Smoking: ಧೂಮಪಾನ ವರ್ಜಿಸಿ ಹುಳಿ ತೇಗಿಗೆ ಪರಿಹಾರ ಪಡೆಯಿರಿ


Team Udayavani, Jan 28, 2024, 3:07 PM IST

2-health

ಹೊಟ್ಟೆಯಲ್ಲಿ ಇರುವ ಆಮ್ಲೀಯ ಅಂಶವು ಪದೇಪದೆ ಅನ್ನನಾಳಕ್ಕೆ ಬರುವುದು ಮತ್ತು ಇದರಿಂದಾಗಿ ಉರಿಯೂತ ಉಂಟಾಗುವ ಅನಾರೋಗ್ಯ ಸ್ಥಿತಿಗೆ ಗ್ಯಾಸ್ಟ್ರೊಫೇಜಿಯಲ್‌ ರಿಫ್ಲಕ್ಸ್‌ ಡಿಸೀಸ್‌ (ಗೆರ್ಡ್‌) ಅಥವಾ ಹುಳಿ ತೇಗು ಬರುವ ಕಾಯಿಲೆ ಎಂದು ಹೆಸರು. ಪ್ರೌಢ ವಯಸ್ಕರಲ್ಲಿ ಕನಿಷ್ಠ ಶೇ. 20 ಮಂದಿ ಈ ತೊಂದರೆಗೆ ಈಡಾಗುತ್ತಾರೆ ಎನ್ನಲಾಗಿದೆ. ಎದೆಯುರಿ, ಬಾಯಿಯ ಹಿಂಭಾಗದಲ್ಲಿ ಕಹಿ/ ಹುಳಿ ರುಚಿ, ಆಹಾರದ ಅಂಶಗಳು/ ದ್ರವಾಂಶ ಹೊಟ್ಟೆಯಿಂದ ಬಾಯಿಗೆ ಮರಳುವುದು, ದೀರ್ಘ‌ಕಾಲೀನ ಕೆಮ್ಮು, ಧ್ವನಿ ಒಡಕಾಗುವುದು ಇತ್ಯಾದಿಗಳು ಇದರ ಲಕ್ಷಣಗಳಾಗಿವೆ. ಧೂಮಪಾನ ಮತ್ತು ಗೆರ್ಡ್‌ ಕಾಯಿಲೆಗಳು ಪರಸ್ಪರ ಸಂಬಂಧ ಹೊಂದಿರುವುದನ್ನು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.

ಜಠರ ಮತ್ತು ಅನ್ನನಾಳ (ಈಸೊಫೇಗಸ್‌) ಪರಸ್ಪರ ಸಂಧಿಸುವಲ್ಲಿ ಲೋವರ್‌ ಈಸೊಫೇಜಿಯಲ್‌ ಸ್ಪಿಂಕ್ಟರ್‌ (ಎಲ್‌ಇಎಸ್‌) ಎಂಬ ಸ್ನಾಯುಭಿತ್ತಿ ಇದೆ. ಅನ್ನನಾಳದಿಂದ ಆಹಾರವಸ್ತುಗಳು ಜಠರವನ್ನು ಪ್ರವೇಶಿಸುವಂತೆ ಆದರೆ ಜಠರದಿಂದ ಆಮ್ಲ ಮತ್ತು ಇತರ ಅಂಶಗಳು ಅನ್ನನಾಳವನ್ನು ಪ್ರವೇಶಿಸದಂತೆ ತಡೆಯುವ ಏಕಮುಖ ಪ್ರವೇಶದ್ವಾರವಾಗಿ ಈ ಎಲ್‌ಇಎಸ್‌ ಕೆಲಸ ಮಾಡುತ್ತದೆ. ಈ ಏಕಮುಖ ಪ್ರವೇಶದ್ವಾರ ವ್ಯವಸ್ಥೆಯಲ್ಲಿ ವೈಫ‌ಲ್ಯ ಗೆರ್ಡ್‌ ಉಂಟಾಗಲು ಪ್ರಧಾನ ಕಾರಣವಾಗಿರುತ್ತದೆ. ಜಠರದ ಆಮ್ಲವು ಇತರ ಅಂಶಗಳ ಜತೆಗೆ ಅನ್ನನಾಳಕ್ಕೆ ನುಗ್ಗುವುದರಿಂದ ಗೆರ್ಡ್‌ ಅಥವಾ ಹುಳಿತೇಗು ಕಾಣಿಸಿಕೊಳ್ಳುತ್ತದೆ.

