ಸನ್ಯಾಸಿಮಠ ಯಕ್ಷ ತರಬೇತಿ ಕೇಂದ್ರಕ್ಕೆ ಬೆಳ್ಳಿ ಹಬ್ಬದ ಸಡಗರ


Team Udayavani, Apr 14, 2017, 3:50 AM IST

14-KALA-2.jpg

ಉಡುಪಿ ಜಿಲ್ಲೆಯ ಬಡಾನಿಡಿಯೂರು ಎಂಬ ಪುಟ್ಟ ಊರಿನಲ್ಲಿ ಕಳೆದ 25 ವರ್ಷಗಳಿಂದ ಯಕ್ಷಗಾನ ಸಂಬಂಧಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಮಕ್ಕಳ ಯಕ್ಷಗಾನ ಕೇಂದ್ರ, ಸನ್ಯಾಸಿಮಠ ಇದರ ರಜತೋತ್ಸವ ಸಮಾರಂಭ ಎ. 15 ಮತ್ತು 16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಗಣ್ಯರ ಉಪಸ್ಥಿತಿಯ ಸಭಾ ಕಾರ್ಯಕ್ರಮದ ಬಳಿಕ ವಿವಿಧ ಬಾಲಕರ ತಂಡಗಳಿಂದ ಎರಡು ದಿನ ಮಕ್ಕಳ ಯಕ್ಷಗಾನ ಸ್ಪರ್ಧೆ ಹಮ್ಮಿಕೊಂಡಿದ್ದು ಯಶಸ್ವಿ ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಎರಡೂ ದಿನ ಯಕ್ಷಗಾನದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸಮ್ಮಾನ, ಹವ್ಯಾಸಿ ಯಕ್ಷಗಾನ ಪ್ರದರ್ಶನ ನೆರವೇರಲಿದೆ. ಮೂರನೇ ದಿನ ಸಮಾರೋಪ ಸಮಾರಂಭ, ಬಹುಮಾನ ವಿತರಣೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಯಕ್ಷಗಾನ ಕಲೆ ಅವನತಿಯತ್ತ ಸಾಗುತ್ತಿದೆ ಎಂಬ ಕಾಲಘಟ್ಟದಲ್ಲಿ ಎಳೆಯ ಮಕ್ಕಳಲ್ಲಿ ಕಲೆಯ ಬೀಜ ಬಿತ್ತಿದರೆ ಹೆಮ್ಮರವಾಗುತ್ತದೆ ಎಂಬ ಬಡಾನಿಡಿಯೂರು ಕೇಶವ ರಾವ್‌ ಅವರ ಆಶಯಕ್ಕೆ ಸನ್ಯಾಸಿ ಮಠದ ಮಂಡಳಿ ಸಮ್ಮತಿ ನೀಡಿತು. ದೇವಸ್ಥಾನದ ಸ್ಥಳಾವಕಾಶ ಬಿಟ್ಟರೆ ಇತರ ಯಾವುದೇ ಸಹಕಾರ ಪಡೆಯದೆ ಸ್ವಯಂ ಕೇಶವ ರಾಯರೇ ತನ್ನ ಗುರು ತೋನ್ಸೆ ಜಯಂತ ಕುಮಾರರ ಸಹಕಾರದೊಂದಿಗೆ ಶ್ರಮಿಸಿದುದರ ಫ‌ಲವಾಗಿ 1991ರ ಫೆಬ್ರವರಿ 17ರಂದು ಸನ್ಯಾಸಿಮಠದ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಾನದಲ್ಲಿ ಅಂದಿನ ಎಸ್‌.ಕೆ.ಎಫ್. ಸಂಸ್ಥೆಯ ಛೇರ್‌ಮನ್‌ ಜೆ.ಎನ್‌.ಮಲ್ಯರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. 2010ರಲ್ಲಿ ವಿಂಶತಿಯನ್ನು ಆಚರಿಸಿದ ಸಂಸ್ಥೆ ಇಂದು ರಜತೋತ್ಸವವನ್ನು ಆಚರಿಸುತ್ತಿದೆ. ಗುರುಗಳ ಮಾರ್ಗದರ್ಶನದಲ್ಲಿ ಇಲ್ಲಿ ಯಕ್ಷಗಾನ ಕಲಿತ ಅನೇಕರು ಇಂದು ವೃತ್ತಿ ಕಲಾವಿದರಾಗಿ ಬೇಡಿಕೆಯ ಹವ್ಯಾಸಿ ಕಲಾವಿದರಾಗಿ ರೂಪುಗೊಂಡಿದ್ದಾರೆ.

