ಇಸ್ತ್ರಿ ಪೆಟ್ಟಿಗೆ ಹೀಗೆ ಶುಚಿಗೊಳಿಸಿ


Team Udayavani, Sep 21, 2019, 5:00 AM IST

u-39

ದಿನನಿತ್ಯ ಆಫೀಸ್‌ಗೆ ಹೋಗಬೇಕು, ಇವತ್ತು ಇಂಟರ್‌ವ್ಯೂ ಎಟೆಂಡ್‌ ಆಗಬೇಕು. ಒಂದಲ್ಲ ಒಂದು ಕೆಲಸಕ್ಕೆ ಹೊರಗೆ ಹೋಗಬೇಕು ಎಂದಾಗ ನಾವು ನೀಟ್‌ ಆದ ಬಟ್ಟೆ ತೊಡುವುದು ಸಾಮಾನ್ಯ. ನಾವು ಧರಿಸುವ ಬಟ್ಟೆ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂಬ ಮಾತಿದೆ. ನೀಟ್‌ ಆಗಿ ಆಫೀಸ್‌ಗೆ ತೆರಳದಿದ್ದರೆ ಮೇಲಧಿಕಾರಿಗಳಿಂದ ಬೈಸಿಕೊಳ್ಳುವ ಪ್ರಮೇಯಗಳು ಬರುತ್ತವೆ. ಹೀಗಾಗಿ ಬಟ್ಟೆಗಳಿಗೆ ನೀಟಾಗಿ ಇಸ್ತ್ರಿ ಹಾಕಿ ಅಚ್ಚುಕಟ್ಟಾಗಿ ರೆಡಿಯಾಗುತ್ತೇವೆ. ಹೀಗೆ ನಮ್ಮ ಡ್ರೆಸ್‌ ನೀಟಾಗಿ ಕಾಣಬೇಕಾದರೆ ಅದಕ್ಕೆ ಸರಿಯಾಗಿ ಇಸ್ತ್ರಿ ಮಾಡಿಕೊಳ್ಳಬೇಕು. ಕೆಲವೊಮ್ಮೆ ನಾವು ಇಸ್ತ್ರಿ ಹಾಕುವ ಭರದಲ್ಲಿ ಬಟ್ಟೆಗಳನ್ನು ಸುಟ್ಟು ಬಿಡುತ್ತೇವೆ. ಹೀಗೆ ಬಟ್ಟೆ ಸುಟ್ಟು ಹೋದಾಗ ಬಟ್ಟೆಗಳ ಚೂರುಗಳು ಇಸ್ತ್ರಿ ಪೆಟ್ಟಿಗೆಯಲ್ಲಿ ಅಂಟಿಕೊಂಡು ಬಿಡುತ್ತವೆ. ಅವುಗಳನ್ನು ಶುಚಿಗೊಳಿಸುವುದು ತಲೆನೋವಿನ ವಿಷಯ. ಶುಚಿಗೊಳಿಸದೇ ಇದ್ದರೆ ಮುಂದೆ ಬಟ್ಟೆಗಳಿಗೆ ಇಸ್ತ್ರಿ ಮಾಡಲಾಗದು. ಇಸ್ತ್ರಿ ಪೆಟ್ಟಿಗೆಯ ಕಲೆಯನ್ನು ತೆಗೆಯುವುದಕ್ಕೆ ಇಲ್ಲಿದೆ ಸಲಹೆ.

ಟೂತ್‌ಪೇಸ್ಟ್‌ ಬಳಸಿ ನೋಡಿ
ಸಾಮಾನ್ಯವಾಗಿ ಎಲ್ಲರೂ ಹಲ್ಲುಜ್ಜಲು ಟೂತ್‌ಪೇಸ್ಟ್‌ ಬಳಸುತ್ತೇವೆ. ಒಂದು ವೇಳೆ ಇಸ್ತ್ರಿ ಪೆಟ್ಟಿಗೆಯಲ್ಲಿ ಕಲೆಗಳಾದರೆ ಟೂತ್‌ಪೇಸ್ಟ್‌ ಅನ್ನು ಇಸ್ತ್ರಿ ಪೆಟ್ಟಿಗೆಗೆ ಹಚ್ಚಿ ಒಂದು ಐದು ನಿಮಿಷಗಳ ಕಾಲ ಹಾಗೆ ಬಿಡಿ. ಬಳಿಕ ಒಂದು ಒಣ ಬಟ್ಟೆಯಲ್ಲಿ ಶುಚಿಗೊಳಿಸಿ.

ಬಿಸಿನೀರು ಮತ್ತು ಸಾಬೂನು
ಒಂದು ಬಟ್ಟಲಿನಲ್ಲಿ ಬಿಸಿ ನೀರು ಮತ್ತು ಸಾಬೂನ್‌ ನೀರನ್ನು ಮಿಶ್ರ ಮಾಡಿ ಅದನ್ನು ಕಲೆಯಾದಂತಹ ಸ್ಥಳಗಳಿಗೆ ಹಚ್ಚಿ ಉಜ್ಜಿ. ಇಸ್ತ್ರಿ ಪೆಟ್ಟಿಗೆಯ ಕಲೆಗಳು ಮಾಯವಾಗುವುದು.

ನೀರು, ಬೇಕಿಂಗ್‌ ಸೋಡ
ಮೊದಲಿಗೆ ನೀರು ಮತ್ತು ಬೇಕಿಂಗ್‌ ಸೋಡವನ್ನು ಕಲಸಿಟ್ಟುಕೊಳ್ಳಿ. ಬಳಿಕ ಇಸ್ತ್ರಿ ಪೆಟ್ಟಿಗೆಯ ತೂತಿನೊಳಗೆ ಈ ದ್ರಾವಣವನ್ನು ಹಾಕಿ. ಸ್ವಲ್ಪ ಸಮಯದ ಬಳಿಕ ಒಂದು ಒಣ ಬಟ್ಟೆಯಿಂದ ಇಸ್ತ್ರಿ ಪಟ್ಟಿಗೆಯನ್ನು ಚೆನ್ನಾಗಿ ಒರೆಸಿ. ಇದರಿಂದ ಇಸ್ತ್ರಿ ಪೆಟ್ಟಿಗೆಯಲ್ಲಿ ಅಂಟಿಕೊಂಡಿರುವ ಕಲೆಗಳು ಮಾಯವಾಗುತ್ತವೆ.

ವಿನೆಗರ್‌ ಮತ್ತು ಉಪ್ಪು
ಒಂದು ಲೋಹದ ತಟ್ಟೆಗೆ ಉಪ್ಪು ಮತ್ತು ವಿನೆಗರ್‌ ಅನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಅನಂತರ ಅದನ್ನು ಒಂದು ತವದಲ್ಲಿ ಹಾಕಿ ಒಲೆಯ ಮೇಲೆ ಇಡಿ. ಉಪ್ಪು ಕರಗುವ ತನಕ ಹಾಗೆ ಬಿಡಿ. ಬಳಿಕ ಈ ಬಿಸಿ ದ್ರಾವಣವನ್ನು ಇಸ್ತ್ರಿ ಪೆಟ್ಟಿಗೆಯಲ್ಲಿ ಕಲೆಯಾಗಿರುವ ಜಾಗಕ್ಕೆ ಹಾಕಿ ಉಜ್ಜಿ ಇದರಿಂದ ಬೇಗನೆ ಕಲೆ ದೂರವಾಗುವುದು.

-   ಪೂರ್ಣಿಮಾ ಪೆರ್ಣಂಕಿಲ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.