ಮನೆಗೆ ಬರುತ್ತಿದ್ದಾಳೆ ಮುದ್ದುಲಕ್ಷ್ಮೀ
Team Udayavani, Jan 20, 2018, 3:35 PM IST
ಗುಣಕ್ಕಿಂತ ಸೌಂದರ್ಯಕ್ಕೆ ಬೆಲೆ ಕೊಡುವ ಈ ಕಾಲದಲ್ಲಿ, ಬೆಳ್ಳಗಾಗಲು ಯುವಪೀಳಿಗೆ ಏನೆಲ್ಲಾ ಕಸರತ್ತು ನಡೆಸುತ್ತಿದೆ. ಇಂಥವರ ನಡುವೆ ತನ್ನ ಬಣ್ಣವನ್ನು ಹೆಮ್ಮೆಯಿಂದ ಸ್ವೀಕರಿಸಿರುವ ಕೃಷ್ಣಸುಂದರಿಯೊಬ್ಬಳ ಕುರಿತಾದ ಹೊಸ ಧಾರಾವಾಹಿ “ಮುದ್ದುಲಕ್ಷ್ಮೀ’ ತೆರೆ ಕಾಣುತ್ತಿದೆ. ಈ ಧಾರಾವಾಹಿಯ ನಾಯಕಿಯೇ ಮುದ್ದುಲಕ್ಷ್ಮೀ.
ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು ಮಲತಾಯಿ ಮತ್ತು ಮಲತಂಗಿಯರ ನಡುವೆ ಬೆಳೆಯುತ್ತಿರುವ ಮುದ್ದುಲಕ್ಷ್ಮೀ ಬದುಕಿನ ಸಂಕಷ್ಟಗಳನ್ನು ಮೀರುವ ಕಥೆ ಧಾರಾವಾಹಿಯದ್ದು. ಸಾಮಾಜಿಕ ಸಂಘರ್ಷದ ಕುರಿತು ಬೆಳಕು ಚೆಲ್ಲುವ ಮುದ್ದುಲಕ್ಷ್ಮೀ ಪಾತ್ರದಲ್ಲಿ ಅಶ್ವಿನಿ ನಟಿಸುತ್ತಿದ್ದಾರೆ. ಉಳಿದಂತೆ ವಾಣಿಶ್ರೀ, ಮೈಕೋ ಶಿವು, ಅನು ಪೂವಮ್ಮ ಮುಂತಾದವರು ಅಭಿನಯಿಸುತ್ತಿದ್ದಾರೆ. ಧರಣಿ ಜಿ. ರಮೇಶ್ ಅವರು ಧಾರಾವಹಿಯ ನಿರ್ದೇಶಕರು.
ಚಾನೆಲ್: ಸ್ಟಾರ್ ಸುವರ್ಣ
ಯಾವಾಗ?: ಜನವರಿ 22 ರಿಂದ, ಪ್ರತಿ ಸೋಮ- ಶನಿ, ಸಂಜೆ 7.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