ಸುರ ಸಂಗೀತಧಾರೆ!
Team Udayavani, Jul 14, 2018, 10:45 AM IST
ಸುರಸಂಗೀತ ಮ್ಯೂಸಿಕ್ ಅಕಾಡೆಮಿಯು 2ನೇ ವಾರ್ಷಿಕ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಡಾ.ಬಿ.ವಿ.ಸತ್ಯನಾರಾಯಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ತಬಲಾವಾದಕ ಪಂಡಿತ್ ಸತೀಶ್ ಹಂಪಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಪಂಡಿತ್ ವಿಶ್ವೇಶ್ವರ ಭಟ್ ಮಿಗಿನಕಲ್ಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಂಡಿತ್ ಪರಮೇಶ್ವರ ಹೆಗಡೆ ಅವರಿಂದ ಗಾಯನ, ವಿದ್ವಾನ್ ಅನಂತ ಭಾಗವತ್ ಹಾಗೂ ವಿದ್ವಾನ್ ವಿಶ್ವೇಶ್ವರ ಭಟ್ರಿಂದ ಹಿಂದೂಸ್ಥಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ಬಂಧಿ ನಡೆಯಲಿದೆ. ಅಕಾಡೆಮಿಯ ಶಿಷ್ಯರು ಸಂಗೀತ ಸ್ಮರಣೆ
ನಡೆಸಿಕೊಡಲಿದ್ದಾರೆ.
ಎಲ್ಲಿ?: ಜಯರಾಮ ಸೇವಾಮಂಡಳಿ, ನಂ.492/ಎ,
1ನೇ ಮುಖ್ಯರಸ್ತೆ, ಜಯನಗರ 8ನೇ ಹಂತ
ಯಾವಾಗ?: ಜು.15, ಭಾನುವಾರ ಬೆಳಗ್ಗೆ 9