ಆಸೆ ಪಟ್ಟು ಕೊಂಡ ಪ್ಯಾಂಟು ಬಣ್ಣ ಬಿಟ್ಟಿತು…


Team Udayavani, Oct 16, 2017, 11:03 AM IST

jeans.jpg

ಒಂದು ವರ್ಷದ ಹಿಂದೆ ನಡೆದಿರುವ ಘಟನೆ. ನನ್ನಲ್ಲಿ 3 ಜೀನ್ಸ್‌ ಪ್ಯಾಂಟ್‌ ಮಾತ್ರ ಇದ್ದವು. ಬಟ್ಟೆ ಒಗೆದು ಒಣ ಹಾಕುವಾಗ ಅದರಲ್ಲಿ ಒಂದು ಜೀನ್ಸ್‌ ಪ್ಯಾಂಟ್‌ ನ್ಯಾಲೆಯ ತಂತಿಗೆ ತಾಗಿ, ವಿಕಾರ ರೂಪ ತಾಳಿ ಹರಿದು ಹೋಯಿತು. ಹೀಗಾಗಿ ಇನ್ನೊಂದು ಜೀನ್ಸ್‌ ಖರೀದಿಸುವುದು ಅನಿವಾರ್ಯವೂ ಆಯಿತು. ತಿಂಗಳ ಕೊನೆಯಾಗಿರುವುದರಿಂದ ಕೈಯಲ್ಲಿ ಹಣವೂ ಇರಲಿಲ್ಲ.

ಮಧ್ಯಮ ವರ್ಗದ ಪಾಡೇ ಹೀಗಲ್ವೇ?
ಇನ್ನೇನು ಮಾಡೋದು ಅಂಥ ರೂಮ್‌ಮೇಟ್‌ ಹತ್ತಿರ ಸಾಲ ತೆಗೆದುಕೊಂಡು ಹನುಮಂತ ನಗರದ ಒಂದು ಶೋ ರೂಮ್‌ಗೆ ಹೋದೆ. ಮೊದಲ ನೋಟಕ್ಕೇ ಅದರಲ್ಲಿದ್ದ ಕೆಲವು ಜೀನ್ಸ್‌ಗಳು ಇಷ್ಟವಾಗಿಬಿಟ್ಟವು. ಬಿಟ್ಟೂ ಬಿಡಲಾರದೆ ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡೆ.  ಎಲ್ಲ ಶಾಪಿಂಗ್‌ ಮುಗಿದ ಮೇಲೆ 2000 ರೂ. ಬಿಲ್‌ ಪಾವತಿಸಿದೆ. ಬಟ್ಟೆ ಖರೀದಿಯಿಂದ ಮನಸ್ಸಿಗೆ ಏನೋ ಖುಷಿ. ಮತ್ತೆ ಮತ್ತೆ ಪ್ಯಾಂಟನ್ನು ನೋಡುತ್ತಿದ್ದೆ. ವಿಚಿತ್ರವಾದ ಆಕರ್ಷಣೆ ಅದರ ಮೇಲೆ.  

ಹಾಗೇ  2 ಬಾರಿ ಆಫೀಸ್‌ಗೂ ಹಾಕಿಕೊಂಡು ಬಂದೆ. ಮಾರನೇ ದಿನ ವೀಕ್‌ ಆಫ್. ಇನ್ನೇನು ಮಾಡುವುದು? ಬಟ್ಟೆ ಒಗೆಯುವ ಕಾಯಕ ಶುರುವಾಯಿತು.ಎಲ್ಲ ಬಟ್ಟೆಗಳ ಜೊತೆ ಈ ಪ್ಯಾಂಟನ್ನೂ ಒಗೆದು ಒಣ ಹಾಕಿದೆ.  ಸಂಜೆ ಪ್ಯಾಂಟನ್ನು ತರಲು ಹೋದರೆ ಶಾಕ್‌ ಕಾದಿತ್ತು. ನನ್ನ ಪ್ರೀತಿಯ ಜೀನ್ಸ್‌ ಪ್ಯಾಂಟ್‌ಗೆ ಅಲ್ಲಲ್ಲಿ ಬಿಳಿ ಬಣ್ಣದ ಚಿಟ್ಟು ಬಿದ್ದಿತ್ತು. ಏನೋ ಮನಸ್ಸಿಗೆ ಆಘಾತ, ಕೋಪ, ಹತಾಶೆ ಭಾವನೆ.

ಏನು ಮಾಡೋದು?
ಅಂಗಡಿಗೆ ವಾಪಸು ಕೋಡೋಣ ಅಂದರೆ ಸಮಯ ಮೀರಿದೆ. ಅಂಗಡಿಗೆ ಹೋಗಿ ಜಗಳ ಮಾಡೋಣ ಅಂದುಕೊಂಡೆ. ಒಂದು ಪಕ್ಷ ಅಲ್ಲಿಗೆ  ತೆಗೆದುಕೊಂಡು ಹೋದರೂ, “ಏನ್ರೀ, ನಿಮಗೆ ಹೇಳಿಲ್ವಾ, ನಾಲ್ಕೈದು ದಿನದಲ್ಲಿ ಎಕ್ಸ್‌ಚೇಂಜ್‌ ಮಾಡಿಸಿಕೊಳ್ಳಿ’ ಅಂತ ಅನ್ನೋ ಬೈಗುಳ ಕೇಳಬೇಕು. ಅದಕ್ಕಿಂತ ಸುಮ್ಮನೆ ಇರೋದೇ ವಾಸಿ ಅಂತ ಪಿಗ್ಗಿ ಬಿದ್ದು ತೆಪ್ಪಗಾದೆ. 

* ವಸಂತ ಇಟಗಿ, ಹನುಮಂತ ನಗರ

ಟಾಪ್ ನ್ಯೂಸ್

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.