ಶ್ರಾವಣ ಸಂಗೀತಧಾರೆಯಲ್ಲಿ ಮೂರು ಕಛೇರಿ 


Team Udayavani, Nov 2, 2018, 6:00 AM IST

s-10.jpg

ರಜತೋತ್ಸವ ಸಂಭ್ರಮದಲ್ಲಿರುವ ಸಂಗೀತ ಪರಿಷತ್‌ ಮಂಗಳೂರು ಮತ್ತು ಭಾರತೀಯ ವಿದ್ಯಾಭವನ ಮಂಗಳೂರು ಇದರ ಸಹಯೋಗದಲ್ಲಿ ಆಯೋಜಿಸಿದ ಶ್ರಾವಣ ಸಂಗೀತೋತ್ಸವದಲ್ಲಿ ಮೂರು ಕಛೇರಿಗಳನ್ನು ಏರ್ಪಡಿಸಲಾಗಿತ್ತು. 

ಮೊದಲನೆಯದಾಗಿ ಅರ್ಚನಾ ಕೋವಿಲಾಡಿಯವರು ಬೇಗಡೆ ವರ್ಣದೊಂದಿಗೆ ಕಛೇರಿಯನ್ನು ಆರಂಭಿಸಿ, ಮೃದು ಹಾಗೂ ಮಧುರವಾದ ಶಾರೀರದಿಂದ ಶ್ರೋತೃಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಚಂದ್ರಜ್ಯೋತಿ ರಾಗದ ಕಿರು ಆಲಾಪನೆಯೊಂದಿಗೆ ಕಛೇರಿಯನ್ನು ಮುಂದುವರಿಸಿದ ಅರ್ಚನಾರವರು ತ್ಯಾಗರಾಜರ ಬಾಗಾಯನಯ್ಯ ಕೃತಿಯನ್ನು ಹಾಡಿದರು. ನಂತರ ಕಮಾಚ್‌ರಾಗದಲ್ಲಿ ಮುತ್ತುಸ್ವಾಮಿ ದೀಕ್ಷಿತರ ಸಂತಾನಗೋಪಾಲಕೃಷ್ಣಂ ಉಪಾಸ್ಮಹೇ ಕೃತಿಯನ್ನು ಉತ್ತಮ ನೆರವಲ್‌ ಹಾಗೂ ಸ್ವರಪ್ರಸ್ತಾರದೊಂದಿಗೆ ಪ್ರಸ್ತುತಪಡಿಸಿದರು. ತ್ಯಾಗರಾಜರ ಪಂತುವರಾಳಿರಾಗದ ಸುಂದರತರ ದೇಹಂ ವಂದೇಹಂ ರಾಮಂ ಕೃತಿಯನ್ನು ಕ್ಷಿಪ್ರಗತಿಯಲ್ಲಿ ಪ್ರಸ್ತುತಪಡಿಸಿ, ತೋಡಿರಾಗದ ವಿಸ್ತಾರವಾದ ಆಲಾಪನೆಯೊಂದಿಗೆ ತ್ಯಾಗರಾಜರ ಕದ್ದನುವಾರಿಕಿ ಕೃತಿಯನ್ನು ಉತ್ತಮವಾದ ನೆರವಲ್‌ ಹಾಗೂ ಸ್ವರಪ್ರಸ್ತಾರದೊಂದಿಗೆ ಸುಂದರವಾಗಿ ಹಾಡಿದರು. ರಾಗ ನಳಿನಕಾಂತಿಯಲ್ಲಿ ರಾಗಂ ತಾನಂ ಪಲ್ಲವಿಯನ್ನು ಕ್ಸಿಪ್ರವಾಗಿ ಹಾಗೂ ಮನೋಜ್ಞವಾಗಿ ಚಿತ್ರಿಸಿದರು. 

ಪುರಂದರದಾಸರ ಏಕೆ ಕಡೆಗಣ್ಣಿಂದ ನೋಡುವೆಯನ್ನು ಹೃದಯಸ್ಪರ್ಶಿಯಾದ ಶುಭಪಂತುವರಾಳಿಯಲ್ಲಿ ನಿರೂಪಿಸಿದ ಅರ್ಚನಾ ಸಿಂಧುಭೈರವಿಯ ಭವಾನಿ ಭಜನೆಯೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ಪಿಟೀಲು ಪಕ್ಕವಾದ್ಯದಲ್ಲಿ ಅಚ್ಯುತ ರಾವ್‌, ಮೃದಂಗದಲ್ಲಿ ಎ.ಎಸ್‌.ಎನ್‌. ಸ್ವಾಮಿ ಹಾಗೂ ಮೋರ್ಸಿಂಗನಲ್ಲಿ ಚಿದಾನಂದ ಸಾಥ್‌ ನೀಡಿದರು. 

