ಕೀಟನಾಶಕ ಬಳಸದೇ ನೊಣ ನಿಯಂತ್ರಣ


Team Udayavani, Nov 12, 2018, 4:00 AM IST

keetanashaka.jpg

ಜಾನುವಾರು ಸಾಕಣೆ ಕೇಂದ್ರದಲ್ಲಿ ಕಾಣಸಿಗುವ ಮೊದಲು ಶತ್ರುವೆಂದರೆ ನೋಣ. ಮನುಷ್ಯನನ್ನು ಹಲವು ಬಗೆಯಲ್ಲಿ ಕಾಡುವ ಈ ಕ್ರಿಮಿ, ಪ್ರಾಣಿಗಳಿಗೆ ಬಗೆ ಬಗೆಯ ಕಾಯಿಲೆಗಳನ್ನು ತಂದೊಡ್ಡಬಲ್ಲದು. ಇಂಥ ಅಪಾಯಕಾರಿ ನೊಣಗಳನ್ನು ನಾಶ ಮಾಡಲು ಇದೀಗ ಹೊಸದೊಂದು ಮಾದರಿಯ ಬಲೆ ಹೆಣೆಯಲಾಗಿದೆ…

ಕೋಳಿ, ಕುರಿ, ಮೊಲ, ಹಸು, ಹಂದಿ ಸಾಕಣೆ ಘಟಕಗಳಲ್ಲಿ ನೊಣಗಳ ಹಾವಳಿ ವಿಪರೀತ. ಇವುಗಳನ್ನು ನಿಯಂತ್ರಿಸದಿದ್ದರೆ ಕೆಲವೇ ದಿನಗಳಲ್ಲಿ 60ಕ್ಕೂ ಹೆಚ್ಚು ರೋಗಗಳು ಪಸರಿಸುವ ಅಪಾಯಗಳು ಉಂಟು. ನೊಣಗಳು ಮನುಷ್ಯರ ಆರೋಗ್ಯವನ್ನು ಬಾಧಿಸುವಂತೆ ಜಾನುವಾರುಗಳ ಆರೋಗ್ಯಸ್ಥಿತಿಗೂ ಧಕ್ಕೆ ತರುತ್ತವೆ. ಹೈನುಸಾಕಣೆ ಕೇಂದ್ರಗಳಲ್ಲಿ ಹಾಲಿಗೆ ರೋಗಾಣುಗಳು ಬಾಧಿಸದಂತೆ ನೋಡಿಕೊಳ್ಳುವ ಅಗತ್ಯವಿರುತ್ತದೆ.

ಇಂಥ ನಿರ್ವಹಣಾ ಕ್ರಮಗಳಿಗೂ ನೊಣಗಳು ಅಡ್ಡಿಯುಂಟು ಮಾಡುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ನೊಣಗಳ ತೀವ್ರಬಾಧೆಯಿಂದಲೇ ಸಾಕಷ್ಟು ಕೋಳಿಸಾಕಣೆ ಘಟಕಗಳು ಮುಚ್ಚಲ್ಪಟ್ಟಿವೆ ಎಂದರೆ ಆಶ್ಚರ್ಯವಾಗಬಹುದು. ಸಾಮಾನ್ಯವಾಗಿ  ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ, ಕುರಿ, ಹಸು, ಹಂದಿ ಸಾಕಣೆ ಘಟಕಗಳನ್ನು ನಡೆಸುವವರು ರೈತಾಪಿ ಹಿನ್ನೆಲೆಯಿಂದಲೇ ಬಂದವರಾಗಿರುತ್ತಾರೆ.

