣವೆಂದರೆ ಯಾರಲ್ಲಿ ಹೇಳುವುದು? ಕೂತು ತಿಂದು ಮನಸ್ಸು ಸ್ವಾರ್ಥದ ಗೂಡಾಗತೊಡಗಿದೆ. ಆಲೋಚನ ಶಕ್ತಿಯೇ ಕುಸಿಯುತ್ತಿದೆ. ಆಧ್ಯಾತ್ಮಿಕತೆಗೆ ಮನಸ್ಸು ಹೊರಳುತ್ತಿಲ್ಲ. ಬರೀ ಸುಖ, ಮೋಜು, ಮಸ್ತಿಗಾಗಿ ಬಾಳುವೆ ಎಂಬಂತಾಗಿದೆ. ಏನಿಲ್ಲ ಅಂದರೂ ದಿನದಲ್ಲಿ ಒಂದರ್ಧ ಗಂಟೆಯಾದರೂ ಪುಸ್ತಕ ಓದಬೇಕು. ಅರ್ಧ ಗಂಟೆ ಭಜನೆ ಮಾಡುವುದು, ಅರ್ಧ ಗಂಟೆ ಕುಟುಂಬದ ಹಿರಿಯರೊಡನೆ ಹಾಗೂ ಅತೀ ಕಿರಿಯರೊಡನೆ ಮಾತನಾಡಿ ಉತ್ತಮ ಬಾಂಧವ್ಯವಿರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಆದರೆ ಇಂದು ಪಂಜರದೊಳಗಿರುವ ಗಿಳಿಯಂತೆ ನಾವು ನಮ್ಮ ವರ್ತುಲವನ್ನು ಸಂಕೀರ್ಣಗೊಳಿಸುತ್ತಿದ್ದೇವೆ. ಹೀಗಾದರೆ ಮುಂದೊಂದು ದಿನ ಸಂಬಂಧದ ಎಳೆಯನ್ನೇ ಮರೆತು ವಿನಾಶದ ಅಂಚಿಗೆ ಬೀಳಲಿದ್ದೇವೆ.

ಪೂಜಾಕಾರ್ಯದಲ್ಲಿ ಪಾಲ್ಗೊಳ್ಳಿ
ದೇವಾಲಯಗಳಿಗೆ ವಾರಕ್ಕೊಮ್ಮೆಯಾದರೂ ಭೇಟಿ ನೀಡಿ ಪೂಜಾಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ಆದಷ್ಟು ಸಂಬಂಧಿಕರಲ್ಲಿ ಗುರುತು ಹೇಳಿ ಮಾತನಾಡಿಸಬೇಕು. ಬಂಧು-ಮಿತ್ರರೊಡನೆ ಅಂಕಲ್‌, ಆಂಟಿಯನ್ನು ಬಿಟ್ಟು ಶುದ್ಧವಾಗಿ ಚಿಕ್ಕಪ್ಪ, ಮಾವ, ಚಿಕ್ಕಮ್ಮ, ಅತ್ತೆ ಎಂದು ಸಂಬೋಧಿಸಬೇಕು. ಅಪ್ಪ ಅಮ್ಮನಲ್ಲಿ ಪ್ರೀತಿಯಿಂದ ಮಾತನಾಡಬೇಕು. ಮಕ್ಕಳ ಒಳಿತಿಗಾಗಿ ತಾನೇ ಹೆತ್ತವರು ಶ್ರಮಿಸುವುದು. ಹಾಗಾಗಿ ಸದಾ ಅವರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಆಗಲೇ ದೇವರೊಲುಮೆ ಸುಲಭ ಸಾಧ್ಯವಾಗುತ್ತದೆ.

 ಮಲ್ಲಿಕಾ ಜೆ. ರೈ, ಗುಂಡ್ಯಡ್ಕ, ದರ್ಬೆ – ಪುತ್ತೂರು

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.