ಮುಖವರ್ಣಿಕೆಯೊಂದಿಗೆ ಅರಳಿದ ಚಿಣ್ಣರು


Team Udayavani, Apr 14, 2017, 3:50 AM IST

14-KALA-4.jpg

ರಂಗ ಕಲೆಗಳಲ್ಲಿ ಪ್ರಧಾನವಾದ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ ಎನ್ನುವ ನಾಲ್ಕು ಅಂಗಗಳಲ್ಲಿ ಪ್ರಥಮ ಪ್ರಾಶಸ್ತ ಆಹಾರ್ಯ (ವೇಷಭೂಷಣ ಮತ್ತು ಬಣ್ಣಗಾರಿಕೆ)ಕ್ಕೆ. ಯಾಕೆಂದರೆ ಪಾತ್ರಗಳ ಮುಖವರ್ಣಿಕೆಯೇ ರಂಗದ ಮುಂದಿರುವ ಪ್ರೇಕ್ಷಕರಿಗೆ ಪಾತ್ರದ ಗುಣಸ್ವಭಾವಗಳನ್ನು ತಿಳಿಸುತ್ತದೆ. ಇಲ್ಲಿ ಮುಖವರ್ಣಿಕೆಗೆ ಬೇಕಾಗಿರುವುದು ಸಾಕಷ್ಟು ತಾಳ್ಮೆ, ಶ್ರದ್ಧೆ ಮತ್ತು ಪಾತ್ರಗಳ ಬಗ್ಗೆ ಅರಿವು. ಇದನ್ನು ಎಳವೆಯಲ್ಲಿಯೇ ಮಕ್ಕಳಿಗೆ ಪ್ರಾಯೋಗಿಕತೆಯೊಂದಿಗೆ ತಿಳಿಹೇಳಿದಾಗ ಮುಂದೆ ಉತ್ತಮ ಕಲಾವಿದರಾಗಬಲ್ಲರು. ಅದಕ್ಕಾಗಿ ನಲವತ್ತೆರಡರ ಹರೆಯದ ಸಾಲಿಗ್ರಾಮ ಮಕ್ಕಳ ಮೇಳವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು (ಉಡುಪಿ ಜಿಲ್ಲೆ) ಇದರ ಸಹಯೋಗದೊಂದಿಗೆ ಮೇಳದ ಕಚೇರಿಯ ಆವರಣದಲ್ಲಿ “”ಚಿಣ್ಣರ ಮುಖವರ್ಣಿಕೆ ಶಿಬಿರ”ವನ್ನು ಏರ್ಪಡಿಸಿತ್ತು. ಮೊದಲಿಗೆ ಪೂರ್ವರಂಗದ ಹಾಡುಗಳಿಗೆ ಸೊಗಸಾಗಿ ಹೆಜ್ಜೆಗಳನ್ನು ಹಾಕಿದ ಎಳೆಯರು, ಯಕ್ಷರಂಗದ ಶಿಸ್ತು ಮತ್ತು ಚಟುವಟಿಕೆಗಳು ಹೇಗಿರಬೇಕೆಂಬುದನ್ನು ಅರಿತರು. ಮುಂದೆ ಮುಖವರ್ಣಿಕೆಯ ಭಾಗದಲ್ಲಿ ಬಿಳಿಬಣ್ಣದ (ಜಿಂಕ್‌ ಆಕ್ಸೆ„ಡ್‌) ಹುಡಿಯನ್ನು ಅಂಗೈಯಲ್ಲಿ ಹಿಡಿದು ಅದಕ್ಕೆ ಮಿತವಾಗಿ ಹಳದಿ ಮತ್ತು ಕೆಂಪು ವರ್ಣಗಳನ್ನು ಸೇರಿಸಿ ತೆಂಗಿನೆಣ್ಣೆ ಯೊಂದಿಗೆ ಕಲಸಿ ತಯಾರಿಸಿದ ಪೇಸ್ಟನ್ನು ಮುಖಕ್ಕೆ ಹಚ್ಚುವ ಕ್ರಮ, ಬಳಿಕ ರೋಸ್‌ ಪೌಡರ್‌ ಬಳಕೆ, ಅನಂತರ ಮುಖದ ಸೂಕ್ತ ಭಾಗದಲ್ಲಿ ಒಟ್ಟಂದಕ್ಕೆ ಪೂರಕವಾದ ಕೆಂಪು ಹಳದಿ ಮಿಶ್ರಣ ಶೇಡ್‌, ಕಾಡಿಗೆಯಿಂದ ಕಣ್ಣಿನ ರೆಪ್ಪೆಗಳ ಮುಂಭಾಗ ಮತ್ತು ಹುಬ್ಬಿನ ರಚನೆಯೊಂದಿಗೆ ಎರಡೂ ಕಣ್ಣುಗಳ ಬದಿಗಳಲ್ಲಿ ಬಿಳಿವರ್ಣದ ಮುದ್ರೆಗಳು, ಹಣೆಯಲ್ಲಿ ನಾಮ ಗಳನ್ನು ಬರೆಯುವ ರೀತಿಯನ್ನು ಕುಂಚಗಳ ಹಿಡಿತದ ಅರಿವಿನೊಂದಿಗೆ ಕಲಿತರು. ಪಾತ್ರಗಳ ಸಾತ್ವಿಕ, ರಾಜಸ ಮತ್ತು ತಾಮಸ ಗುಣಗಳನ್ನು ಬಣ್ಣ ಮತ್ತು ರೇಖೆಗಳ ಮುಖೇನ ಮುಖದಲ್ಲಿ ಅಭಿವ್ಯಕ್ತಿಗೊಳಿಸುವುದು, ಹಾಸ್ಯ ಪಾತ್ರಗಳನ್ನು ಬಿಂಬಿಸುವ ವಿವಿಧ ಮುಖವರ್ಣಿಕೆಗಳ ಬಗೆಗೆ ಅರಿತುಕೊಂಡರು. ಅಡಿಯಿಂದ ಮುಡಿಯವರೆಗೆನ ಯûಾಭರಣಗಳ ಮತ್ತು ವಸ್ತ್ರವಿನ್ಯಾಸಗಳ ಪ್ರಾತ್ಯಕ್ಷಿಕೆ ಸಹಿತ ಪರಿಚಯ ಮಾಡಿಕೊಂಡರು. ದಿನವಿಡೀ ನಡೆದ ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷ್ಣಸ್ವಾಮಿ ಜೋಯಿಸ್‌ ಬ್ರಹ್ಮಾವರ, ಬಿರ್ತಿ ಬಾಲಕೃಷ್ಣ, ಸುಜಯೀಂದ್ರ ಹಂದೆ, ಸುಹಾಸ ಕರಬ ಮುಂತಾದವರು ಸಹಕರಿಸಿದ್ದರು. 

ತಮ್ಮ ಮುಖವರ್ಣಿಕೆಯನ್ನು ತಾವೇ ಮಾಡಿ ಕೊಂಡು ಆತ್ಮವಿಶ್ವಾಸದ ನಗುವಿನೊಂದಿಗೆ ಅರಳಿದ ಚಿಣ್ಣರ ಮುಖಗಳು ಕಾರ್ಯಗಾರದ ಯಶಸ್ಸನ್ನು ಸಾರಿದವು. ಈ ಕಾರ್ಯಕ್ರಮದ ರೂವಾರಿ ಮೇಳದ ಸ್ಥಾಪಕ ಎಚ್‌. ಶ್ರೀಧರ ಹಂದೆ ಮತ್ತು ಬಳಗ ಸ್ತುತ್ಯರ್ಹರು.

ಕೆ. ದಿನಮಣಿ ಶಾಸ್ತ್ರೀ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.