ನೃತ್ಯಾಂತರಂಗದಲ್ಲಿ ಭರವಸೆ ಮೂಡಿಸಿದ ಸೌಜನ್ಯಾ


Team Udayavani, May 10, 2019, 5:50 AM IST

10

ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿ(ರಿ.) ಪುತ್ತೂರಿನಲ್ಲಿ ಆಯೋಜಿಸುವ ನೃತ್ಯಾಂತರಂಗದ 63ನೇ ಸರಣಿಯು ಇತ್ತೀಚೆಗೆ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ವಿ| ಸೌಜನ್ಯಾ ವಿ. ಪಡ್ವಟ್ನಾಯರವರ ಏಕವ್ಯಕ್ತಿ ಪ್ರದರ್ಶನದೊಂದಿಗೆ ಸಂಪನ್ನಗೊಂಡಿತು.

ಮಧುರೈ ಮುರಳೀಧರನ್‌ ವಿರಚಿತ ಷಣ್ಮುಖಪ್ರಿಯರಾಗದ ಪುಷ್ಪಾಂಜಲಿಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ತಾಯಿ ಪಾರ್ವತಿ ಹಾಗೂ ಬಾಲಗಣಪನ ವಾತ್ಸಲ್ಯಪೂರಿತ ಶ್ಲೋಕ ಅಗಜಾನನ ಪದ್ಮಾರ್ಕಂ ಮನದಲ್ಲಿ ನೆಲೆಯೂರಿತು. ನಂತರ ನರ್ತಿಸಿದ ನರಸಿಂಹ ಕೌತುವ (ರಾಗಮಾಲಿಕೆ, ಖಂಡಛಾಪುತಾಳ) ನರ್ತಕಿಯ ನರ್ತನಾ-ಗಾಂಭೀರ್ಯವನ್ನು ಎತ್ತಿಹಿಡಿಯಿತು. ಕೌತುವದಲ್ಲಿ ಅಭಿನಯಕ್ಕೆ ವಿಶೇಷ ಪ್ರಾಧಾನ್ಯತೆ ಇಲ್ಲದಿದ್ದರೂ ಹಾಡು-ಶೊಲ್ಕಟ್ಟು-ಸಾಹಿತ್ಯ ಒಂದಕ್ಕೊಂದು ಉತ್ತಮವಾಗಿ ಬೆರೆತು ಕ್ಲಿಷ್ಟಕರವಾದ ಮುಕ್ತಾಯದೊಂದಿಗೆ ನರಸಿಂಹನನ್ನು ವರ್ಣಿಸುತ್ತಾ, ಹಿಮ್ಮೇಳ ಹಾಗೂ ಕಲಾವಿದೆಯ ಹೆಜ್ಜೆಗಳ ಸಮ್ಮೇಳ ಸೆಳೆಯಿತು.

ನಂತರದ ಪ್ರಧಾನ ಭಾಗ, ಕಲಾವಿದೆಯ ಕಲಾಸಾಮರ್ಥ್ಯವನ್ನು ಸೂಕ್ಷ್ಮವಾಗಿ ಎಳೆಎಳೆಯಾಗಿ ಪ್ರಸ್ತುತಪಡಿಸುವ ಪದವರ್ಣವು ಲಾಲಿತ್ಯಪೂರ್ಣ ರಾಗ ವಾಚಸ್ಪತಿಯಲ್ಲಿತ್ತು. ಇದರಲ್ಲಿ ನಾಯಕಿಯು ಸಖೀಗೆ ತನ್ನ ಸ್ವಾಮಿಯಾದ ವೇಲಾಯುಧಧಾರಿ ಸುಬ್ರಹ್ಮಣ್ಯನನ್ನು ಕರೆತರಲು ಹೇಳುವ ಸನ್ನಿವೇಶ, ಮಾವಿನ ಮರದ ನೆರಳಿನಲ್ಲಿ ಕಾಯುತ್ತಿರವ ವಿರಹಿಣಿ, ನಯನ ಮನೋಹರವಾದ ನವಿಲನ್ನೇರಿ ಬರುವ ಆರುಮುಖ, ಹನ್ನೆರಡು ಕಂಗಳು ಹಾಗೂ ಕರಗಳಿಂದ ಸುಶೋಭಿತ ಸುಬ್ರಹ್ಮಣ್ಯನಿಗಾಗಿ ಹಂಬಲಿಸುವ ವಿರಹೋತ್ಕಂಠಿತ ನಾಯಕಿ ಭಾವವನ್ನು ಸೊಗಸಾಗಿ ಅನಾವರಣಗೊಳಿಸಿದರು.