ಘಟಕಗಳನ್ನು ಆರಂಭಿಸಲು ಸಾಕಷ್ಟು ಸಾಲ ಮಾಡಿರುತ್ತಾರೆ. ಅತ್ತ ಕೃಷಿಯೂ ಲಾಭದಾಯಕವಾಗದೇ, ಇತ್ತ ಆರಂಭಿಸಿದ್ದ ಘಟಕವೂ ಮುಚ್ಚುವ ಸ್ಥಿತಿಗೆ ಬಂದರೆ, ಅವರಿಗೆಲ್ಲ ಗಾಯದ ಮೇಲೆ ಬರೆ ಎಳೆದಂಥಾಗುತ್ತದೆ. ಇಂಥ ಪರಿಸ್ಥಿತಿಗಳಿಂದ ಪಾರಾಗ ಬೇಕು ಅನ್ನುವವರು, ಘಟಕಗಳ ಸ್ವತ್ಛತೆ ಕಡೆ ತೀವ್ರ ಗಮನ ನೀಡಬೇಕಾಗುತ್ತದೆ. ನೊಣಗಳನ್ನು ನಿಯಂತ್ರಿಸಲು ಕೀಟನಾಶಕಗಳಳನ್ನು ಸಿಂಪಡಿಸಲಾಗುತ್ತದೆ.

ಆದರೆ ಇದು ಪರಿಣಾಮಕಾರಿಯಲ್ಲ. ಹೀಗೆ ಮಾಡುವುದರಿಂದ ಸುತ್ತಲಿನ ಪರಿಸರಕ್ಕೂ, ಬೆಳೆಗಳಿಗೂ ಹಾನಿಯುಂಟಾಗುತ್ತದೆ. ಮೇಲ್ಮಟ್ಟದಲ್ಲಿರುವ ಜಲದ ಜೊತೆಗೆ ಅಂತರ್ಜಲವೂ ಕಲುಷಿತವಾಗುತ್ತದೆ. ಆದ್ದರಿಂದ ಇಂಥ ನಕರಾತ್ಮಕ ಪರಿಣಾಮಗಳು ಉಂಟಾಗದಂತೆ ನೊಣಗಳನ್ನು ನಿಯಂತ್ರಿಸಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಬ್ಯಾರಿಕ್ಸ್‌ ಕೃಷಿ ಸಂಶೋಧನಾ ಕೇಂದ್ರವು ಜೈವಿಕ ಮಾದರಿಯ ನೊಣಗಳ ಬಲೆ ನಿರ್ಮಾಣ ಮಾಡಿದೆ.

ಇದು ಸಾಂಪ್ರದಾಯಿಕ ಮಾದರಿಯ ಬಲೆಯಲ್ಲ. ಮೂರು ಪ್ರತ್ಯೇಕ ಬಿಡಿಭಾಗಗಳನ್ನು ಜೋಡಿಸಿರುವ ಪುಟ್ಟ ಬಾಕ್ಸ್‌ ಮಾದರಿಯಲ್ಲಿ  ಇರುವ ಬಲೆ. ಇದನ್ನು ಹೌಸ್‌ ಫ್ಲೈ ಡೊಮೊ ಟ್ರ್ಯಾಪ್‌ ಎಂದು ಕರೆಯಲಾಗುತ್ತದೆ. ಇದರ ನಿರ್ವಹಣೆ ಅತೀ ಸರಳ. ಖರ್ಚೂ ಕಡಿಮೆ. ಕೈರೊ ಲ್ಯೂರ್‌ ಪೌಚ್‌ಕಟ್ ಮಾಡಿ ಅದರಲ್ಲಿರುವ ಪೌಡರ್‌ ಅನ್ನು ಬೇಸ್‌ ಬೌಲ್ಗೆ ನೀರಿನೊಂದಿಗೆ ಹಾಕಬೇಕು. ಇದನ್ನು ಕಲಕಿದ ನಂತರ ಬೌಲ್ ಮೇಲೆ ಕೋನ್‌ಫಿಕ್ಸ್‌ ಮಾಡಬೇಕು.

