ಟ್ರಾಫಿಕ್‌ ಸಮಸ್ಯೆಗೆ ಮ್ಯಾಜಿಕ್‌ ವೃತ್ತಾಕಾರ


Team Udayavani, Sep 8, 2019, 5:35 AM IST

SAKATH-IDEA-2

ನಗರೀಕರಣದ ಪ್ರಭಾವ ಬೆಳೆದಂತೆ ಅಲ್ಲಿನ ಸಮಸ್ಯೆಗಳ ವ್ಯಾಪ್ತಿ ಕೂಡ ಬೆಳೆಯುತ್ತಾ ಹೋಗುತ್ತದೆ. ಒಂದು ಕೇಂದ್ರದ ಕಡೆ ಜನರು ಅವಲಂಬಿತವಾದಾಗ ಅಲ್ಲಿನ ವ್ಯವಸ್ಥೆಗಳು ವೈಜ್ಞಾನಿಕವಾಗಿ ಮತ್ತು ಮುಂದಾಲೋಚನೆಯಾಗಿ ನಗರ ನಿರ್ಮಾಣದ ಕಡೆ ಹೆಜ್ಜೆ ಹಾಕಬೇಕಾಗುತ್ತದೆ. ಈ ರೀತಿ ವ್ಯವಸ್ಥೆಗಳು ಸಂಪೂರ್ಣಗೊಳ್ಳದೆ ಅವ್ಯವಸ್ಥೆಗೊಂಡಾಗ ಸಹಜವಾಗಿ ಅಲ್ಲಿ ಸಮಸ್ಯೆಗಳು ಎದ್ದು ನಿಲ್ಲಲು ಆರಂಭಿಸುತ್ತವೆ. ಸದ್ಯ ಬೆಳೆಯುತ್ತಿರುವ ನಗರಗಳು ಇಂತಹ ಸಮಸ್ಯೆಗಳನ್ನು ಹೊಂದಿಕೊಂಡೇ ಎಷ್ಟೇ ರೂಪುರೇಷೆಗಳ ಹೊರತಂದರೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ.

ಇವತ್ತು ನಗರ ಎಂದಾಕ್ಷಣ ಸಾವಿರಾರು ವಾಹನಗಳು, ಅಲ್ಲಲ್ಲಿ ಟ್ರಾಫಿಕ್‌ ಜಾಮ್‌ ನೆನಪಿಗೆ ಬರುತ್ತದೆ. ವಾಹನ ದಟ್ಟಣೆಗೆ ಸರಿಯಾಗಿ ರಸ್ತೆಗಳು ಇರದಿರುವುದು ಒಂದು ಸಮಸ್ಯೆಯಾದರೆ, ನಿಯಮಗಳು ಅಚ್ಚುಕಟ್ಟಾಗಿ ಮತ್ತು ವೈಜ್ಞಾನಿಕವಾಗಿ ಇಲ್ಲದಿರುವುದು ಮೂಲ ಸಮಸ್ಯೆಯಾಗಿದೆ. ಮುಂದುವರಿದ ಅನೇಕ ರಾಷ್ಟ್ರಗಳಲ್ಲಿ ಟ್ರಾಫಿಕ್‌ ಸಮಸ್ಯೆಗೆ ಅನೇಕ ರೀತಿಯ ಪರಿಹಾರೋಪಾಯದ ಪ್ರಯತ್ನಗಳು ನಡೆಯುತ್ತಿವೆ. ಅಂತಹುದರಲ್ಲಿ ನಮ್ಮಲ್ಲೂ ಅಳವಡಿಸಬಹುದಾದ ಟ್ರಾಫಿಕ್‌ ಯೋಜನೆ ಮ್ಯಾಜಿಕ್‌ ವೃತ್ತಾಕಾರ.

ಏನಿದು ಮ್ಯಾಜಿಕ್‌ ವೃತ್ತಾಕಾರ?
ಇಂಗ್ಲೆಂಡ್‌ನ‌ ಸ್ವೀಡನ್‌ನಲ್ಲಿ ಮ್ಯಾಜಿಕ್‌ ವೃತ್ತಾಕಾರವನ್ನು 1972ರಲ್ಲಿ ಜಾರಿಗೆ ತರಲಾಯಿತು. ಆರು ಮಾರ್ಗಗಳು ಒಂದು ಕೇಂದ್ರ ವೃತ್ತದ ಸುತ್ತ ವೃತ್ತದಲ್ಲಿ ವೈಜ್ಞಾನಿಕವಾಗಿ ಜೋಡಿಸಲಾದ ಐದು ಮಿನಿವೃತ್ತಾಕಾರಗಳನ್ನು ಒಳಗೊಂಡಿರುವ ರಿಂಗ್‌ ಜಂಕ್ಷನ್‌ ಆಗಿದೆ. ಸಂಕೀರ್ಣ ಜಂಕ್ಷನ್‌ ರಸ್ತೆಗಳ ನಡುವೆ ಟ್ರಾಫಿಕ್‌ ಒತ್ತಡವನ್ನು ತಪ್ಪಿಸಲು ಅನೇಕ ಮಾರ್ಗಗಳನ್ನು ಒಳಗೊಂಡಿದೆ. ಹೊರಗಿನ ವೃತ್ತ ಸಂಚಾರವನ್ನು ಪ್ರದಕ್ಷಿಣಾಕಾರವಾಗಿ ಸಾಮಾನ್ಯ ವೃತ್ತಾಕಾರದಂತೆ (ರಸ್ತೆಯ ಎಡಭಾಗದಲ್ಲಿ ಟ್ರಾಫಿಕ್‌ ಡ್ರೈವ್‌ ಮಾಡುವ ಸ್ಥಳಗಳಲ್ಲಿ) ಒಯ್ಯುತ್ತದೆ ಮತ್ತು ಕಡಿಮೆ ಪ್ರವೀಣ ಬಳಕೆದಾರರು ಹೊರಗಿನ ವಲಯವನ್ನು ಮಾತ್ರ ಬಳಸಲು ಆಯ್ಕೆ ಮಾಡಬಹುದು. ಆಂತರಿಕ ವಲಯವು ದಟ್ಟಣೆಯನ್ನು ಆ್ಯಂಟಿಕ್ಲಾಕ್‌ ವೈಸ್‌ ದಿಕ್ಕಿನಲ್ಲಿ ಒಯ್ಯುತ್ತದೆ ಮತ್ತು ಹೆಚ್ಚು ಪ್ರವೀಣ ಬಳಕೆದಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತಹ ಆಯ್ಕೆಗಳಿವೆ. ಹೀಗೆ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಮ್ಯಾಜಿಕ್‌ ವೃತ್ತಾಕಾರದ ಬಳಕೆ ಮುಂದುವರಿದ ನಗರಗಳಲ್ಲಿದೆ.