ನೈಜ ಅಭಿನಯಕ್ಕೆ ಪೂರಕವಾಗಿ ಕೊಳಲಿನಲ್ಲಿ ನಿಜವಾದ ಕೋಗಿಲೆಯ ಧ್ವನಿಯೇ ನುಡಿಸಿದ್ದು ಪ್ರಶಂಸನೀಯ. ನಾಯಕಿಯ ಪರಿತಪಿಸುವಿಕೆ, ಶೃಂಗಾರ, ವಿರಹವನ್ನು ಹಾಗೂ ಕ್ಲಿಷ್ಟಕರವಾದ ಜತಿಗಳನ್ನು ಸುಲಲಿತವಾಗಿ ಪ್ರಸ್ತುತಪಡಿಸಿದ ಸೌಜನ್ಯಾ ಮುಂದೆ ಸಾಕೋ ನಿನ್ನ ಸ್ನೇಹ ಜಾವಳಿಯಲ್ಲಿ ನಾಯಕಿಯಾಗಿ ತನ್ನ ಅಭಿನಯ ಸಾಮರ್ಥ್ಯವನ್ನು ಇನ್ನೂ ಉತ್ತಮವಾಗಿ ಉಣಬಡಿಸಿದರು. ಇದರಲ್ಲಿ ಪ್ರಿಯಕರನನ್ನು ನೇರವಾಗಿ ಖಂಡಿಸದೆ, ವ್ಯಂಗ್ಯದ ಮಾತುಗಳಿಂದ ದೂರವಿಡುವುದೇ ವಿಶೇಷ. ಮುಂದೆ ಯಮನ್‌ಕಲ್ಯಾಣಿರಾಗ ಆದಿತಾಳದ ತಿಲ್ಲಾನದಲ್ಲಿ ಶ್ರೀಕೃಷ್ಣನ ಭಕ್ತಿಯು ರಾರಾಜಿಸಿತು. ತಿಲ್ಲಾನದಲ್ಲಿ ಸುಂದರವಾದ ಮೈಅಡವುಗಳು ಹಾಗೂ ಕ್ಲಿಷ್ಟಕರವಾದ ಭಂಗಿಗಳು, ತೀರ್ಮಾನಗಳು ಅದ್ಭುತವಾಗಿ ಮೂಡಿಬಂತು. ಹಿಮ್ಮೇಳದಲ್ಲಿ ಗುರು ವಿ|ದೀಪಕ್‌ ಕುಮಾರ್‌ ನಟುವಾಂಗದಲ್ಲಿ ಸೂತ್ರದಾರರಾಗಿದ್ದರೆ, ಹಾಡುಗಾರಿಕೆಯಲ್ಲಿ ವಿ| ಪ್ರೀತಿಕಲಾ, ವಿ| ರಾಜನ್‌ ಪಯ್ಯನ್ನೂರು ಮೃದಂಗವಾದನದಲ್ಲಿ, ವಿದ್ವಾನ್‌ ರಾಜಗೋಪಾಲ್‌ ಕಾಂಞಂಗಾಡ್‌ ಕೊಳಲುವಾದನದಲ್ಲಿ ಉತ್ತಮ ನಿರ್ವಹಣೆ ತೋರಿಸಿದರು.

ಸುಮಂಗಲಾ ಗಿರೀಶ್‌ ಸುಬ್ರಹ್ಮಣ್ಯ

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.