ಆಹಾರ”ಪ್ರೇಮಿಗಳ ತಾಜ್‌ ಮಹಲ್‌’;ಅಪ್ಪಟ ಕರಾವಳಿಯ ಸ್ವಾದದ ಹೋಟೆಲ್‌


Team Udayavani, Jan 13, 2020, 5:34 AM IST

hotel-dhanush

ನಾನು ಆಗ್ರಾದ ತಾಜ್‌ ಮಹಲ್‌ ಬಗ್ಗೆ ಬರೀತಾ ಇಲ್ಲ, ಮಂಗಳೂರಿನ ಹೋಟೆಲ್‌ ತಾಜ್‌ ಮಹಲ್‌ ಬಗ್ಗೆ ಬರೀತಾ ಇದ್ದೇನೆ. ನಾಗರೀಕತೆ ಬೆಳೆದಂತೆಲ್ಲಾ ಜನರ ಆಹಾರ ಪದ್ಧತಿಗಳೂ ಬದಲಾಗುತ್ತಿವೆ. ಕೇವಲ ತಮ್ಮ ತಮ್ಮ ಊರಿನ ಪಾರಂಪರಿಕ ತಿನಿಸುಗಳನ್ನು, ಭೋಜನಗಳನ್ನು ಸವಿಯುತ್ತಿದ್ದ ಜನ ಇಂದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿದ್ದಾರೆ. ಥಾಯ್‌, ಚೈನೀಸ್‌, ಇಟಾಲಿಯನ್‌ ಹೀಗೆ ಹತ್ತು ಹಲವು ದೇಶದ ಆಹಾರಗಳು ಭಾರತಕ್ಕೆ ಕಾಲಿಟ್ಟು, ಈ ಫಾಸ್ಟ್‌ ಫ‌ುಡ್‌, ರೆಡಿಮೇಡ್‌ ಫ‌ುಡ್‌ಗಳ ಸೋಗಿನಲ್ಲಿ ನಮ್ಮ ನೆಲದ ಅದೆಷ್ಟೋ ಸಾಂಪ್ರದಾಯಿಕ ಅಡುಗೆಗಳು ಕಣ್ಮರೆಯಾಗುತ್ತಿರುವುದು ವಿಪರ್ಯಾಸ.
ಹೀಗಿರುವಾಗ, ಯಾರಾದರೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಅಡುಗೆ ಮಾಡಿ ಉಣಬಡಿಸುತ್ತಾರೆ ಎಂದರೆ ಅದೇನೋ ಆನಂದ. ಉತ್ತರ ಕರ್ನಾಟಕದ ಸಜ್ಜೆ ರೊಟ್ಟಿ, ಮಲೆನಾಡ ಪತ್ರೊಡೆ, ಕುಂದಾಪುರದ ನೀರ್‌ ದೋಸೆ- ಮೀನ್‌ ಗಸಿ , ಮಂಡ್ಯದ ಉಪ್ಪೆಸರು- ಮುದ್ದೆ… ಹೀಗೆ… ಇಂಥ ತಿನಿಸುಗಳು ನಮ್ಮ ಸಂಸ್ಕೃತಿಯ, ಸದಾಚಾರದ ಪ್ರತೀಕ ಮಾತ್ರವಲ್ಲ, ಸ್ಥಳದ ಹವಾಮಾನಕ್ಕೆ ಅನುಗುಣವಾಗಿ ರೂಪುಗೊಂಡಿರುವ ತಿನಿಸುಗಳು.