ಇದರ ರೀಮ್ ಸುತ್ತಲೂ ಫೆರೊ ಲ್ಯೂರ್‌ ಹಚ್ಚಬೇಕು. ನಂತರ ಕೋನ್‌ ಮೇಲೆ ಪಾರದರ್ಶಕ ಬಾಕ್ಸ್‌ ಹಾಕಿದರೆ ನೊಣಗಳ ಬಲೆ ಸಿದ್ಧ. ಈ ಬಲೆಯಲ್ಲಿರುವ ಕೈರೊ, ಲ್ಯೂರ್‌ ಮತ್ತು ಫೆರೊ ಲ್ಯೂರ್‌ ಸೂಸುವ ವಾಸನೆಗೆ ನೊಣಗಳು ಆಕರ್ಷಿತವಾಗುತ್ತವೆ. ಬೇಸ್‌ಬೌಲ…ನಲ್ಲಿರುವ ದೊಡ್ಡ ರಂಧ್ರಗಳ ಮೂಲಕ ಒಳಪ್ರವೇಶಿಸಿ ಫೆರೋ ಲ್ಯೂರ್‌ ಹಚ್ಚಿದ ಕೋನ್‌ ಭಾಗಕ್ಕೆ ಬರುತ್ತವೆ.

ನಂತರ ಇವುಗಳು ಆಚೆ ಹೋಗಲು ಸಾಧ್ಯವೇ ಇಲ್ಲದಂತೆ ಬಲೆಯನ್ನು ವಿನ್ಯಾಸ ಮಾಡಲಾಗಿದೆ. ಒಂದೆರಡೇ ದಿನಗಳಲ್ಲಿ ಬಲೆಯೊಳಗೆ ಅಪಾರ ಸಂಖ್ಯೆಯ ನೊಣಗಳು ಬಂಧಿಯಾಗುತ್ತವೆ. ನಂತರ ಬಲೆಯ ಕ್ಯಾಪ್‌ ತೆಗೆದು ಸತ್ತ ನೊಣಗಳನ್ನು ಹೊರಚೆಲ್ಲಿ ಅದರ ಮೇಲೆ ಮಣ್ಣು ಮುಚ್ಚಬೇಕು. ನಂತರ ಬಲೆಯ ಭಾಗಗಳನ್ನು ನೀರಿನಿಂದ ತೊಳೆದು ಲ್ಯೂರ್‌ಗಳನ್ನು ಹಾಕಬೇಕು. ಇದರಿಂದ ಮತ್ತೆ ನೊಣಗಳನ್ನು ಆಕರ್ಷಿಸುವ ಬಲೆ ಸಿದ್ಧವಾಗುತ್ತದೆ.

ಪರಿಸರಕ್ಕೆ ಹಾನಿಕಾರಕವಲ್ಲದ, ಸುಲಭ, ಸರಳ ರೀತಿಯ, ಕಡಿಮೆ ವೆಚ್ಚದ್ದಾದ ಇಂಥ ಬಲೆಯನ್ನು ಬಳಸುವುದರಿಂದ ನೊಣಗಳ ಹಾವಳಿಯನ್ನು ತಡೆಯಬಹುದು. ಆ ಮೂಲಕ, ಕೋಳಿ ಮತ್ತು ಜಾನುವಾರುಗಳ ಸ್ವತ್ಛತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದು. ಜಾನುವಾರುಗಳ ಸಾಕಣೆ ಕೇಂದ್ರದಲ್ಲಿ ಮಾತ್ರವಲ್ಲ; ಸಿದ್ಧ ಆಹಾರ ತಯಾರಿಕಾ ಘಟಕಗಳಲ್ಲಿ, ಬೇಕರಿ, ಹೋಟೆಲ್, ಜ್ಯೂಸ್‌ ತಯಾರಿಕ ಸೆಂಟರುಗಳಲ್ಲಿ, ಆಸ್ಪತ್ರೆಗಳಲ್ಲಿ, ಮನೆಗಳಲ್ಲಿಯೂ ನೊಣ ಹಿಡಿಯುವ ಬಲೆಯನ್ನು ಪರಿಣಾಮಕಾರಿಯಾಗಿ ಬಳಸಬಹುದು.

ಮಾಹಿತಿಗೆ: 98802 52119 

* ಕುಮಾರ ರೈತ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.