ಗುರುಪರಂಪರಾದಲ್ಲಿ ಭಕ್ತಿಭಾವ ಲಹರಿ


Team Udayavani, May 10, 2019, 5:50 AM IST

3

ಭಾರತೀಯ ಸಂಗೀತ ಶಿಕ್ಷಣಕ್ಕೆ ಪರಂಪರೆಯಲ್ಲಿ ಬಂದ ಪದ್ಧತಿಯೇ ಅತ್ಯುತ್ತಮವೆಂಬ ನಂಬಿಕೆಯಿಂದ ಕುಂದಾಪುರದಲ್ಲಿ ಸತೀಶ್‌ ಭಟ್‌ ಮತ್ತು ಪ್ರತಿಮಾ ಭಟ್‌ ಆರಂಭಿಸಿದ ಗುರುಪರಂಪರಾ ಸಂಗೀತ ಸಭಾದ ಆಶ್ರಯದಲ್ಲಿ ನಡೆದ ಒಂದು ದಿನದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಾಗಾರದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಶಾಸ್ತ್ರದ ಅಗತ್ಯ ಮತ್ತು ಬಳಕೆ, ಜೋಡ್‌ ರಾಗಗಳ ವೈಶಿಷ್ಟ್ಯ ಮತ್ತು ಪ್ರಯೋಗ ಹಾಗೂ ಸಂಗೀತದ ಕಲಿಕಾ ಕ್ರಮಗಳ ಕುರಿತು ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಪಂಡಿತ್‌ ಶ್ರೀಪಾದ ಹೆಗಡೆ, ಕಂಪ್ಲಿ ಅವರು ಭಕ್ತಿ-ಭಾವ ಲಹರಿ ಎಂಬ ಗಾಯನ ಕಾರ್ಯಕ್ರಮವನ್ನೂ ನಡೆಸಿ ಕೊಟ್ಟರು.

ಮಧುರ ಕಂಠದ ಹೆಗಡೆಯವರು ಕಾರ್ಯಕ್ರಮದ ಶೀರ್ಷಿಕೆಗೆ ತಕ್ಕಂತೆ ಭಾವಪೂರ್ಣ ಸಾಹಿತ್ಯವುಳ್ಳ ಹಾಡುಗಳನ್ನು ಲಘು ಧಾಟಿಯಲ್ಲಿ ಶುದ್ಧ ಶಾಸ್ತ್ರೀಯ ರಾಗಗಳನ್ನು ಬಳಸಿ ಹಾಡಿದರು. ಸಾಮಾನ್ಯವಾಗಿ ಭಾವಗೀತೆಗಳಲ್ಲಿ ಸಾಹಿತ್ಯ ಮತ್ತು ಅದು ಹೊಮ್ಮಿಸುವ ಭಾವಕ್ಕಷ್ಟೇ ಪ್ರಾಮುಖ್ಯವಿರುವುದಾದರೂ ಸಾವಧಾನ ಗತಿಯ ಶಾಸ್ತ್ರೀಯ ರಾಗಗಳ ಮೂಲಕ ಹಾಡಿದಾಗ ಇನ್ನಷ್ಟು ಅರ್ಥಸಾಧ್ಯತೆಗಳನ್ನು ಹೇಗೆ ಅರಳಿಸಬಹುದು ಎನ್ನುವುದಕ್ಕೆ ಗಾಯನ ಸಾಕ್ಷಿಯಾಯಿತು.

ಆರಂಭದಲ್ಲಿ ಶ್ರೀಧರ ಹೆಗಡೆಯವರು ಪರಮಪುರುಷ ಹರಿ ಗೋವಿಂದ ಎಂಬ ಭಕ್ತಿಗೀತೆಯನ್ನು ಪಹಾಡಿ ರಾಗದಲ್ಲಿ ಹಾಡಿದರು. ಮುಂದೆ ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಳಿಯನ್ನು ಮಿಶ್ರ ಖಮಾಚ್‌ ರಾಗದಲ್ಲಿ, ಅದರೊಳಗಿನ ತಾತ್ವಿಕ ಚಿಂತನೆಯ ಹಲವು ಆಯಾಮಗಳು ಕಣ್ಣಿಗೆ ಕಟ್ಟುವಂತೆ ಎಳೆಎಳೆಯಾಗಿ ಬಿಡಿಸಿ ಹಾಡಿದರು. ಮಧುವಂತಿ ರಾಗದಲ್ಲಿ ಹಾಡಿದ ಕರ್ತಾ ಕೃಷ್ಣಯ್ನಾ ನೀ ಬಾರಯ್ನಾ ಎಂಬ ಭಕ್ತಿಗೀತೆಯಲ್ಲಿ ಹೊರಹೊಮ್ಮಿದ ಆರ್ತತೆ , ಮಧ್ಯಮಾದಿ ಸಾರಂಗದಲ್ಲಿ ಶ್ರೀರಂಗನಾಟದ ಪರಿಯಾ ಮೂಡಿಬಂದ ಪದಲಾಲಿತ್ಯ, ಭೈರವಿಯಲ್ಲಿ ರಾಮ ರಾಮ ರಾಮ ಸೀತಾರಾಮ ಎನ್ನಿರೋ ಎಂಬ ಹಾಡಿನಲ್ಲಿ ಮೂಡಿದ ಭಕ್ತಿಭಾವ ರಸಗಳು ಮನಮುಟ್ಟುವಂತಿದ್ದವು. ಮುರಿದು ಬಿದ್ದ ಕೊಳಲು ನಾನು ಪ್ರೀತಿಯ ಜೀವವ ಎದೆಯಲಿ ಬೆಳೆಸಿ ಮರೆಗೆ ಸರಿದೆಯೇನೋ ಎಂಬ ಭಾವಗೀತೆಗಳ ವಿಷಾದ ಧ್ವನಿ ಕರುಣ ರಸವನ್ನು ಉಕ್ಕಿಸುವಂತಿದ್ದವು. ಭೈರವಿ ರಾಗದ ಏರಿಳಿತ ಸಂಚಾರದಲ್ಲಿ ವರ್ಷಧಾರೆಯಂತೆ ಹರಿದು ಬಂದ ತರಾನಾದೊಂದಿಗೆ ಗಾಯಕರು ಕಾರ್ಯಕ್ರಮÊವನ್ನು ಕೊನೆಗೊಳಿಸಿದರು. ಭಾರವಿ ದೇರಾಜೆಯವರ ತಬಲಾ ಸಾಥ್‌ ಗಾಯನಕ್ಕೆ ಪೂರಕವಾಗಿತ್ತು. ಒಟ್ಟಿನಲ್ಲಿ ಒಂದು ಸುಮಧುರ ಸಂಗೀತ ಸಂಜೆಯನ್ನು ಸವಿದ ಸಾರ್ಥಕ ಭಾವವನ್ನು ಈ ಕಾರ್ಯಕ್ರಮ ಮೂಡಿಸಿತು.

ಡಾ| ಪಾರ್ವತಿ ಜಿ.ಐತಾಳ್‌

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.