ತಂಬಾಕಿನಲ್ಲಿ ಇರುವ ನಿಕೋಟಿನ್‌ ಮತ್ತು ಇತರ ಕೆಲವು ರಾಸಾಯನಿಕ ಅಂಶಗಳು ಅನ್ನನಾಳದ ಈ ಎಲ್‌ಇಎಸ್‌ ಪ್ರವೇಶದ್ವಾರ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಇದರಿಂದಾಗಿ ಎಲ್‌ಇಎಸ್‌ ದುರ್ಬಲವಾಗುತ್ತದೆ. ಇದರಿಂದಾಗಿ ಜಠರದ ಆಮ್ಲ ಮತ್ತು ಇತರ ಅಂಶಗಳು ಮರಳಿ ಅನ್ನನಾಳದೊಳಕ್ಕೆ ನುಗ್ಗುವುದರಿಂದ ಹುಳಿತೇಗು ಅಥವಾ ಎದೆಯುರಿ ಉಂಟಾಗುತ್ತದೆ. ಇದರ ಜತೆಗೆ ದೂಮಪಾನವು ಜಠರದಲ್ಲಿ ಆಮ್ಲೀಯತೆ ಹೆಚ್ಚುವುದಕ್ಕೂ ಕಾರಣವಾಗುತ್ತದೆ, ಇದು ಹುಳಿತೇಗು ಉಂಟಾಗುವುದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಅಲ್ಲದೆ ಧೂಮಪಾನವು ಜೊಲ್ಲು ಉತ್ಪಾದನೆ ಕಡಿಮೆಯಾಗಲು ಕಾರಣವಾಗಬಹುದಾಗಿದ್ದು, ಇದು ಅನ್ನನಾಳದ ಭಿತ್ತಿಗೆ ಹಾನಿ ಉಂಟು ಮಾಡುತ್ತದೆ. ಇವೆಲ್ಲವೂ ಒಟ್ಟಾಗಿ ಗೆರ್ಡ್‌ ಉಲ್ಬಣಗೊಳ್ಳುವುದಕ್ಕೆ ಪೂರಕ ಸನ್ನಿವೇಶವನ್ನು ನಿರ್ಮಿಸಿಕೊಡುತ್ತವೆ. ಧೂಮಪಾನವು ಕಾಫಿ/ಚಹಾ/ ಮದ್ಯಪಾನದ ಜತೆಗೂ ಸಂಬಂಧ ಹೊಂದಿದ್ದು, ಇದು ಕೂಡ ಗೆರ್ಡ್‌ ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತವೆ.

ಹುಳಿತೇಗಿನಿಂದಾಗಿ ಅನ್ನನಾಳವು ಪದೇಪದೆ ಜಠರದ ಆಮ್ಲಕ್ಕೆ ಒಡ್ಡಿಕೊಂಡಾಗ ಉರಿಯೂತ ಮತ್ತು ಕಾಲಕ್ರಮೇಣ ಅನ್ನನಾಳದ ಒಳಪದರಕ್ಕೆ ಹಾನಿಯನ್ನು ಉಂಟು ಮಾಡಬಹುದು.

ಇದರಿಂದಾಗಿ ಅನ್ನನಾಳದಲ್ಲಿ ಹುಣ್ಣುಗಳು, ಅನ್ನನಾಳ ಸಂಕುಚನಗೊಳ್ಳುವುದು ಹಾಗೂ ಬೆರೆಟ್ಸ್‌ ಈಸೊಫೇಗಸ್‌ಗೆ ಕಾರಣವಾಗಬಹುದು.

ಧೂಮಪಾನವನ್ನು ತ್ಯಜಿಸಿ

ಧೂಮಪಾನವನ್ನು ತ್ಯಜಿಸುವುದರಿಂದ ಹುಳಿತೇಗು ಉಂಟಾಗುವುದು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ಲಕ್ಷಣಗಳು ಸಾಕಷ್ಟು ಕಡಿಮೆಯಾಗುತ್ತವೆ. ಅಲ್ಲದೆ ಧೂಮಪಾನವನ್ನು ತ್ಯಜಿಸುವುದರಿಂದ ಶ್ವಾಸಕೋಶ ಕ್ಯಾನ್ಸರ್‌, ಸಿಒಪಿಡಿ ಮತ್ತು ಹೃದ್ರೋಗಗಳಂತಹ ಇತರ ಅಪಾಯಗಳು ಕೂಡ ದೂರವಾಗುತ್ತವೆ. ಧೂಮಪಾನವನ್ನು ತ್ಯಜಿಸುವುದರ ಜತೆಗೆ ಮದ್ಯಪಾನ ವರ್ಜನೆ, ಕಾμ, ಚಾಕೊಲೇಟ್‌ ಮತ್ತಿತರ ಅನಾರೋಗ್ಯಕರ ಆಹಾರಾಭ್ಯಾಸಗಳನ್ನು ತ್ಯಜಿಸುವುದರ ಜತೆಗೆ ತೂಕ ಇಳಿಕೆಯಂತಹ ಆರೋಗ್ಯಯುತ ಜೀವನಶೈಲಿಗಳನ್ನು ರೂಢಿಸಿಕೊಳ್ಳುವುದರಿಂದ ಹುಳಿತೇಗಿನಿಂದ ಉಪಶಮನವನ್ನು ಪಡೆಯಬಹುದು.

-ಡಾ| ಅನುರಾಗ್‌ ಶೆಟ್ಟಿ,

ಮೆಡಿಕಲ್‌ ಗ್ಯಾಸ್ಟ್ರೊಎಂಟರಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಗ್ಯಾಸ್ಟ್ರೊಎಂಟರಾಲಜಿ ವಿಭಾಗ, ಕೆಎಂಸಿ, ಮಂಗಳೂರು)

 

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.