ಫೇಸ್‌ಬುಕ್‌ ದಾನಿಗಳ ಉತ್ಸವ!


Team Udayavani, Oct 6, 2018, 2:55 PM IST

1-dfbfdf.jpg

ಲೈಕ್‌, ಕಾಮೆಂಟುಗಳಷ್ಟೇ ಫೇಸ್‌ಬುಕ್‌ ಅಲ್ಲ. ನಗುವಿನ ಮೂಲಕ ಮಾನವೀಯ ಪರಿಮಳವನ್ನು ಪಸರಿಸುವ ಪುಟ್ಟ ಪ್ರಪಂಚವೊಂದು ಅಲ್ಲಿದೆ. “ಶೇರ್‌ ಎ ಸ್ಮೈಲ್‌ ‘ ಎಂಬ ತಂಡವು ಹಾಗೆ ನಗುತ್ತಲೇ, ಫೇಸ್‌ಬುಕ್‌ ದಾನಿಗಳು ಹಂಚಿದ ವಸ್ತುಗಳನ್ನು “ದಾನ್‌ ಉತ್ಸವ್‌’ ಎಂಬ ಹೆಸರಿನಲ್ಲಿ ಅಸಹಾಯಕರಿಗೆ ಮುಟ್ಟಿಸುತ್ತಿದೆ!

  “ಶೇರ್‌ ಎ ಸ್ಮೈಲ್‌ ‘! ಇದು ಫೇಸ್‌ಬುಕ್‌ ಮೂಲಕ ಪರಿಚಯವಾದ ಸಹೃದಯರ ಗುಂಪು. 2016ರಿಂದ ಈ ತಂಡ, ತನ್ನದೇ ರೀತಿಯಲ್ಲಿ ನಗುವನ್ನು ಪಸರಿಸುವ ಕೈಂಕರ್ಯದಲ್ಲಿದೆ. ಈ ತಂಡದ ರೂವಾರಿ, ಸಮೀರ್‌ ಹಸನ್‌ ವೃತ್ತಿಯಲ್ಲಿ ಎಂಜಿನಿಯರ್‌. ಇತರ ಯುವಕರಂತೆ ಸಮೀರ್‌, ವೀಕೆಂಡ್‌ಗಳನ್ನು ಮೋಜು- ಮಸ್ತಿಯಲ್ಲಿ ಕಳೆಯುತ್ತಿರಲಿಲ್ಲ. ರಜೆ ಬಂದರೆ ಸಾಕು, ಅನಾಥಾಶ್ರಮ, ಕ್ಯಾನ್ಸರ್‌ ಸೆಂಟರ್‌, ವೃದ್ಧಾಶ್ರಮಗಳಿಗೆ ಹೋಗಿ, ಅಲ್ಲಿನವರೊಂದಿಗೆ ಸಮಯ ಕಳೆಯುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮ ವೀಕೆಂಡ್‌ ದಿನಚರಿಯನ್ನು ಎಫ್ಬಿಯಲ್ಲಿ ಹಂಚಿಕೊಳ್ಳುತ್ತಿದ್ದರು. ಅದನ್ನು ನೋಡಿ ಪ್ರೇರಿತರಾದ ಕೆಲವರು ಇವರ ಜೊತೆಗೆ ಸೇರಿಕೊಂಡರು. ಹಾಗೆ ಶುರುವಾಗಿದ್ದೇ “ಶೇರ್‌ ಎ ಸೆ¾„ಲ್‌’ ತಂಡ. ಸದ್ಯ ಬೆಂಗಳೂರಿನಲ್ಲಿ 65 ಸದಸ್ಯರಿದ್ದರೆ, ಇವರಿಂದ ಪ್ರೇರಣೆ ಪಡೆದ ಮತ್ತಷ್ಟು ಮಂದಿ, ಪುಣೆ, ಹೈದರಾಬಾದ್‌, ಕೋಲ್ಕತ್ತಾ, ದೆಹಲಿಯಲ್ಲಿಯೂ ಖುಷಿ ಹಂಚುವ ಕೆಲಸ ಮಾಡುತ್ತಿದ್ದಾರೆ. 