ಹಳೆಯ ಸೊಗಡು ಮಾಸಿಲ್ಲ
ಸಾಂಪ್ರದಾಯಿಕ ಅಡುಗೆಗಳನ್ನು ಜನರಿಗೆ ನೀಡುತ್ತಿರುವುದು, ಕೆಲವೇ ಕೆಲವು ಬೆರಳೆಣಿಕೆಯಷ್ಟು ಹೋಟೆಲ್‌ಗ‌ಳು, ಬಹುತೇಕ ಹೋಟೆಲ್‌ಗ‌ಳು ಮಾಡ್ರನೈಸ್‌ ಆಗುತ್ತಾ ದೇಸೀ ಸೊಗಡನ್ನು ಕಳೆದುಕೊಳ್ಳುತ್ತಾ ಬಂದಿವೆ. ಆದರೆ ಇಂತಹ ಪರಂಪರೆಯನ್ನು ಇನ್ನೂ ಉಳಿಸಿಕೊಂಡು ಬಂದಿರುವುದು ಮಂಗಳೂರಿನ ತಾಜ್‌ಮಹಲ್‌ ಹೋಟೆಲ್‌. ಮಂಗಳೂರಿನಲ್ಲಿ ಬಹುಶಃ ಈ ಹೋಟೆಲ್‌ನ ಪರಿಚಯ ಇಲ್ಲದವರು ಸಿಗಲಿಕ್ಕಿಲ್ಲ.
ತಾಜ್‌ಮಹಲ್‌ ಹೋಟೆಲ್‌ ಎಂದರೆ ಹಳೆ ಗೆಳೆಯರನ್ನು ಭೇಟಿಯಾಗುವ ನೆನಪು, ಮುಂಜಾನೆ ಐದಕ್ಕೇ ಕಾರ್‌ಸ್ಟ್ರೀಟ್‌ನಲ್ಲಿ ಅವರ ಅತ್ಯಂತ ರುಚಿಕರವಾದ ಕಾಫಿ ಕುಡಿಯುತ್ತಿದ್ದ ನೆನಪು. ಕುಡಿ³ ಶ್ರೀನಿವಾಸ್‌ ಶೆಣೈ ಅವರು ಮಂಗಳೂರಿನ ನೆಹರು ಮೈದಾನದಲ್ಲಿ ಪ್ರಾರಂಭಿಸಿದ ತಾಜ್‌ಮಹಲ್‌, ಕಾರ್‌ಸ್ಟ್ರೀಟಿಗೆ ಬಂದು, ಸದ್ಯ ಕೊಡಿಯಾಲ್‌ಬೈಲಿನಲ್ಲಿದ್ದು, ಮೂರನೇ ತಲೆಮಾರಿನ ಗಣೇಶ್‌ ಶೆಣೈ ಮತ್ತು ಅವರ ದೊಡ್ಡಪ್ಪ ಜಗದೀಶ್‌ ಶೆಣೈ ಇವರ ಸಾರಥ್ಯದಲ್ಲಿ ನಡೆಯುತ್ತಿದೆ.

ಬಿಸ್ಕೆಟ್‌ ರೊಟ್ಟಿ, ಕೊಟ್ಟೆ ಕಡುಬು ರುಚಿ
ಪೂರಿಯಂತೆ ಇದ್ದು ಸ್ವಲ್ಪ ನಾಲಗೆಗೆ ಖಾರ ತಾಗಿಸುವ ತೀಖ್‌ ರೊಟ್ಟಿ, ಮಂಗಳೂರಿನ ಬಿಸಿ ಬಿಸಿ ರೊಟ್ಟಿ, ಇದು ಬನ್ಸ್‌ ಥರ ಇದ್ದರೂ ಒಳಗೊಂದಷ್ಟು ಹೂರಣವಿದ್ದು ಇದಕ್ಕೆ ಯಾಕೆ ಬಿಸ್ಕೆಟ್‌ ರೊಟ್ಟಿ ಎನ್ನುತ್ತಾರೆ. ಬನ್ಸ್‌, ತೆಳುವಾಗಿ ಸ್ವಲ್ಪ ಕೆಂಪಗೆ ರೋಸ್ಟಾದ ತುಪ್ಪದ ದೋಸೆ, ಮೂರು ತಲೆಮಾರಿನಿಂದ ಬಂದ ಸ್ಪೆಷಾಲಿಟಿ ಬಿಸ್ಕೆಟ್‌ ಎಂಬ ಸೀಕ್ರೆಟ್‌ ಮಾತ್ರ ತಲೆಮಾರುಗಳ ಹಿಂದೆಯೇ ಉಳಿದಿದೆ. ಇನ್ನು ಇಡ್ಲಿ ಹಿಟ್ಟನ್ನು ಹಲಸಿನ ಎಲೆಯ ತೊಟ್ಟೆಯಲ್ಲಿ ಹಾಕಿ ಕೊಟ್ಟೆ ಕಡುಬು, ಅಥವಾ ಈಚಲು ಗರಿಯಿಂದ ಮಾಡಿದ ತೊಟ್ಟೆಗೆ ಹಾಕಿ ಬೇಯಿಸಿ ಮೂಡೆ ಮಾಡಿ ಇವರು ತೆಗೆದುಕೊಡುವಾಗ ಬರುವ ಪರಿಮಳ ಬಾಲ್ಯದಲ್ಲಿ ಅಮ್ಮ ಮಾಡುತ್ತಿದ್ದ ಕೊಟ್ಟೆ ಕಡುಬು, ಮೂಡೆಯ ನೆನಪು ಮೂಡಿಸಿ ಬೇರೊಂದು ಲೋಕಕ್ಕೇ ಕರೆದುಕೊಂಡು ಹೋಗುತ್ತದೆ.

