ಇತಿಹಾಸದ ಗೆರೆದಾಟಿ ಸಮಕಾಲೀನವಾದ ಗುಣಮುಖ


Team Udayavani, Mar 10, 2018, 2:40 PM IST

2-bb.jpg

ನಾಟಕಕಾರನ ಚಿತ್ರಕ ಜಗತ್ತು ಒಂದು ಚಿತ್ರ ಕಟ್ಟಿಕೊಡುತ್ತದೆ. ಆ ಚಿತ್ರದಲ್ಲಿ ಕದಲುವ ಬದುಕು ಇತಿಹಾಸದ್ದಾಗಿರಬಹುದು, ಅಥವಾ ವರ್ತಮಾನದ್ದಾಗಿರಬಹುದು. ಹಾಗೊಂದು ವೇಳೆ ಅದು ವರ್ತಮಾನದ ಹಸಿ ಚಿತ್ರಗಳೇ ಆಗಿದ್ದಲ್ಲಿ ಮುಂದಿನ ಪ್ರಯೋಗದ ಹೊತ್ತಿಗೆ ಆ ಹಿಂದಿನ ಪ್ರಯೋಗ ಹಳತಾಗಿರುತ್ತದೆ. ಆದರೆ, ಕೆಲವು ರಂಗಕೃತಿಗಳು ಇತಿಹಾಸದ ದಾಖಲಾತಿಗಳಿಂದ ಕಥನ ಆರಂಭಿಸಿದರೂ ಅದು ಸದಾ ಮಾರ್ಪಾಡಿಗೆ ಗುರಿಯಾಗುವ ವರ್ತಮಾನದ ಚಿತ್ರಗಳಿಗೆ ಪೂರಕವಾಗಿಯೇ ಇರುತ್ತದೆ. ಕೃತಿಯೊಂದರಲ್ಲಿ ರೂಪಕಗಳು ಹೀಗೆ ಅಡಕಗೊಂಡಿರುತ್ತವೆ. ವರ್ತಮಾನಕ್ಕೆ ತಮ್ಮನ್ನು ತಾವು ವಿಸ್ತರಿಸಿಕೊಳ್ಳುತ್ತಲೇ ಇರುತ್ತವೆ. ಈ ಎಲ್ಲವೂ ಕೃತಿಯಲ್ಲಿನ ಸಾಧ್ಯತೆಗಳ ಮಾತಾಯಿತು. ಹೀಗಿದ್ದರೂ ಇದೊಂದು ರೀತಿಯಲ್ಲಿ ನಾಟಕಕಾರನ ಚಿತ್ರಕ ಜಗತ್ತು ಇಲ್ಲಿಗೆ ಸ್ಥಗಿತವಾದಂತೆ ಎಂದರೂ ಸರಿ.

ಆದರೆ, ರಂಗನಿರ್ದೇಶಕನ, ಅದರಲ್ಲೂ ಸೃಜನಶೀಲ ರಂಗನಿರ್ದೇಶಕ- ನಾಟಕಕಾರನ ಚಿತ್ರಕ ನಿರ್ಮಿತಿಗಳನ್ನು ದಾಟಿ ಮುಂದೆ ನಡೆಯುತ್ತಾನೆ. ಇಡೀ ನಾಟಕ ಕಟ್ಟುವಲ್ಲಿ ಆತನ ದರ್ಶನ ಬೇರೊಂದು ಚಿತ್ರಕಟ್ಟಿಕೊಳ್ಳುತ್ತದೆ. ಆ ದರ್ಶನದಲ್ಲೇ ಆತನ  ಸ್ಪಂದನೆಯ ರೂಪಗಳು ಕಾಣಿಸುತ್ತಿರುತ್ತವೆ. ಇತಿಹಾಸಕ್ಕೇ ಸೀಮಿತವಾಗಿ ನಿರ್ದೇಶನದ ತಮ್ಮ ಹೆಣಿಗೆ ಆರಂಭಿಸಿದರೆ ಅಲ್ಲಿನ ಪಾತ್ರಗಳ ಮಾತಿಂದ ನೋಡುಗರು ವರ್ತಮಾನದ ಸುಳುಹುಗಳನ್ನು ಚಿತ್ರಿಸಿಕೊಳ್ಳಬೇಕಷ್ಟೆ. ಆದರೆ ನಿರ್ದೇಶಕ, ಕೃತಿಕಾರನ ಚೌಕಟ್ಟನ್ನು ತನ್ನ ಸೃಜನಶೀಲ ನೆಲೆಯಲ್ಲಿ ವಿಸ್ತರಿಸುವ ಕೆಲಸ ಮಾಡಿದರೆ ಅದಕ್ಕೆ ಒದಗುವ ಆಯಾಮವೇ ಬೇರೆ. ಅದು ದೃಶ್ಯ ಕಟ್ಟುವಲ್ಲಿನ ಸೃಜನಶೀಲತೆಗೆ ಸಂಬಂಧಿಸಿದ್ದು.

