ಗುರಿ,ಗುರು ಅತ್ಯವಶ್ಯ


Team Udayavani, Oct 14, 2019, 5:01 AM IST

savinudi

ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ ಎಂಬುದು ದೂರದ ಮಾತೇ ಸರಿ. ಸಾಧನೆ ಎಂಬುದು ಹಣಬಲ, ಜನಬಲಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಪ್ರತಿ ಸಾಧನೆಯೂ ಅವಲಂಬಿತವಾಗಿರುವುದು ವ್ಯಕ್ತಿಯಲ್ಲಿನ ಆತ್ಮವಿಶ್ವಾಸ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಗುರುವಿನ ಮೇಲೆ.

ಒಂದೂರಿನಲ್ಲಿ ಒಬ್ಬ ಹುಡುಗನಿದ್ದ. ಆತನಿಗೆ ಕರಾಟೆಯೆಂದರೆ ಪಂಚ ಪ್ರಾಣ. ಕರಾಟೆ ಚಾಂಪಿಯನ್‌ ಆಗಬೇಕೆಂಬ ಹಂಬಲ. ಮಗನ ಆಸಕ್ತಿಯನ್ನು ಗಮನಿಸಿದ ಆತನ ತಂದೆಯೂ ಮಗನನ್ನು ಕರಾಟೆ ತರಗತಿಗೆ ಸೇರಿಸಿದ. ಈತನ ಉತ್ಸಾಹವನ್ನು ಕಂಡ ಗುರುವೂ ನಿಬ್ಬೆರಗಾದ. ಅನಂತರ ಕೆಲ ದಿನ ಗಳಲ್ಲಿ ನಡೆದ ಕಾರಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹುಡುಗ ತನ್ನ ಎಡಗೈಯನ್ನು ಕಳೆದುಕೊಂಡ. ಘಟನೆ ಬಳಿಕ ಹುಡುಗನಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗಿತ್ತು. ಕರಾಟೆ ಮಾಡಲು ಎರಡೂ ಕೈಗಳು ಬೇಕೇ ಬೇಕು. ಆದರೆ ತ‌ನಗೆ ಒಂದು ಕೈ ಇಲ್ಲದ ಕಾರಣ ತ‌ನ್ನೆಲ್ಲಾ ಕನಸು ಕಮರಿ ಹೋಯಿತೆಂಬ ಕೊರಗು ಆತನನ್ನು ಕಾಡುತ್ತಿತ್ತು.

ಈ ನಡುವೆ ಇದ್ದಕ್ಕಿದ್ದಂತೆ ಒಂದುದಿನ ಆತನ ಕರಾಟೆ ಗುರು ಮನೆಗೆ ಬಂದ. “ತರಗತಿಗೆ ಯಾಕೆ ಬರುತ್ತಿಲ್ಲ?’ ಎಂದು ಹುಡುಗನನ್ನು ಪ್ರಶ್ನಿಸಿದ. ಅಳುತ್ತ ಹುಡುಗ ಕೇಳಿದ, “ಏನು ಗುರುಗಳೇ ನೀವೂ ನನ್ನನ್ನು ತಮಾಷೆ ಮಾಡುತ್ತಿದ್ದೀರಾ’ ಎಂದು. ಆಗ ಗುರುಗಳು ಹೇಳಿದರು, “ಕೈಗಳು ಇಲ್ಲದಿದ್ದರೆ ಏನಾಯಿತು? ಸಾಧಿಸಬೇಕೆಂಬ ಅಚಲವಾದ ವಿಶ್ವಾಸ ನಿನ್ನಲ್ಲಿದ್ದರೆ ನನ್ನೊಡನೆ ಬಾ. ನಿನ್ನಿಂದ ಎಲ್ಲವೂ ಸಾಧ್ಯ ಎಂಬ ವಿಶ್ವಾಸವಿಟ್ಟುಕೊಂಡು, ಗುರುವಾದ ನನ್ನನ್ನು ನಂಬು. ಉಳಿದೆಲ್ಲ ವಿಷಯವನ್ನು ನನಗೆ ಬಿಟ್ಟುಬಿಡು. ನಾನು ನಿನಗೆ ಹೇಳಿಕೊಡುವುದು ಕರಾಟೆಯ ಒಂದು ಪಟ್ಟನ್ನು ಮಾತ್ರ. ಅದನ್ನು ನೀನು ಶ್ರದ್ಧೆಯಿಂದ ಕಲಿತೆಯೋ ನಿನ್ನ ಗೆಲುವನ್ನು ಯಾರೂ ತಡೆಯಲಾರರು’ ಎಂದ. ಇದಕ್ಕೊಪ್ಪಿದ ಹುಡುಗ ಅಂದಿನಿಂದಲೇ ಶ್ರದ್ಧೆಯಿಂದ ಅಭ್ಯಸಿಸತೊಡಗಿದ. ಕೆಲ ದಿನಗಳಲ್ಲೇ ಆರಂಭವಾದ ಚಾಂಪಿ ಯನ್‌ಶಿಪ್‌ ಪಂದ್ಯಾಟದಲ್ಲಿಯೂ ಹಂತ ಹಂತವಾಗಿ ಗೆದ್ದು ಫೈನಲ್‌ ಕೂಡ ಗೆದ್ದುಬಿಟ್ಟ. ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಅನಂತರ ಗುರುವಿನ ಕಾಲಿಗೆ ನಮಸ್ಕರಿಸಿ ಆತ ಕೇಳಿದ, “ಗುರುಗಳೇ, ಒಂದೇ ಕೈಯಿದ್ದರೂ ನಾನು ಗೆದ್ದಿದ್ದಾದರೂ ಹೇಗೆ?’ ಎಂದು. ಅದಕ್ಕೆ ಗುರು ಹೇಳಿದ, “ನಾನು ನಿನಗೆ ಹೇಳಿಕೊಟ್ಟ ಪಟ್ಟಿನಿಂದ ಎದುರಾಳಿಗಳು ತಪ್ಪಿಸಿಕೊಳ್ಳಬೇಕೆಂದರೆ ಅವರು ನಿನ್ನ ಎಡಗೈಯನ್ನು ಹಿಂದಕ್ಕೆ ಎಳೆದು ತರಲೇಬೇಕು. ಆದರೆ ನಿನಗೆ ಎಡಗೈ ಇಲ್ಲದ ಕಾರಣ ಅದು ಅವರ್ಯಾರ ಬಳಿಯೂ ಸಾಧ್ಯವಾಗಲಿಲ್ಲ’ ಎಂದ.

ಇದೊಂದು ಚಿಕ್ಕ ಕತೆಯಷ್ಟೆ. ಆದರೆ ಸ್ಪಷ್ಟ ಗುರಿ, ದೈಹಿಕ ನ್ಯೂನತೆಯನ್ನೂ ಅನುಕೂಲಕ್ಕೆ ಬಳಸಿಕೊಂಡು ನಿಮ್ಮ ಗೆಲುವಿಗೆ ಶ್ರಮಿಸುವ ಗುರು ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಹತ್ತರ ಸಂದೇಶ ಇಲ್ಲಿದೆ.

-  ಪ್ರಸನ್ನ ಹೆಗಡೆ ಊರಕೇರಿ

ಟಾಪ್ ನ್ಯೂಸ್

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.