ನಮ್ಮ ನಗರಗಳಲ್ಲಿ ಅಳವಡಿಕೆಯಾಗಲಿ
ಈ ಮೇಲಿನ ಕೆಲವೊಂದು ಚಿತ್ರಗಳನ್ನು ಗಮನಿಸಿದಾಗ ಇಲ್ಲಿನ ಕೆಲವೊಂದು ಟ್ರಾಫಿಕ್‌ ಕೇಂದ್ರಗಳನ್ನು ಕಂಡಂತೆ ಭಾಸವಾಗುತ್ತದೆ. ಸದಾ ಟ್ರಾಫಿಕ್‌ ಸಮಸ್ಯೆಯಲ್ಲಿ ಸುಳಿಯುತ್ತಿರುವ ನಂತೂರ್‌ ಸರ್ಕಲ್‌ ಅದೆಷ್ಟೋ ಅಪಘಾತಗಳನ್ನು ಕಂಡಿದೆ. ಇದಕ್ಕೆ ಅನೇಕ ಕಾರಣಗಳು. ಇಲ್ಲಿನ ಟ್ರಾಫಿಕ್‌ ಕೇಂದ್ರ ತುಂಬಾ ವಿಶಾಲವಾಗಿದೆ. ಸರಿಯಾದ ಟ್ರಾಫಿಕ್‌ ವ್ಯವಸ್ಥೆ ಇಲ್ಲದಿರುವುದು ಹೀಗೆ ಮುಂತಾದ ಕಾರಣಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುವಂತಿದು. ಈ ಮ್ಯಾಜಿಕ್‌ ವೃತ್ತಾಕಾರವನ್ನು ಅಳವಡಿಸಿದ ವಿದೇಶಿ ನಗರಗಳನ್ನು ಅನುಸರಿಸಿ ಅಲ್ಲಿನ ತಂತ್ರಜ್ಞರಿಂದ ಮಾಹಿತಿ ಸಂಗ್ರಹಿಸಿ ಮಂಗಳೂರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಿಸಿಕೊಡಬಹುದು.

ಎಲ್ಲಿ ಉಪಯೋಗ?
ಒಂದು ಕೇಂದ್ರ ಸ್ಥಳವು 5, 6 ರಸ್ತೆಗಳನ್ನು ಹೊಂದಿದ್ದಲ್ಲಿ ಅಲ್ಲಿ ಸಾಮಾನ್ಯವಾಗಿ ವಾಹನ ದಟ್ಟಣೆ, ಅಪಘಾತಗಳು ಕಂಡುಬರುತ್ತವೆ. ಇದನ್ನು ತಪ್ಪಿಸಲು ಮೇಲೆ ಹೇಳಿದ ಮ್ಯಾಜಿಕ್‌ ವೃತ್ತಾಕಾರದ ನಿಯಮವನ್ನು ಅಳವಡಿಸಬಹುದು. ಇದು ತಜ್ಞರನ್ನು ಒಳಗೊಂಡು ಮಾಡಬಹುದಾಗಿದ್ದು. ತುಂಬಾ ರಸ್ತೆಗಳು, ಕೇಂದ್ರ ಸ್ಥಳದ ವ್ಯಾಪ್ತಿಯ ಪರಿದಿಯನ್ನು ಆಧರಿಸಿ ನಿರ್ಮಿಸಲಾಗುತ್ತದೆ. ವ್ಯಾಪ್ತಿಯ ಲೆಕ್ಕವನ್ನು ಪರಿಗಣನೆಗೆ ಪಡೆದು ಜ್ಯಾಮಿತಿ ಮುಖೇನ ಇಲ್ಲಿ ರಸ್ತೆಯ ದಿಕ್ಕನ್ನು ಸಂಕೇತದ ಮೂಲಕ ಸೂಚಿಸಲಾಗುತ್ತದೆ.

- ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.