ದಾನ್‌ ಉತ್ಸವ್‌
ದಸರಾ, ದೀಪಾವಳಿ,ರಂಜಾನ್‌ನಂತೆಯೇ ದೇಶಾದ್ಯಂತ, ಅಕ್ಟೋಬರ್‌ 2-8ರವರೆಗೆ “ದಾನ ಉತ್ಸವ’ ಆಚರಿಸಲಾಗುತ್ತದೆ. ಈ ಮೊದಲು ಚಾಲ್ತಿಯಲ್ಲಿದ್ದ “ಜಾಯ್‌ ಆಫ್ ಗಿವಿಂಗ್‌ ವೀಕ್‌’ಗೆ ಎನ್‌ಜಿಓಗಳು, ಕಾರ್ಪೋರೇಟ್‌ ಕಂಪನಿಗಳು ಅಭೂತಪೂರ್ವವಾಗಿ ಬೆಂಬಲಿಸಿದ ಮೇಲೆ, ಅದರ ಮುಂದುವರಿದ ಭಾಗವಾಗಿ “#ದಾನ್‌ ಉತ್ಸವ್‌’ ಆರಂಭಿಸಲಾಗಿದೆ. ಕಳೆದ 10 ವರ್ಷಗಳಿಂದ ಲಕ್ಷಾಂತರ ಜನ ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. “ಶೇರ್‌ ಎ ಸೆ¾„ಲ್‌’ ತಂಡವೂ ಈ ಉತ್ಸವದಲ್ಲಿ ಭಾಗಿಯಾಗಿದೆ.

1 ತಿಂಗಳ ದಿನಸಿ, ಬಟ್ಟೆ ವಿತರಣೆ
ಸಮೀರ್‌ ಮತ್ತು ತಂಡ, ಜೆ.ಪಿ.ನಗರದ 7ನೇ ಫೇಸ್‌ನಲ್ಲಿ ವಾಸವಾಗಿರೋ ಸುಮಾರು 40 ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವ ಅಡುಗೆ ಸಾಮಗ್ರಿ, ಹೊಸ ಬಟ್ಟೆ, ಬೆಡ್‌ಶೀಟ್‌, ಸ್ಯಾನಿಟರಿ ಪ್ಯಾಡ್‌ಗಳನ್ನು ದಾನವಾಗಿ ನೀಡುತ್ತಿದೆ. ಈ ಎಲ್ಲವೂ ಸಾಮಗ್ರಿಗಳನ್ನು ಫೇಸ್‌ಬುಕ್‌ ದಾನಿಗಳಿಂದ ಸಂಗ್ರಹಿಸಲಾಗಿದೆ. ದಾನ್‌ ಉತ್ಸವದ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಾಗ, ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿತು. ಸಮೀರ್‌ ಮನೆಯ ವಿಳಾಸಕ್ಕೆ ಆನ್‌ಲೈನ್‌ ಮೂಲಕ ವಸ್ತುಗಳನ್ನು ಕಳುಹಿಸಿದರು. ಈ ವಸ್ತುಗಳನ್ನು ಕಾರ್ಮಿಕ ಕುಟುಂಬಕ್ಕೆ ಹಸ್ತಾಂತರಿಸುವ ಹಾಗೂ ದಾನಿಗಳಿಗೆ ಧನ್ಯವಾದ ಹೇಳಲು ಈ ಕಾರ್ಯಕ್ರಮ ನಡೆಯುತ್ತಿದೆ.

ನಾವು ಯಾರಿಂದಲೂ ನೇರವಾಗಿ ಹಣ ಪಡೆಯುವುದಿಲ್ಲ. ದಾನಿಗಳಿಂದ ಸಂಗ್ರಹವಾದ ವಸ್ತುಗಳನ್ನು ನಾವು ಖುದ್ದಾಗಿ ಹೋಗಿ ಅಶಕ್ತರಿಗೆ ನೀಡಿ, ಅವರೊಂದಿಗೆ ಸಮಯ ಕಳೆದು ಬರುತ್ತೇವೆ. ಯಾರಿಗೆ ತಲುಪಿಸಿದ್ದೇವೆ ಎಂದು ಮಾಹಿತಿಯನ್ನು ದಾನಿಗಳಿಗೆ ತಿಳಿಸುತ್ತೇವೆ. 
– ಸಮೀರ್‌ ಹಸನ್‌, “ಶೇರ್‌ ಎ ಸ್ಮೈಲ್‌’ ರೂವಾರಿ

ಎಲ್ಲಿ?: ಅ.6, ಶನಿವಾರ ಬೆಳಗ್ಗೆ 10-12
ಯಾವಾಗ?: ಕೀರ್ತಿ ಕನ್ವೆನ್ಷನ್‌ ಹಾಲ್‌, ನಂ.16/23, ಕೊತೂ°ರು ದಿಣ್ಣೆ ಮುಖ್ಯರಸ್ತೆ, ಜೆ.ಪಿ.ನಗರ 8ನೇ ಫೇಸ್‌

ಪ್ರಿಯಾಂಕ
 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.