ನಗರದಲ್ಲಿ ನಡೆಯುತ್ತಿರುವ ಥಿಯೇಟರ್‌ ಒಲಿಂಪಿಕ್ಸ್‌ ರಂಗಪ್ರದರ್ಶನಗಳಲ್ಲಿ ಈಚೆಗೆ ಇಂಥ ಕೆಲಸ ಮೈಸೂರಿನ ಜನಸಂಸ್ಕೃತಿ ತಂಡ ಪ್ರದರ್ಶಿಸಿದ ಲಂಕೇಶರ ಗುಣಮುಖ ನಾಟಕದಲ್ಲಿ ಕಂಡಿತು. ರೋಗವನ್ನು ಲಂಕೇಶ್‌ ಈ ನಾಟಕದಲ್ಲಿ ರೂಪಕವಾಗಿ ಬಳಸಿರುವುದನ್ನು ನಿರ್ದೇಶಕರಾದ ಸಿ.ಬಸವಲಿಂಗಯ್ಯನವರು ತಮ್ಮ ಪರಿಕಲ್ಪನೆಯಲ್ಲಿ ಚಿತ್ರಿಸಿಕೊಂಡಿರುವ ರೀತಿ ಅನನ್ಯ. ಪಾತ್ರ ಐತಿಹಾಸಿಕವಾದದ್ದೆ; ಆದರೆ, ಪಾತ್ರಗಳು ತಮ್ಮ ದನಿ ತೆರೆಯಲಿಕ್ಕೆ ಕಟ್ಟಿರುವ ಆವರಣ ಮಾತ್ರ ಬೇರೆ. ಕೃತಿಕಾರರಿಗೆ ನಾದಿರ್‌ ಒಬ್ಬ ರೋಗಗ್ರಸ್ತನಾಗಿ ಕಂಡು ಅದರ ಮೂಸೆಯಿಂದ ಮಾತುಗಳನ್ನು ಹೊರಡಿಸಿದರೆ ಬಸವಲಿಂಗಯ್ಯನವರಿಗೆ ಇದು ಚಿತ್ರವಾಗಿ ಬೇರೆಯಾಗಿ ಕಂಡಿದೆ. ಅವರು ನಾದಿರ್‌ ಪಾತ್ರವನ್ನು ಐದು ಪಾತ್ರಗಳಾಗಿ ಒಡೆದಿರುವುದರ ಹಿಂದೊಂದು ದರ್ಶನವಿದೆ. ಅವರ ಪ್ರಕಾರ, ಮನುಷ್ಯನ ಐದು ಇಂದ್ರಿಯಗಳು ಕುಸಿದಾಗ ಒಬ್ಬ ನಾದಿರ್‌ ಹುಟ್ಟಿಕೊಳ್ಳುತ್ತಾನೆ. ಹಾಗಾಗಿ, ಅದನ್ನು ಸಂಕೇತವಾಗಿ ಕಾಣಿಸಿದ್ದರು. ಜೊತೆಗೆ ನಾದಿರ್‌ ನರಳುವುದರ ನಡುವೆ ಬೇರೆಬೇರೆ ಛಾಪುಗಳನ್ನು ನಿರ್ಮಿಸಿಕೊಂಡಿದ್ದರು. ಮಂದಗತಿಗೆ ಒಬ್ಬ ನಾದಿರ್‌; ತೀವ್ರ ಹಪಹಪಿಗೆ ಒಬ್ಬ ನಾದಿರ್‌, ವಿಕ್ಷಿಪ್ತಗೊಳ್ಳುವಾಗ ವåತ್ತೂಬ್ಬ ನಾದಿರ್‌. ಆ ನಾದಿರ್‌ನ ಉಸಿರುಕಟ್ಟಿರುವ ಜೀವನವನ್ನು ನಿರ್ದೇಶಕರು ಗಾಜಿನ ನಿರ್ವಾತದಲ್ಲಿ ಆತನನ್ನು ನಿಲ್ಲಿಸಿ ಸಂಭಾಷಣೆ ಹೇಳಿಸಿರುವುದು, ಆತನ ಸ್ಥಿತಿಯನ್ನು ಬಿಂಬಿಸುತ್ತಿತ್ತು. ಮಿಗಿಲಾಗಿ ಐತಿಹಾಸಿಕ ಪಾತ್ರಗಳ ಪೋಷಾಕುಗಳಿದ್ದರೂ ಆಸ್ಪತ್ರೆಯ ವಿನ್ಯಾಸ ಮಾತ್ರ ಇಂದಿನದ್ದೇ. ಬೆಡ್ಡುಗಳೂ ಇಂದಿನವೇ. ಅದರ ಮೇಲೆ ರೋಗಗ್ರಸ್ತ ನಾದಿರ್‌. ಇದು ಎರಡು ಕಾಲಘಟ್ಟಗಳನ್ನು ತುಂಬಾ ಸೂಚ್ಯವಾಗಿ ಬೆಸೆದು ನಾಟಕದ ಧ್ವನಿಯನ್ನು ಸಮರ್ಥವಾಗಿ ಹೇಳಿತು.

