![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಮನೆ ನಿರ್ವಹಣೆ ಅಚ್ಚುಕಟ್ಟಾಗಿರಲಿ
Team Udayavani, May 4, 2019, 5:50 AM IST
![26](https://www.udayavani.com/wp-content/uploads/2019/05/26-620x332.jpg)
ಮನೆಯಲ್ಲಿ ಇರುವ ಜಾಗವನ್ನು ಹೇಗೆ ಸರಿಯಾಗಿ ಉಪಯೋಗಿಸಿಕೊಳ್ಳುತ್ತೇವೆ ಎಂಬುವುದು ಮುಖ್ಯ. ಸರಿಯಾಗಿ ಬಳಸುವುದರ ಜತೆಗೆ ವಸ್ತುಗಳನ್ನು ಸರಿಯಾಗಿ ಜೋಡಿಸಿ ಮನೆಯನ್ನು ಅಂದವಾಗಿಡಬಹುದು. ಬೇಡವಾದ ವಸ್ತುಗಳನ್ನು ಮನೆಯಲ್ಲಿ ತುಂಬುವುದಕ್ಕಿಂತ ಅಗತ್ಯವಿರುವ ವಸ್ತುಗಳನ್ನು ಇಡುವುದರಿಂದ ಮನೆ ಸುಂದರವಾಗಿ ಕಾಣುತ್ತದೆ.
ಮನೆಗೆ ವಸ್ತುಗಳನ್ನು ಖರೀದಿಸುವಾಗ ಒಂದೇ ವಸ್ತ್ತುವಿನಿಂದಾಗುವ ಹಲವು ಉಪಯೋಗಗಳ ಕುರಿತು ಯೋಚಿಸಿ ಖರೀಸುವುದರಿಂದ ಮನೆಯಲ್ಲಿ ವಸ್ತಗಳು ತುಂಬುವುದನ್ನು ತಪ್ಪಿಸಿಕೊಳ್ಳಬಹುದು.
ಬಹೂಪಯೋಗಿಪೀಠೊಪಕರಣ ಬಳಕೆ ಮಾಡಿ
ಅಗತ್ಯವಿರುವಷ್ಟು ಪೀಠೊಪಕರಣಗಳನ್ನು ಮನೆಯಲ್ಲಿ ಡುವುದರಿಂದ ಮನೆ ಸುಂದರವಾಗಿ ಕಾಣುತ್ತದೆ. ಬಹೂಪಯೋಗಿ ಪೀಠೊಪಕರಣಗಳನ್ನು ಬಳಕೆಯಿಂದ ಮನೆಯಲ್ಲಿ ಜಾಗದ ಸಮಸ್ಯೆ ಕಾಣಿಸುವುದಿಲ್ಲ. ಮನೆಯ ಗೋಡೆಯ ಬಣ್ಣದ ಕರ್ಟನ್, ಬೆಡ್ಶೀಟ್ಗಳನ್ನು ಬಳಸುವುದು ಉತ್ತಮ. ಇದರಿಂದ ಕೋಣೆಯಲ್ಲಿ ಜಾಗ ಹೆಚ್ಚು ಕಾಣಿಸುತ್ತದೆ. ಜತೆಗೆ ಆದಷ್ಟು ಲೈಟ್ ಬಣ್ಣವನ್ನು ಬಳಸುವುದು ಉತ್ತಮ.
ಗೋಡೆಯಲ್ಲಿ ಶೋಕೇಸ್ ನಿರ್ಮಿಸಿ
ಮನೆಯಲ್ಲಿ ಬಾಗಿಲುಗಳಿಗೆ ಸಾಕಷ್ಟು ಜಾಗ ಬೇಕಾಗುವುದರಿಂದ ಸ್ಲೈಡಿಂಗ್ ಬಾಗಿಲುಗಳನ್ನು ಮನೆಯಲ್ಲಿ ಬಳಸಬಹುದು. ಮನೆಯಲ್ಲಿ ಪ್ರತ್ಯೇಕ ಶೋಕೇಸ್ ಇಡುವುದರ ಬದಲು ಗೋಡೆಯಲ್ಲಿಯೇ ಶೋಕೇಸ್ ನಿರ್ಮಿಸುವುದರಿಂದ ಹೆಚ್ಚು ಜಾಗ ಮನೆಯಲ್ಲಿ ಸಿಗುತ್ತದೆ. ಕೊಣೆಯಲ್ಲಿರುವ ಪುಸ್ತಕಗಳು, ಆಕರ್ಷಕ ವಸ್ತಗಳನ್ನು ಅದರಲ್ಲಿಡುವುದರಿಂದ ಅಲ್ಲಲ್ಲಿ ಎಸೆಯುವುದು ಕಡಿಮೆಯಾಗುತ್ತದೆ.
ಮನೆಯ ಹಾಲ್ನಲ್ಲಿ ಅಗತ್ಯಕ್ಕಿಂತ ಹೆಚ್ಚು ಪೀಠೊಪಕರಣಗಳನ್ನು ಬಳಸುವ ಬದಲು ಅಗತ್ಯವಿರುವಷ್ಟು ವಸ್ತಗಳನ್ನು ಮನೆಯ ಹಾಲ್ನಲ್ಲಿಡಿ. ಇದರಿಂದ ವಿಸ್ತಾರವಾದ ಜಾಗ ಕಾಣಸಿಗುತ್ತದೆ.
ಗೋಡೆಯಲ್ಲಿ ದೊಡ್ಡದಾದ ಕನ್ನಡಿಯಿರುವುದರಿಂದ ಕೋಣೆ ಸುಂದರವಾಗಿ ಕಾಣುವುದರ ಜತೆಗೆ ಜಾಗ ವಿಸ್ತಾರವಾಗಿರುವಂತೆ ಕಾಣಿಸುತ್ತದೆ. ಕೋಣೆಯ ಅಂದವನ್ನು ಕನ್ನಡಿ ಬಳಸುವುದರಿಂದ ಹೆಚ್ಚಿಸಬಹುದು.
••ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.