ಕುತ್ತಿಗೆ ನೋವು ಉಪಶಮನಕ್ಕೆ ಸರಳ ವ್ಯಾಯಾಮ


Team Udayavani, Nov 19, 2019, 4:51 AM IST

cc-30

ಕೆಲ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಪೈಕಿ ಕುತ್ತಿಗೆ ನೋವು ಒಂದು. ಕೆಲವು ಸರಳ ಸೆಳೆತದ ವ್ಯಾಯಾಮಗಳನ್ನು ಅನುಸರಿಸುವ ಮೂಲಕ ಈ ನೋವನ್ನು ಬರದಂತೆ ಮಾಡಬಹುದು. ಅಂತಹ ಕೆಲ ಸರಳ ವ್ಯಾಯಾಮಗಳು ಇಲ್ಲಿವೆ.

ಕುತ್ತಿಗೆಯನ್ನು ತಿರುಗಿಸುವುದು
ಮೊದಲು ದೀರ್ಘ‌ವಾದ ಉಸಿರೆಳೆದುಕೊಂಡು ಎಡಕ್ಕೆ ಕುತ್ತಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಎಡಕ್ಕೆ ತಿರುಗಿಸಿ ಕೆಲವು ಸೆಕೆಂಡು ಹಾಗೇ ಇರಿಸಿ ಅನಂತರ ನಿಧಾನವಾಗಿ ಬಲಗಡೆಗೆ ಸಾಧ್ಯವಾದಷ್ಟು ತಿರುಗಿಸಿ ನಂತರ ನಡುವಿಗೆ ತಂದು ಉಸಿರು ಬಿಡಿ. ಈ ವಿಧಾನವನ್ನು ಸುಮಾರು ಐದು ಬಾರಿ ಪುನರಾವರ್ತಿಸಿ.

ಕುತ್ತಿಗೆಯನ್ನು ಬಗ್ಗಿಸುವುದು
ದೀರ್ಘ‌ವಾಗಿ ಉಸಿರೆಳೆದುಕೊಂಡು ಮುಂದಕ್ಕೆ ಮುಖವನ್ನು ಬಗ್ಗಿಸಿ. ನಿಮ್ಮ ಗದ್ದ ಎದೆಗೆ ತಾಕುವಷ್ಟು ಬಾಗಿ. ಇದೇ ಭಂಗಿಯಲ್ಲಿ ಕುತ್ತಿಗೆಯನ್ನು ಪಕ್ಕಕ್ಕೆ ಬಾಗಿಸಿ ಭುಜವನ್ನು ಎತ್ತದೇ ಬಲಕಿವಿಯನ್ನು ಬಲಭುಜಕ್ಕೆ ತಾಕಿಸಲು ಯತ್ನಿಸಿ. ಇದೇ ರೀತಿ ಎಡಕಿವಿಯನ್ನು ಎಡಭುಜಕ್ಕೆ ತಾಕಿಸಲು ಯತ್ನಿಸಿ ಬಳಿಕ ಕುತ್ತಿಗೆ ನೆಟ್ಟಗಾಗಿಸಿ ಉಸಿರು ಬಿಡಿ. ಈ ವಿಧಾನವನ್ನು ಐದು ಬಾರಿ ಪುನರಾವರ್ತಿಸಿ.

ನಿಂತು ಕುತ್ತಿಗೆಯನ್ನು ನೀಳವಾಗಿಸುವುದು
ಎರಡೂ ಪಾದಗಳು ಕೊಂಚ ದೂರವಿರುವಂತೆ ಕಾಲುಗಳನ್ನು ಅಗಲಿಸಿ ನಿಂತುಕೊಳ್ಳಿ. ಈಗ ಪೂರ್ಣ ಉಸಿರೆಳೆದುಕೊಂಡು ಬಲಗಿವಿಯನ್ನು ಬಲಭುಜಕ್ಕೆ ತಾಗಿಸಲು ಯತ್ನಿಸಿ. ಇದೇ ರೀತಿ ಎಡಗಿವಿಯನ್ನು ಎಡಭುಜಕ್ಕೆ ತಾಕಿಸಲು ಯತ್ನಿಸಿ. ಈ ಕ್ರಮವನ್ನು ಆರೇಳು ಬಾರಿ ಪುನರಾವರ್ತಿಸಿ. ನೋವು ಉಂಟಾಗಿದ್ದರೆ ಈ ಕ್ರಮದಿಂದ ತಕ್ಷಣವೇ ಕಡಿಮೆಯಾಗುತ್ತದೆ.

ಹಿಂದಕ್ಕೆ ವಾಲಿ ಕುತ್ತಿಗೆಗೆ ಸೆಳೆತ ನೀಡುವುದು
ನಿಂತ ಭಂಗಿಯಲ್ಲಿ ನಿಮ್ಮ ಎರಡೂ ಹಸ್ತಗಳನ್ನು ಬೆನ್ನ ಹಿಂದೆ ತಂದು ಮೊದಲು ಬಲಮಣಿಕಟ್ಟನ್ನು ಎಡಹಸ್ತದಿಂದ ಗಟ್ಟಿಯಾಗಿ ಹಿಡಿದುಕೊಳ್ಳಿ. ಈಗ ನಿಮ್ಮ ಭುಜಗಳು ಕೊಂಚವೇ ಮುಂದಕ್ಕೆ ಬಾಗಿರುತ್ತವೆ. ಈಗ ಬಲಗಿವಿಯನ್ನು ಬಲಭುಜಕ್ಕೆ ತಾಗಿಸಲು ಯತ್ನಿಸಿ ಹಾಗೂ ಎಡಗಿವಿಯನ್ನು ಎಡಕ್ಕೆ ತಾಕಿಸಲು ಯತ್ನಿಸಿ. ಈಗ ಕೈಗಳನ್ನು ಬದಲಾಯಿಸಿ ಇದೇ ಕ್ರಮವನ್ನು ನಾಲ್ಕಾರು ಬಾರಿ ಪುನರಾವರ್ತಿಸಿ. ಈ ಕ್ರಮದಿಂದಲೂ ಕುತ್ತಿಗೆ ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಕೈಗಳನ್ನು ಹಿಂದೆ ಕಟ್ಟಿಕೊಂಡು ಸೆಳೆತ ನೀಡುವುದು
ಕುರ್ಚಿಯಲ್ಲಿ ಆರಾಮವಾಗಿ ಕುಳಿತು ಎರಡೂ ಕೈಗಳ ಬೆರಳುಗಳನ್ನು ತಲೆಯ ಹಿಂಭಾಗದಲ್ಲಿ ಬೆಸೆಯಿರಿ. ಈಗ ಕೈಗಳಿಂದ ಕುತ್ತಿಗೆಯನ್ನು ಮುಂದಕ್ಕೆ ಬಾಗಿಸಲು ಹಾಗೂ ಕುತ್ತಿಗೆಯನ್ನು ಹಿಂದಕ್ಕೆಳೆದುಕೊಳ್ಳಲು ಯತ್ನಿಸಿ. ಎರಡೂ ಶಕ್ತಿಗಳು ಒಂದಕ್ಕೊಂದು ಸರಿಯಾಗಿರುವಂತೆ ಕೆಲವು ಸೆಕೆಂಡುಗಳ ಕಾಲ ಇರಿ ಬಳಿಕ ಸಡಿಲವಾಗಿಸಿ. ಇದು ತಲೆನೋವು ಬಂದಾಗ ಅನುಸರಿಸಲು ಉಪಯುಕ್ತವಾದ ವ್ಯಾಯಾಮವಾಗಿದೆ.

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.