ಇಂಗದ ದಾಹದಿಂದ ನಾದಿರ್‌ ಹೇಗೆ ರೋಗಗ್ರಸ್ತನಾಗಿದ್ದಾನೆ ಮತ್ತು ರಕ್ತಪಿಪಾಸುವಾಗಿದ್ದಾನೆ ಎಂಬುದನ್ನು ನಾಟಕ ಕಟ್ಟಿಕೊಡುತ್ತದೆ. ತನ್ನ ಸುತ್ತಲಿನ ಒಳಹೊರಗುಗಳಲ್ಲಿನ ತಟವಟಗಳಿಗೆ ಹುಚ್ಚನಂತಾಗಿ ಕೆರಳುವ ನಾದಿರ್‌ ಸುಲಭಕ್ಕೆ ಗುಣಹೊಂದದ ವ್ಯಾಧಿಗೆ ತುತ್ತಾಗಿ ಮತ್ತಷ್ಟು ವ್ಯಗ್ರನಾಗುತ್ತಾನೆ. ರೋಗ ದೇಹಕ್ಕೆ ಸಂಬಂಧಿಸಿದ್ದಾಗಿರದೇ, ಅದು ಹೃದಯದಲ್ಲಿ ಹೆಪ್ಪುಗಟ್ಟಿರುವ ದಾಹ, ಕ್ರೌರ್ಯ ಮತ್ತು ರಕ್ತಪಿಪಾಸುವಾಗುವ ದಾರ್ಷ್ಟ್ಯ ಎಲ್ಲಕ್ಕೆ ಮದ್ದು ಸುಲಭದ್ದಲ್ಲ.

ಈ ಆಶಯ ಹೇಳಲಿಕ್ಕೆ ಮತ್ತು ಈ ರೂಪಕವನ್ನು ಗ್ರಹಿಸಲಿಕ್ಕೆ ಬಸವಲಿಂಗಯ್ಯನವರು ಒಂದು ಆಸ್ಪತ್ರೆಯ ರೂಪ ತಂದು ನಾದಿರ್‌ನ ನರಳಾಟ ಮತ್ತು ನೋವಿನ ಸ್ಥಿತಿ, ಭ್ರಾಮಕತೆ ಎಲ್ಲವನ್ನೂ ಇಂದಿನ ಸಂದರ್ಭಕ್ಕೆ ಜೋಡಿಸಿದ್ದದ್ದು ಪೂರಕವಾಗಿತ್ತು. ನಟನೆ, ರಂಗತಂತ್ರ, ರಂಗವಿವ್ಯಾಸ, ಬೆಳಕು ಎಲ್ಲವೂ ಉತ್ತಮ. ಕೃತಿಕಾರ ಮತ್ತು ನಿರ್ದೇಶಕರ ಆಶಯ ನೋಡುಗರಲ್ಲಿ ಬೇರೆ ಬೇರೆ ರೀತಿಯಲ್ಲಿ ವಿಸ್ತರಿಸಿದದ್ದು ನಾಟಕ ಪ್ರದರ್ಶನದ ನಂತರ ನಡೆದ ಪುಟ್ಟ ಸಂವಾದದಲ್ಲಿ ಸಾಬೀತಾಯಿತು. 

ಎನ್‌.ಸಿ. ಮಹೇಶ್‌ 

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.