ಕಾರ್‌ ಪ್ರೇಮ್‌ ರಿಪೇರಿ; ಏನು ಎತ್ತ?


Team Udayavani, Dec 13, 2019, 4:33 AM IST

sa-39

ಕಾರು ಅಪಘಾತಕ್ಕೊಳಗಾದಾಗ ಮುಂಭಾಗ, ಹಿಂಭಾಗ, ಡೋರ್‌ಗಳಿಗೆ ಹಾನಿಯಾಗಬಹುದು. ಕಾರಿನ ಬಾಡಿಗಳಲ್ಲಿ ಗುಳಿ(ಡೆಂಟ್‌) ಬಿದ್ದಿದೆ ಎಂದರೆ ಅದು ಆತಂಕಕಾರಿ ವಿಚಾರವೇ ಅಲ್ಲ. ಆದರೆ ಕಾರಿನ ಪ್ರೇಮ್‌ಗೆ ಹಾನಿಯಾಗಿದೆ ಎಂದರೆ ಅದು ನಿಜಕ್ಕೂ ಆತಂಕ ಪಡಬೇಕಾದ ವಿಚಾರ. ಪ್ರೇಮ್‌ಗೆ ಹಾನಿಯಾದಾಗ ಏನು ಮಾಡಬೇಕು, ಅದನ್ನು ರಿಪೇರಿ ಮಾಡುವ ವಿಧಾನಗಳನ್ನು ನೋಡೋಣ.

ಪ್ರೇಮ್‌ ಹೇಗಿರುತ್ತದೆ?
ಕಾರಿನ ಪ್ರೇಮ್‌ ಎಂದರೆ ಮೂಲ ರೂಪ. ಇದನ್ನು ಯುನಿಬಾಡಿ ಪ್ರೇಮ್‌ಗಳು ಎಂದು ಕರೆಯುತ್ತಾರೆ. ಟ್ರಕ್‌ ಸೇರಿದಂತೆ ದೊಡ್ಡ ವಾಹನಗಳಲ್ಲಿ ಲ್ಯಾಡರ್‌ ಪ್ರೇಮ್‌ ಎಂದಿರುತ್ತದೆ. ಕಾರುಗಳಲ್ಲಿ 11 ರೀತಿಯ ವಿವಿಧ ಭಾಗಗಳು ಸೇರಿ ಒಂದು ಯುನಿಬಾಡಿ ಪ್ರೇಮ್‌ ಆಗಿರುತ್ತದೆ. ಈ ಭಾಗಗಳನ್ನು ವೆಲ್ಡಿಂಗ್‌ ಮೂಲಕ ಜೋಡಿಸಲಾಗಿರುತ್ತದೆ. ಆಧುನಿಕ ಕಾರುಗಳಲ್ಲಿ ಪ್ರೇಮ್‌ಗಳಿಗೆ ಹಾನಿಯಾದಾಗ, ಆ ಭಾಗದ ಫ್ರೆàಮ್‌ ಅನ್ನು ಕತ್ತರಿಸಿ ತೆಗೆದು ಹೊಸ ಭಾಗವನ್ನು ಕೂಡಿಸಲಾಗುತ್ತದೆ. ಆದರೆ ಇವುಗಳ ರಿಪೇರಿ ಸಾಧ್ಯವಿದೆ. ಕುಶಲ ಕೆಲಸಗಾರರು, ವಿಶೇಷವಾದ ಹಲವು ಸಲಕರಣೆಗಳನ್ನು ಬಳಸಿ ರಿಪೇರಿಯನ್ನು ಮಾಡಬಲ್ಲರು.

ಪ್ರೇಮ್‌ ರಿಪೇರಿ ಏಕೆ?
ಪ್ರೇಮ್‌ ಸರಿಯಾಗಿಲ್ಲದಿದ್ದರೆ ಕಾರಿನ ಸುಗಮ ಚಾಲನೆಗೆ ಕಷ್ಟ. ಅಷ್ಟೇ ಅಲ್ಲದೇ ಪ್ರೇಮ್‌ಗೆ ಹಾನಿಯಾಗಿದ್ದಾಗ ಇಡೀ ಕಾರಿನ ಸ್ವರೂಪದಲ್ಲಿ ಬದಲಾಗಿರುತ್ತದೆ. ಸುರಕ್ಷತೆ ದೃಷ್ಟಿಯಿಂದಲೂ ಕಾರಿನ ಪ್ರೇಮ್‌ ಹಾನಿಗೊಳಗಾದಾಗ ರಿಪೇರಿ ಮಾಡಿಸುವುದು ಉತ್ತಮ. ಕಾರಿನ ಪ್ರೇಮ್‌ ಹಾನಿ ಗೊಂಡಿದ್ದರೆ ವಾಹನದ ಮೌಲ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಇಂತಹ ವಾಹನಗಳ ಮಾರಾಟ ಸುಲಭವಿಲ್ಲ.

