ರವಿಕಿರಣ್ ಹಿಂದುಸ್ಥಾನಿ ಕಛೇರಿ
Team Udayavani, Nov 2, 2018, 6:00 AM IST
ಮಂಗಳೂರಿನ ರಾಮ ಮಂದಿರದಲ್ಲಿ ಇತ್ತೀಚೆಗೆ ಶ್ರೀ ರವಿಕಿರಣ್ ಮಣಿಪಾಲ ಇವರ ಹಿಂದುಸ್ಥಾನಿ ಗಾಯನ ಕಾರ್ಯಕ್ರಮ ನಡೆಯಿತು. ಬೆಳನಿಂದ ರಾತ್ರಿಯ ತನಕ ನಡೆದ ಕಛೇರಿಯಲ್ಲಿ ಮೊದಲಿಗೆ ಭೈರಾಗಿ ಭೈರವ್ ರಾಗದಲ್ಲಿ ವಿಲಂಬಿತ್ ಏಕ್ ತಾಳ್ , ಮಧ್ಯ ಲಯ ಏಕ್ ತಾಳ್ ಹಾಗೂ ದೃತ್ ತೀನ್ ತಾಳದ ಬಂಧಿಶ್ಗಳನ್ನು ಹಾಡಿ ಎರಡನೆಯ ರಾಗ ಕೋಮಲ್ ರಿಷಬ್ ಅಸಾವರಿ ಹಾಡುವ ಮೊದಲು ಬಸಂತ್ ಮುಖಾರಿಯತೇರೊ ಮರಮ ನ ಪಾಯೋರೆ ಜೋಗೀ ಎಂಬ ಠುಮ್ರಿ ಅಂಗದ ಒಂದು ಭಜನ್ ಪ್ರಸ್ತುತ ಪಡಿಸಿದರು.
ಕೋಮಲ್ ರಿಷಬ್ ಅಸಾವರಿಯಲ್ಲಿ ವಿಲಂಬಿತ್ ಝೂಮ್ರಾದ ಹಾಗೂ ದೃತ್ ತೀನ್ ತಾಳದ ರಚನೆಗಳನ್ನು ಪ್ರಸ್ತುತ ಪಡಿಸಿದರು. ಭೈರವಿ ಭಜನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಂವಾದಿನಿಯಲ್ಲಿ ಮುಂಬಯಿಯ ಪಂಡಿತ್ ಸುಧೀರ್ ನಾಯಕ್ ಸಾಥ್ ನೀಡಿದರು ಭಾರವಿ ದೇರಾಜೆ ಸುರತ್ಕಲ್ ತಬಲಾ ಸಾಥ್ ನೀಡಿದರು. ಸತೀಶ್ ಕಾಮತ್ ಮಂಗಳೂರು ತಂಬೂರ ಹಾಗೂ ಮಂಜೀರದಲ್ಲಿ ಸಹಕರಿಸಿದರೆ ಚೈತನ್ಯ ಜಿ. ಗಾಯನ ಸಾಂಗತ್ಯ ನೀಡಿದರು. ಕಛೇರಿ ಸಂಗೀತ ರಸಿಕರ ಮನಸೂರೆಗೊಂಡಿತು.
ಕಲಾಪ್ರಿಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