ಗುರುಪರಂಪರಾದಲ್ಲಿ ಭಕ್ತಿಭಾವ ಲಹರಿ


Team Udayavani, May 10, 2019, 5:50 AM IST

3

ಭಾರತೀಯ ಸಂಗೀತ ಶಿಕ್ಷಣಕ್ಕೆ ಪರಂಪರೆಯಲ್ಲಿ ಬಂದ ಪದ್ಧತಿಯೇ ಅತ್ಯುತ್ತಮವೆಂಬ ನಂಬಿಕೆಯಿಂದ ಕುಂದಾಪುರದಲ್ಲಿ ಸತೀಶ್‌ ಭಟ್‌ ಮತ್ತು ಪ್ರತಿಮಾ ಭಟ್‌ ಆರಂಭಿಸಿದ ಗುರುಪರಂಪರಾ ಸಂಗೀತ ಸಭಾದ ಆಶ್ರಯದಲ್ಲಿ ನಡೆದ ಒಂದು ದಿನದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಾಗಾರದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಶಾಸ್ತ್ರದ ಅಗತ್ಯ ಮತ್ತು ಬಳಕೆ, ಜೋಡ್‌ ರಾಗಗಳ ವೈಶಿಷ್ಟ್ಯ ಮತ್ತು ಪ್ರಯೋಗ ಹಾಗೂ ಸಂಗೀತದ ಕಲಿಕಾ ಕ್ರಮಗಳ ಕುರಿತು ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಪಂಡಿತ್‌ ಶ್ರೀಪಾದ ಹೆಗಡೆ, ಕಂಪ್ಲಿ ಅವರು ಭಕ್ತಿ-ಭಾವ ಲಹರಿ ಎಂಬ ಗಾಯನ ಕಾರ್ಯಕ್ರಮವನ್ನೂ ನಡೆಸಿ ಕೊಟ್ಟರು.

ಮಧುರ ಕಂಠದ ಹೆಗಡೆಯವರು ಕಾರ್ಯಕ್ರಮದ ಶೀರ್ಷಿಕೆಗೆ ತಕ್ಕಂತೆ ಭಾವಪೂರ್ಣ ಸಾಹಿತ್ಯವುಳ್ಳ ಹಾಡುಗಳನ್ನು ಲಘು ಧಾಟಿಯಲ್ಲಿ ಶುದ್ಧ ಶಾಸ್ತ್ರೀಯ ರಾಗಗಳನ್ನು ಬಳಸಿ ಹಾಡಿದರು. ಸಾಮಾನ್ಯವಾಗಿ ಭಾವಗೀತೆಗಳಲ್ಲಿ ಸಾಹಿತ್ಯ ಮತ್ತು ಅದು ಹೊಮ್ಮಿಸುವ ಭಾವಕ್ಕಷ್ಟೇ ಪ್ರಾಮುಖ್ಯವಿರುವುದಾದರೂ ಸಾವಧಾನ ಗತಿಯ ಶಾಸ್ತ್ರೀಯ ರಾಗಗಳ ಮೂಲಕ ಹಾಡಿದಾಗ ಇನ್ನಷ್ಟು ಅರ್ಥಸಾಧ್ಯತೆಗಳನ್ನು ಹೇಗೆ ಅರಳಿಸಬಹುದು ಎನ್ನುವುದಕ್ಕೆ ಗಾಯನ ಸಾಕ್ಷಿಯಾಯಿತು.

ಆರಂಭದಲ್ಲಿ ಶ್ರೀಧರ ಹೆಗಡೆಯವರು ಪರಮಪುರುಷ ಹರಿ ಗೋವಿಂದ ಎಂಬ ಭಕ್ತಿಗೀತೆಯನ್ನು ಪಹಾಡಿ ರಾಗದಲ್ಲಿ ಹಾಡಿದರು. ಮುಂದೆ ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಳಿಯನ್ನು ಮಿಶ್ರ ಖಮಾಚ್‌ ರಾಗದಲ್ಲಿ, ಅದರೊಳಗಿನ ತಾತ್ವಿಕ ಚಿಂತನೆಯ ಹಲವು ಆಯಾಮಗಳು ಕಣ್ಣಿಗೆ ಕಟ್ಟುವಂತೆ ಎಳೆಎಳೆಯಾಗಿ ಬಿಡಿಸಿ ಹಾಡಿದರು. ಮಧುವಂತಿ ರಾಗದಲ್ಲಿ ಹಾಡಿದ ಕರ್ತಾ ಕೃಷ್ಣಯ್ನಾ ನೀ ಬಾರಯ್ನಾ ಎಂಬ ಭಕ್ತಿಗೀತೆಯಲ್ಲಿ ಹೊರಹೊಮ್ಮಿದ ಆರ್ತತೆ , ಮಧ್ಯಮಾದಿ ಸಾರಂಗದಲ್ಲಿ ಶ್ರೀರಂಗನಾಟದ ಪರಿಯಾ ಮೂಡಿಬಂದ ಪದಲಾಲಿತ್ಯ, ಭೈರವಿಯಲ್ಲಿ ರಾಮ ರಾಮ ರಾಮ ಸೀತಾರಾಮ ಎನ್ನಿರೋ ಎಂಬ ಹಾಡಿನಲ್ಲಿ ಮೂಡಿದ ಭಕ್ತಿಭಾವ ರಸಗಳು ಮನಮುಟ್ಟುವಂತಿದ್ದವು. ಮುರಿದು ಬಿದ್ದ ಕೊಳಲು ನಾನು ಪ್ರೀತಿಯ ಜೀವವ ಎದೆಯಲಿ ಬೆಳೆಸಿ ಮರೆಗೆ ಸರಿದೆಯೇನೋ ಎಂಬ ಭಾವಗೀತೆಗಳ ವಿಷಾದ ಧ್ವನಿ ಕರುಣ ರಸವನ್ನು ಉಕ್ಕಿಸುವಂತಿದ್ದವು. ಭೈರವಿ ರಾಗದ ಏರಿಳಿತ ಸಂಚಾರದಲ್ಲಿ ವರ್ಷಧಾರೆಯಂತೆ ಹರಿದು ಬಂದ ತರಾನಾದೊಂದಿಗೆ ಗಾಯಕರು ಕಾರ್ಯಕ್ರಮÊವನ್ನು ಕೊನೆಗೊಳಿಸಿದರು. ಭಾರವಿ ದೇರಾಜೆಯವರ ತಬಲಾ ಸಾಥ್‌ ಗಾಯನಕ್ಕೆ ಪೂರಕವಾಗಿತ್ತು. ಒಟ್ಟಿನಲ್ಲಿ ಒಂದು ಸುಮಧುರ ಸಂಗೀತ ಸಂಜೆಯನ್ನು ಸವಿದ ಸಾರ್ಥಕ ಭಾವವನ್ನು ಈ ಕಾರ್ಯಕ್ರಮ ಮೂಡಿಸಿತು.

ಡಾ| ಪಾರ್ವತಿ ಜಿ.ಐತಾಳ್‌

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.