ಪ್ರೇಮ್‌ ರಿಪೇರಿ ಖರ್ಚೆಷ್ಟು?
ವಿವಿಧ ಕಾರುಗಳಿಗೆ ಅನುಗುಣವಾಗಿ ಈ ದರ ನಿಗದಿಯಾಗುತ್ತದೆ. ಕೆಲಸಗಾರರ ಕುಶಲತೆ, ಪರಿಣಾಮಕಾರಿತ್ವ ಹೆಚ್ಚಿದಷ್ಟೂ ದರವೂ ಹೆಚ್ಚು. ಸಾಮಾನ್ಯವಾಗಿ 25-50 ಸಾವಿರ ರೂ. ಖರ್ಚಾಗಬಹುದು. ಐಷಾರಾಮಿ ಕಾರುಗಳಾದರೆ ರಿಪೇರಿ ದರ ಲಕ್ಷ ರೂ. ದಾಟಬಹುದು.

ಪ್ರೇಮ್‌ ರಿಪೇರಿ ವಿಧಾನಗಳು
ಫ್ಲೋರ್‌ ಆ್ಯಂಕರ್‌ ಪೋಸ್ಟ್‌: ಕಾರಿನ ತಳಭಾಗಕ್ಕೆ ಹಾನಿಗೀಡಾದಾಗ ಫ್ಲೋರ್‌ ಆ್ಯಂಕರ್‌ ಪೋಸ್ಟ್‌ ಚೈನ್‌ ಮೂಲಕ ತಳಭಾಗವನ್ನು ಎಳೆದು ಸರಿಮಾಡಲಾಗುತ್ತದೆ. ಮುದ್ದೆಯಾದ ಭಾಗವನ್ನು ಬಿಸಿ ಮಾಡಿ ಎಳೆಯಲಾಗುತ್ತದೆ. ಇದನ್ನು ಫ್ಲೋರ್‌ ಆ್ಯಂಕರ್‌ ಪೋಸ್ಟ್‌ ರಿಪೇರಿ ಎಂದು ಕರೆಯುತ್ತಾರೆ.

ಪುಲ್ಲಿಂಗ್‌ ಪೋಸ್ಟ್‌: ಕಾರಿನಲ್ಲಿ ಮುಂಭಾಗ ಎರಡು ಮತ್ತು ಹಿಂಭಾಗ ಎರಡು ಕಡೆಗಳಲ್ಲಿ ಪ್ರಮುಖವಾಗಿ ಜೋಡಣೆಯಾದ ಭಾಗವಿದೆ. ಈ ಭಾಗಗಳು ಹಾನಿಗೊಳಗಾದಾಗ ಅವುಗಳ ಬದಿಗಳನ್ನು ಎಳೆದು ಹಿಂದಿನಂತೆ ಮಾಡಲಾಗುತ್ತದೆ ಅಥವಾ ಕತ್ತರಿಸಿ ಮರುಜೋಡಣೆ ಮಾಡಲಾಗುತ್ತದೆ. ಇದಕ್ಕೆ ಪುಲ್ಲಿಂಗ್‌ ಪೋಸ್ಟ್‌ಗಳು ಎಂದು ಹೆಸರು. ಪ್ರೇಮ್‌ನ ಬದಿಗಳು ಒಳಕ್ಕೆ ಹೋಗಿದ್ದರೂ ಇದೇ ವಿಧಾನದಲ್ಲಿ ರಿಪೇರಿ ಮಾಡಲಾಗುತ್ತದೆ.

ಪ್ರೇಮ್‌ ರ್ಯಾಕ್‌: ಇಡೀ ಕಾರು ನೇರವಾಗಿರಬೇಕು. ಹೀಗಿ ಲ್ಲದಿದ್ದರೆ ತಿರುವುಗಳಲ್ಲಿ ಎಳೆದ ಅನುಭವಗಳಾಗುತ್ತವೆ. ಪ್ರೇಮ್‌ಗೆ ಹಾನಿಯಾಗಿದ್ದರೆ ಅದನ್ನು ನೇರಗೊಳಿಸುವುದು ಪ್ರೇಮ್‌ ರ್ಯಾಕ್‌. ಇದೊಂದು ಸಾಧನದ ಮೂಲಕ ಕಾರಿನ ಮೂಲ ಪ್ರೇಮ್‌ ರ್ಯಾಕ್‌ ಅನ್ನು ನೇರಗೊಳಿಸಲಾಗುತ್ತದೆ.

ಬಾಡಿ ರಿಪೇರಿ: ಇಡೀ ಕಾರಿನ ಬಾಡಿ ಒಂದೇ ರೀತಿ ಯಾಗಿರಬೇಕು. ಡೋರುಗಳು, ಹಿಂಭಾಗ, ಮುಂಭಾಗದ ಬಾನೆಟ್‌ ನವಿರಾಗಿ ರೂಪಿತವಾಗಿರಬೇಕು. ಇದಕ್ಕಾಗಿ ವಿವಿಧ ಸಲಕರಣೆಗಳ ಮೂಲಕ ಬಾಡಿ ರಿಪೇರಿ, ನೇರಗೊಳಿಸುವ, ಬೇಕಾದ ಕಡೆಗಳಲ್ಲಿ ಬಾಗಿಸುವ ಕೆಲಸವನ್ನು ಮಾಡಲಾಗುತ್ತದೆ.

- ಈಶ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.