ಎರಡನೆಯ ಕಛೇರಿಯಲ್ಲಿ ಅಭಿರಾಮ್‌ ಭೋಡೆಯವರ ಗಾಯನವಿತ್ತು.ಸಾವೇರಿ ರಾಗದ ಕೃತಿಯೊಂದಿಗೆ ಕಛೇರಿ ಆರಂಭಿಸಿ, ಆರಭಿರಾಗದ ತ್ರಿಪುರ ಸುಂದರಿ ಕೃತಿ ಹಾಗೂ ವಾಗಧೀಶ್ವರಿಯ ಆಲಾಪನೆಯೊಂದಿಗೆ ತ್ಯಾಗರಾಜರ ಪರಮಾತುಡು ಕೃತಿಯನ್ನು ಪ್ರಸ್ತುತಪಡಿಸಿದರು. ಸ್ವಾತಿ ತಿರುನಾಳ್‌ರವರ ವರಾಳಿರಾಗದ ಕಾವಾವಾ ಕೃತಿಯ ನಂತರ ಕಛೇರಿಯ ಮುಖ್ಯರಾಗವಾಗಿ ತೋಡಿಯನ್ನು ಆರಿಸಿಕೊಂಡು, ಕಮಲೇಶವಿಠ್ಠಲದಾಸರ ಬೇಹಾಗ್‌ ರಾಗದ ಕಂಡುಧನ್ಯನಾದೆನೊ ದೇವರನಾಮದೊಂದಿಗೆ ಕಛೇರಿ ಸಂಪನ್ನಗೊಳಿಸಿ ಶೋತೃಗಳ ಮೆಚ್ಚುಗೆಗೆ ಪಾತ್ರರಾದರು. ಅನಿರುದ್ಧ್ ಭಾರದ್ವಾಜ್‌ ಪಿಟೀಲಿನಲ್ಲಿ, ಅದಮ್ಯ ರಮಾನಂದ ಮೃದಂಗದಲ್ಲಿ ಹಾಗೂ ಶರತ್‌ ಕೌಶಿಕ್‌ ಘಟಂನಲ್ಲಿ ಉತ್ತಮ ಸಹಕರಿಸಿದರು. 

ಸಂಜೆಯ ಕಛೇರಿಯನ್ನು ಆದಿತ್ಯ ಮಾಧವನ್‌ರವರು ಕಲ್ಯಾಣಿರಾಗದ ವನಜಾಕ್ಷಿ ವರ್ಣದೊಂದಿಗೆ ಆರಂಭಿಸಿ, ಮಾಯಾಮಾಳವಗೌಳದ ತ್ಯಾಗರಾಜರ ಕೃತಿ ತುಳಸೀದಳಮುಲಚೇಯನ್ನು ಹಾಡಿ ನಂತರ ಕನ್ನಡ ರಾಗದ ಆಲಾಪನೆಯೊಂದಿಗೆ ಪುರಂದರದಾಸರ ದೇವರನಾಮ ಕಂಡೆಕಂಡೆ ಸ್ವಾಮಿಯ ಬೇಡಿಕೊಂಡೆಯನ್ನು ಹಾಡಿದರು. ನಂತರ ದ್ವಿಜಾವಂತಿಯಲ್ಲಿ ಮುತ್ತುಸ್ವಾಮಿ ದೀಕ್ಷಿತರ ಚೇತಃಶ್ರೀಬಾಲಕೃಷ್ಣ ಹಾಗೂ ತ್ಯಾಗರಾಜರ ಕಾಪಿನಾರಾಯಣಿ ರಾಗದ ಸರಸ ಸಾಮ ದಾನ ಭೇದ ದಂಡ ಚತುರ ಕೃತಿಗಳನ್ನು ನಿರೂಪಿಸಿದರು.

ಸಾವೇರಿ ರಾಗದ ತ್ಯಾಗರಾಜರ ಕೃತಿ ರಾಮಬಾಣದೊಂದಿಗೆ ಕಛೇರಿಯನ್ನು ಮುಂದುವರಿಸಿದ ಆದಿತ್ಯರವರು ನವರಸ ಕನ್ನಡ ರಾಗದ ದೀರ್ಘ‌ ಆಲಾಪನೆಯೊಂದಿಗೆ ಸ್ವಾತಿ ತಿರುನಾಳ್‌ ಮಹಾರಾಜರ ವಂದೇ ಸದಾ ಪದ್ಮನಾಭಂ ಕೃತಿಯನ್ನು ಉತ್ತಮ ನೆರವಲ್‌ ಹಾಗೂ ಸ್ವರ ಪ್ರಸ್ತಾರಗಳೊಂದಿಗೆ ಪ್ರಸ್ತುತಪಡಿಸಿದರು.ಖರಹರಪ್ರಿಯ ರಾಗದಲ್ಲಿ ರಾಗಂ ತಾನಂ ಪಲ್ಲವಿಯನ್ನು ಸೊಗಸಾಗಿ ನಿರ್ವಹಿಸಿ ಪಲ್ಲವಿಯಲ್ಲಿ ರಾಗಮಾಲಿಕೆಯ ಸೊಬಗನ್ನು ಉಣಬಡಿಸಿದರು.ರಾಗ ಬೇಹಾಗ್‌ನ್ನೇ ಮುಂದುವರಿಸಿ ಪರಿಪಾಲಯಮಾಂ ನಿರೂಪಿಸಿದ ಆದಿತ್ಯರವರು ಅಪರೂಪದ ಮಧುಮಾಲತಿ ರಾಗದಲ್ಲಿ ಪುರಂದರದಾಸರ ಬೃಂದಾವನದೊಳು ಆಡುವನ್ಯಾರೆ ದೇವರನಾಮದೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ಪಿಟೀಲಿನಲ್ಲಿ ವಿಠ್ಠಲ್‌ ರಂಗನ್‌, ಮೃದಂಗದಲ್ಲಿ ನಿಕ್ಷಿತ್‌ ಹಾಗೂ ಘಟಂನಲ್ಲಿ ಶರತ್‌ ಕೌಶಿಕ್‌ ಸಹಕರಿಸಿದರು. 

 ಬೇಲೂರು ಶ್ರೀಧರ್‌

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.