ಸಾಧ್ಯವಾದರೆ ಕೈಲಾದಷ್ಟು ಸಹಾಯ ಮಾಡಿ


Team Udayavani, Feb 10, 2020, 6:00 AM IST

gggg

ಆ ಅಜ್ಜಿಗೆ ಅದೆಷ್ಟು ಹಸಿವಾಗಿತ್ತೋ ಏನೋ, ಹೊಟೇಲ್‌ ಒಂದಕ್ಕೆ ಹೋಗಿ ಒಂದು ಚಪಾತಿ ಮತ್ತು ಒಂದು ಹಿಡಿಯಷ್ಟು ಅನ್ನ ಸೇವಿಸುತ್ತಾಳೆ. ಆಹಾರ ಸೇವಿಸಿದ ಅನಂತರ ತನ್ನ ಸೆರಗಲ್ಲಿ ಗಂಟು ಕಟ್ಟಿಕೊಂಡಿದ್ದ ಮೂವತ್ತು ರೂ. ಗಳನ್ನು ಹೊಟೇಲ್‌ ಮಾಲಕನಿಗೆ ನೀಡುತ್ತಾಳೆ. ಆತ ಐವತ್ತು ರೂ. ಗಳನ್ನು ನೀಡುವಂತೆ ಆಕೆಯ ಜತೆಗೆ ತಗಾದೆ ತೆಗೆಯುತ್ತಾನೆ. ಅಲ್ಲಿದ್ದ ಗ್ರಾಹಕರ ಮುಂದೆಯೇ ಹಿರಿಜೀವ ಎನ್ನುವುದನ್ನೂ ನೋಡದೆ ಬೇಕಾಬಿಟ್ಟಿ ಎಗರಾಡುತ್ತಾನೆ. ಆ ತಾಯಿ ತನ್ನ ಬಳಿ ಇರುವುದೇ ಇಷ್ಟು ಎಂದು ಸೋತು ನಡೆಯುತ್ತಾಳೆ.

ಪಾಪ ಆ ಮನಸ್ಸು ಅದೆಷ್ಟು ನೊಂದು ಕೊಂಡಿರಬಹುದೋ ಏನೋ. ಆದರೆ ಆಕೆಯ ಕಷ್ಟವನ್ನು ಮಾತ್ರ ಕಿವಿಗೆ ಹಾಕಿಕೊಂಡಿಲ್ಲ ಈ ಸಮಾಜ ಎಂಬುದಷ್ಟೆ ಸತ್ಯ. ನೋಡಿದರೆ ಆಕೆ ತೀರಾ ಬಡತನದಲ್ಲಿ ಬೇಯುತ್ತಿದ್ದಳು ಎನ್ನುವುದನ್ನು ಆಕೆ ಉಟ್ಟ ಹರಕು ಮುರುಕು ಸೀರೆಯೇ ಹೇಳುತ್ತಿತ್ತು. ಗುಳಿ ಬಿದ್ದ ಕಣ್ಣುಗಳಲ್ಲಿ ಹಸಿವಿನ ತೀವ್ರತೆಯ ಅರಿವು ನೋಡಿದವರ ಗಮನಕ್ಕೆ ಬರುವಂತಿತ್ತು. ಹಣದ ಮಾಯೆಯಲ್ಲಿ ಸಿಲುಕಿದ್ದ ಹೊಟೇಲ್‌ ಮಾಲಕನಿಗೆ ಆಕೆಯ ಮೇಲೆ ಕರುಣೆ ಬಂದಿಲ್ಲ ಎಂದಾದರೆ ಹಣ ಆತನೊಳಗಿರಬೇಕಾಗಿದ್ದ ಮಾನವೀಯತೆಯ ಮೇಲೆ ಹೇಗೆ ಸವಾರಿ ಮಾಡಿದೆ ಎಂಬುದು ತಿಳಿಯುತ್ತದೆ. ಇದು ಅಸಮತೋಲಿತ ಸಮಾಜದ ಕನ್ನಡಿಯಂತಿರುವ ಒಂದು ಘಟನೆ. ಇಲ್ಲಿ ಎಲ್ಲರಿಗೆ ಎಲ್ಲವೂ ದಕ್ಕುವುದು ಸಾಧ್ಯವಿಲ್ಲ.

ಇನ್ನು ಕೆಲವರಿಗೆ ಆವಶ್ಯಕತೆಗಿಂತಲೂ ಅಧಿಕವಾಗಿ ದಕ್ಕಿರಬಹುದು ಎನ್ನುವ ಮಾತ್ರಕ್ಕೆ ನಾವು ದರ್ಪದ ದಾಸರಾಗುವುದಲ್ಲ. ಬದಲಾಗಿ ನಮ್ಮ ಕೈಯಲ್ಲಿ ಎಷ್ಟಾಗುತ್ತದೆಯೋ ಅಷ್ಟರಮಟ್ಟಿಗೆ ಸಮ ಕಷ್ಟದಲ್ಲಿ ಬದುಕು ಸಾಗಿಸುವ ಅನಿವಾರ್ಯ ಸ್ಥಿತಿಯಲ್ಲಿ ಇರುವವರಿಗೆ ಸಹಾಯ ಮಾಡುವುದನ್ನು ಕಲಿತುಕೊಂಡಾಗ ಮಾತ್ರವೇ ನಾವು ಗಳಿಸಿಕೊಂಡದ್ದಕ್ಕೂ ಅರ್ಥ ಬರುವುದರ ಜತೆಗೆ ಸಾರ್ಥಕ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ. ಕೇವಲ ಕೂಡಿಡುವುದಕ್ಕಷ್ಟೇ ನಮ್ಮನ್ನು ನಾವು ಮಿಸಲಿಟ್ಟೆವು ಎಂದಾದಲ್ಲಿ ಅದನ್ನು ಅನುಭವಿಸುವ ಭಾಗ್ಯವನ್ನು ಬೇರಿನ್ನಾರಾದರೂ ಪಡೆದುಕೊಳ್ಳುತ್ತಾರೆಯೇ ಹೊರತು ನಮ್ಮ ಸ್ಥಿತಿ ಜೇನು ನೊಣದಂತಾಗುತ್ತದಷ್ಟೇ. ಹೊರತು ಕೂಡಿಟ್ಟ ಜೇನಿನ ಸವಿ ನಮ್ಮದಾಗುವುದಿಲ್ಲ. ಹಾಗಾಗಿ ಕೂಡಿಟ್ಟ ಸಂಪತ್ತಿನಲ್ಲಿಯೇ ಕೊಂಚವನ್ನ ಇಲ್ಲದವರಿಗೆ ನೀಡುವತ್ತ ಗಮನವಹಿಸೋಣ. ಮಾನವೀಯ ಮೌಲ್ಯಗಳನ್ನೊಳಗೊಂಡ ಮಾದರಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ ಇತರರಿಗೂ ಬದುಕಿದ್ದರೆ ಹೀಗೆ ಬದುಕಿ ಎನ್ನುವ ಹಾಗೇ ಜೀವನ ನಡೆಸುವುದನ್ನು ಕಲಿತುಕೊಂಡರೆ ಜಗತ್ತು ಇನ್ನಷ್ಟು ಸುಂದರವಾಗುತ್ತದೆ.

- ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.