ಕೊಂಕಣಿ ಖಾದ್ಯ “ದಾಳಿತೊಯ್‌’ ವಿಶೇಷ
ಹಲಸಿನ ಎಲೆಗಳನ್ನು ಹಂಚಿಕಡ್ಡಿಯಿಂದ ಒಂದಕ್ಕೊಂದು ಹೆಣೆದು ಮಾಡುತ್ತಿದ್ದ ಲೋಟದಂತಹ ಆಕಾರದ ಕೊಟ್ಟೆ, ಕರಾವಳಿಯವರಿಗೆ ಚಿರಪರಿಚಿತ ಮತ್ತು ಅತ್ಯಂತ ಪ್ರಿಯ. ಇದೆಲ್ಲದರ ಜೊತೆಗೆ ಮತ್ತೂಂದು ವಿಶೇಷ ಎಂದರೆ ಬೇಳೆ ಬೇಯಿಸಿ, ಇಂಗು ಹಾಕಿ, ಸಾಸಿವೆ ಕರಿಬೇವಿನ ಒಗ್ಗರಣೆ ನೀಡಿ ಮಾಡುವ ಕೊಂಕಣಿ ವಿಶೇಷ ಖಾದ್ಯ “ದಾಳಿತೊಯ್‌’ (ಇದನ್ನು ಕೊಂಕಣಿಯವರು ತಮ್ಮ ಕುಲದೇವರು ಎಂದು ಕರೆಯುವುದುಂಟು), ಅದೊಂದು ವಿಶಿಷ್ಟ ಸ್ವಾದ. ಇಷ್ಟೆಲ್ಲಾ ಆದ ಮೇಲೆ ಕೊನೆಗೆ ಇವರ ಸ್ಪೆಷಲ್‌ ಕಾಫಿ ಎರಡೂ ಅತ್ಯಂತ ಸ್ವಾದಭರಿತವಾಗಿದ್ದ ಬಾಲ್ಯದ ನೆನಪೂ ಅದರೊಂದಿಗಿದೆ. ಇನ್ನು ಬಾಯಿ ಸಿಹಿ ಮಾಡಲು ಅನೇಕ ಸಿಹಿ ತಿಂಡಿಗಳಿದ್ದರೂ ಇಲ್ಲಿ ತಯಾರಿಸುವ ಗೋಧಿ ಹಲ್ವಾ ಕೊಡುವ ಖುಷಿಯೇ ಬೇರೆ.

ಹೋಟೆಲ್‌ ಸಮಯ:
ಬೆಳಗ್ಗೆ 5 ರಿಂದ ರಾತ್ರಿ 10 ಗಂಟೆಯವರೆಗೆ. ಭಾನುವಾರವೂ ತೆರೆದಿರುತ್ತದೆ.

ಹೋಟೆಲ್‌ ವಿಳಾಸ:
ತಾಜ್‌ಮಹಲ್‌ ಹೋಟೆಲ್‌, ರೈಲ್ವೇ ಸ್ಟೇಷನ್‌ ರಸ್ತೆ, ವೆನ್‌ಲಾಕ್‌ ಆಸ್ಪತ್ರೆ ಎದುರು, ಹಂಪನಕಟ್ಟೆ, ಮೆಗಳೂರು

– ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.