ಭರವಸೆಯ ಗಾಯಕ ವಿಶಾಲ್ ಗುಡೆ
Team Udayavani, May 10, 2019, 5:50 AM IST
ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ಆಶ್ರಯದಲ್ಲಿ ನಡೆದ ನಾದ ವಸಂತ ಸಂಗೀತೋತ್ಸವದಲ್ಲಿ ಕಿರಾಣಾ ಘರಾಣೆಯ ಪಂ. ಕೈವಲ್ಯ ಕುಮಾರ್ ಗುರವ್ರ ಶಿಷ್ಯರಾಗಿರುವ ವಿಶಾಲ್ ಮಹರ್ ಗುಡೆ, ಔರಂಗಾಬಾದ್ ಇವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಛೇರಿ ನಡೆಯಿತು. ರಾಗ ಮಧುವಂತಿಯಲ್ಲಿ ಕಛೇರಿಯನ್ನು ಪ್ರಾರಂಭಿಸಿದ ವಿಶಾಲ್ ಮಧುಬನಮೇ ಬಾಜತ ಮುರಲಿ ವಿಲಂಬಿತ ಏಕ್ ತಾಲ್ ಖ್ಯಾಲ್ ಪ್ರಸ್ತುತ ಪಡಿಸಿದರು. ಧೃತ್ ತೀನ್ ತಾಲ್ನಲ್ಲಿ ಸಾವರಿಯಾ ತುಮಬಿನ ಮೋಹೆ, ಧೃತ್ ಏಕ್ ತಾಲ್ನಲ್ಲಿ ನಂದಮೋರೆ ಲಾಲತುಮ ಬಂದಿಶ್ ಹಾಡಿ ಸುಮಧುರ ಧ್ವನಿ ಮತ್ತು ನಿರರ್ಗಳ ತಾನ್ಗಳ ಮೂಲಕ ಮನಗೆದ್ದರು. ಅಂತ್ಯದಲ್ಲಿ ಹಾಡಿದ ಮಾಲಕಂಸ ರಾಗದ ಮರಾಠಿ ಅಭಂಗ ಪ್ರಸ್ತುತಿಯಿಂದ ಲಘು ಸಂಗೀತದಲ್ಲೂ ಪರಿಣತಿಯನ್ನು ಪ್ರದರ್ಶಿಸಿದರು. ತಬಲಾದಲ್ಲಿ ಶ್ರೀಧರ್ ಮಾಂಡ್ರೆ, ಹಾರ್ಮೋನಿಯಂನಲ್ಲಿ ಅಮಿತ್ ಕುಮಾರ್, ತಾನ್ಪುರದಲ್ಲಿ ಪ್ರತಾಪ್ ಕುಮಾರ್ ಮತ್ತು ಆತ್ರೇಯ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