ಪುತಿನ ಕಾವ್ಯ ನಮನ
Team Udayavani, Nov 23, 2019, 5:01 AM IST
ಡಾ. ಪು.ತಿ.ನ ಟ್ರಸ್ಟ್ ವತಿಯಿಂದ ಪು.ತಿ.ನರಸಿಂಹಾಚಾರ್ ಅವರಿಗೆ ಕಾವ್ಯ ನಮನ ಹಮ್ಮಿಕೊಳ್ಳಲಾಗಿದೆ. ಹಿರಿಯ ಕವಿ ಹಾಗೂ ಟ್ರಸ್ಟ್ನ ಅಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಜಯಂತ ಕಾಯ್ಕಿಣಿ, ಡಾ.ಮುಡ್ನಾಕೂಡು ಚಿನ್ನಸ್ವಾಮಿ, ಪ್ರೊ.ಎಂ.ಆರ್. ಕಮಲ, ಜ.ನಾ. ತೇಜಶ್ರೀ, ಕಾವ್ಯ ನಮನ ಸಲ್ಲಿಸುವರು. ಇದೇ ವೇಳೆ, ಪುತಿನ ಕವಿತೆಗಳನ್ನು ಕುರಿತ ಪ್ರೊ. ಎಂ.ಆರ್. ಕಮಲ ಅವರ ಲೇಖನಗಳ “ಕೊಳದ ಮೇಲಿನ ಗಾಳಿ’ ಪುಸ್ತಕ ಬಿಡುಗಡೆಗೊಳ್ಳಲಿದೆ.
ಎಲ್ಲಿ?: ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ
ಯಾವಾಗ?: ನ. 23, ಶನಿವಾರ ಬೆಳಗ್ಗೆ 10