 ಈ ಸಂಸ್ಥೆಯಲ್ಲಿ ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸ್ವೀಕರಿಸುವುದಿಲ್ಲ. ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಕ್ರಮವೂ ಇಲ್ಲಿಲ್ಲ. ದೇವಸ್ಥಾನದಿಂದ ಸಣ್ಣ ಮೊತ್ತದ ಸಹಕಾರದೊಂದಿಗೆ ವಾರದ ಎರಡು ರಜಾದಿನದಂದು ತರಗತಿ ನಡಸಲಾಗುತ್ತದೆ. ನವರಾತ್ರಿ ಹಾಗೂ ಬೇಸಗೆ ರಜಾ ದಿನದಲ್ಲಿ ದೂರದ ಊರಿನಿಂದಲೂ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದು, ಕೇಶವ ರಾಯರ ಮನೆಯೇ ಅವರಿಗೆ ಆಶ್ರಯ ತಾಣ. ಈಗ ಶಿಬಿರ 15 ದಿನಗಳಿಗೆ ಸೀಮಿತಗೊಂಡಿದ್ದು ಬೆಳಗಿನ ಹೊತ್ತು ಮಾತ್ರ ತರಗತಿ ನಡೆಸಲಾಗುತ್ತದೆ.

ತರಗತಿ ನಡೆಯುವಾಗ ಪ್ರತಿದಿನ ರಾಮಾಯಣ ಮಹಾಭಾರತಗಳ ಪರಿಚಯವನ್ನು ಮಾಡಲಾಗುತ್ತದೆ. ನೀತಿ ಪಾಠಗಳೂ ನಡೆಯುತ್ತವೆ. ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ವಿದ್ಯಾರ್ಥಿಗಳ ತಂದೆತಾಯಂದಿರನ್ನು ಕರೆಸಿ ಮಕ್ಕಳಿಂದ ಅವರ ಪಾದಪೂಜೆ ಮಾಡಿಸುವುದು ಇಲ್ಲಿನ ವಿಶೇಷತೆ. ಅದನ್ನು ನಿರಂತರ ಮನೆಯಲ್ಲಿ ಮಾಡಿಸುವಂತೆ ಬೋಧಿಸಲಾಗುತ್ತದೆ. ಯಕ್ಷಗಾನವಲ್ಲದೆ ಶಾಲಾ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿರುವಂತೆ ಗಮನಿಸಲಾಗುತ್ತದೆ. ಯಕ್ಷಗಾನದಿಂದ ಬೌದ್ಧಿಕ ವಿಕಾಸವಾಗುತ್ತದೆ ಎಂದು ಮನದಟ್ಟು ಮಾಡಿಸಿ ವಿದ್ಯಾರ್ಥಿ ಹಾಗೂ ಪಾಲಕರಲ್ಲಿ ಈ ಕಲೆಯ ಮೇಲೆ ಇರುವ ಕೀಳರಿಮೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಅಂಗನವಾಡಿಯ ಮಕ್ಕಳಿಂದಲೂ ಪ್ರದರ್ಶನವೇರ್ಪಡಿಸಿದ ಹೆಗ್ಗಳಿಕೆ ಸಂಸ್ಥೆಗಿದೆ.

ರಜತ ಮಹೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಆಯ್ದ ಐದು ಬಾಲ ತಂಡಗಳನ್ನು ಕರೆಸಿ ನುರಿತ ಮೂವರು ಅನುಭವಿ ತೀರ್ಪುದಾರರ ಸಮ್ಮುಖದಲ್ಲಿ ಯಕ್ಷಗಾನ ಸ್ಪರ್ಧೆ, ಯಕ್ಷಗಾನದ ಉಳಿವಿಗಾಗಿ ಶ್ರಮಿಸುತ್ತಿರುವ ಹನ್ನೆರಡು ಮಂದಿ ಹಿರಿಯರಿಗೆ ಸಮ್ಮಾನ, ಬಾಲಕರಿಂದ ಸೀತಾವಿಯೋಗ-ಲವಕುಶ ಯಕ್ಷಗಾನ ಪ್ರದರ್ಶನ, ಯಕ್ಷಗಾನ ನುರಿತ ಹಿರಿಯ ಕಲಾವಿದರಿಂದ ಚಕ್ರಚಂಡಿಕಾ ಎಂಬ ಯಕ್ಷಗಾನ ಏರ್ಪಡಿಸಲಾಗಿದೆ. ಸಂಸ್ಥೆಯ ಯಶಸ್ಸಿಗೆ ಶ್ರೀ ದುರ್ಗಾಪ್ರಮೇಶ್ವರಿ ದೇವಿಯ ಅನುಗ್ರಹ, ಆಡಳಿತ ಮಂಡಳಿ, ಊರವರು ಮತ್ತು ಮಕ್ಕಳ ಹೆತ್ತವರ ಪೂರ್ಣ ಸಹಕಾರವೂ ಅಪಾರ. 

ಪ್ರೊ| ಎಸ್‌.ವಿ. ಉದಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

3-hunsur

Hunsur: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು

Screenshot (2)

Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್‌. ರೈ

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.